ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗುರುಮಿಟಕಲ್ ಪಟ್ಟಣದ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ರಕ್ಷಣಾ ಆಯೋಗ ಸದಸ್ಯರ ಭೇಟಿ:ಪರಿಶೀಲನೆ

ಯಾದಗಿರಿ:ಗುರುಮಿಟಕಲ್ ಪಟ್ಟಣದ ಲಕ್ಷ್ಮೀ ನಗರ,ಗಂಗಾನಗರ,ಗಡ್ಡಿ ಮಹಲ್ಲಾ ಅಂಗನವಾಡಿ ಕೇಂದ್ರಗಳಿಗೆ ರಾಜ್ಯ ಮಕ್ಕಳ ಆಯೋಗದ ಸದಸ್ಯರಾದ ಶ್ರೀ ಶಶಿಧರ್ ಕೋಸುಂಬೆ ಅವರು ಭೇಟಿ ನೀಡಿ,ಸ್ವಚ್ಛತೆ,ಮೊಟ್ಟೆ ವಿವಿರ,ಆಹಾರ ಕುರಿತು ಪರಿಶೀಲಿಸಿದರು.
ಅಂಗನವಾಡಿ ಕೇಂದ್ರಗಳ ಸುತ್ತಮುತ್ತ ಚರಂಡಿ, ಮುಳ್ಳು ಜಾಲಿ ಕಂಟಿ ಇದ್ದು,ಮಕ್ಕಳ ಸುರಕ್ಷತೆಗೆ ಸ್ವಚ್ಛವಿಡಲು ತಿಳಿಸಿದ ಅವರು,ಅಂಗನವಾಡಿಗಳಲ್ಲಿ ಪೆನ್ಸಿಲ್ ನಿಂದ ದಾಖಲಾತಿಗಳು ಬರೆಯುತ್ತಿರುವುದು,ದಾಖಲಾತಿಗಳು ಮನೆಯಲ್ಲಿ ಇಡುವುದು ಸೂಕ್ತ ಕ್ರಮವಲ್ಲ ಎಂದರು.
ಅಂಗನವಾಡಿಗಳಿಗೆ 40-50 ಗ್ರಾಂ ತೂಕದ ಮೊಟ್ಟೆ ವಿತರಣೆ ಮಾಡಬೇಕು,ಆದರೆ ಇಲ್ಲಿಯ ಮೊಟ್ಟೆಗಳು 25-30 ಗ್ರಾಂ ಇವೆ ಜೊತೆಗೆ ಕಳೆದ ತಿಂಗಳು ಮೊಟ್ಟೆಗಳ ಉಳಿತಾಯ ತೋರಿಸಿದ್ದು,ಮುಂದಿನ ತಿಂಗಳು ನಮೂದಿಸಿಲ್ಲ,ಕಳೆದ 50 ದಿನಗಳ ಆಹಾರ ಸರಬರಾಜು ಆಗಿರುವ ಧಾನ್ಯಗಳ ಸ್ಟಾಕ್ ರೇಜಿಸ್ಟರ್ ನಲ್ಲಿ ಏರುಪೇರು ಕಂಡುಬಂದ ಹಿನ್ನಲೆ ಸ್ಥಳದಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆ ಕುರಿತು ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗುವಂತೆ ಅವರು ಸೂಚಿಸಿದರು.
ನಗರದ ಕ್ರೀಡಾಂಗಣದ ಕ್ರೀಡಾ ವಸತಿ ನಿಲಯ, ಯಾದಗಿರಿ ತಾಲ್ಲೂಕಿನ ಅರಕೇರಾದ ಕಸ್ತೂರ ಬಾ ವಸತಿ ಶಾಲೆ,ಗಂಜನೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ,ಗುರುಮಿಟಕಲ್ ಸಮುದಾಯ ಆರೋಗ್ಯ ಕೇಂದ್ರ,ಗುರುಮಿಟಕಲ್ ತಾಲ್ಲೂಕಿನ ಬಾಲಚೇಡ್ ಎಪಿಜೆ ಅಬ್ದುಲ್ ಕಲಾಂ ಮಾದರಿ ವಸತಿ ಶಾಲೆ,ಅಲ್ಲಿಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ವರದಿ:ಶಿವರಾಜ ಸಾಹುಕಾರ ವಡಗೇರಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ