ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕನ್ನಡೋತ್ಸವ ಕಾರ್ಯಕ್ರಮ
ಕನ್ನಡ ದಿನ ಪತ್ರಿಕೆ ಅಭ್ಯಾಸ ಜೀವನಕ್ಕೆ ದಾರಿ ದೀಪ ಬಸವರಾಜ್ ಬೆಣ್ಣೆ

ವಿಜಯನಗರ:[ಕೊಟ್ಟೂರು ತಾಲೂಕು]ಕನ್ನಡ ಭಾಷೆ ಎನ್ನುವುದು ಅತ್ಯಂತ ಶ್ರೀಮಂತ ಭಾಷೆ ಇದನ್ನು ಬಳಸದೇ ಇದ್ದರೆ ಬೆಳೆಯುವುದಿಲ್ಲ ಒಂದು ವೇಳೆ ಪ್ರಪಂಚದಾದ್ಯಂತ ಪ್ರಚುರ ಪಡಿಸಿದ್ದೇ ಆದರೆ 15 ನೊಬೆಲ್ ಪ್ರಶಸ್ತಿ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬಸವರಾಜ್ ಬೆಣ್ಣೆ ರವರು ಕನ್ನಡೋತ್ಸವ ಕಾರ್ಯಕ್ರಮದಲ್ಲಿ ಹೇಳಿದರು.
ಕೊಟ್ಟೂರು ಪಟ್ಟಣದಲ್ಲಿ ಕೊಟ್ಟೂರೇಶ್ವರ ಮಹಾವಿದ್ಯಾಲಯದ ರಾಜ್ ಭವನದಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ವಿಶೇಷ ಚಿಂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮ ಕುರಿತು ಮಾತನಾಡಿ ವಿದ್ಯಾರ್ಥಿಗಳು ಪ್ರತಿ ದಿನ ಕನ್ನಡ ದಿನ ಪತ್ರಿಕೆ ಓದುವುದರಿಂದ ಜೀವನಕ್ಕೆ ದಾರಿ ದೀಪ ಕಂಡುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ
ಇಡೀ ಪ್ರಪಂಚದಲ್ಲಿ ಮಾತನಾಡಿದನ್ನು ಓದಬಹುದು ಓದಿದನ್ನು ಮಾತನಾಡುವ ಭಾಷೆ ಇದ್ದರೆ ಅದು ಕನ್ನಡ ಭಾಷೆ ಮಾತ್ರ ಮತ್ತು ಅತೀ ಹೆಚ್ಚು ಸಂತೋಷವನ್ನುಂಟು ಮಾಡುವ ಭಾಷೆ ಕನ್ನಡ ಭಾಷೆ ಮಾತ್ರ ಕನ್ನಡ ಭಾಷೆಯನ್ನು ಕುರಿತು ಸವಿವಿಸ್ತಾರವಾಗಿ ಪ್ರಸ್ತುತ ಪಡಿಸಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೊಟ್ಟೂರೇಶ್ವರ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠರವರು ನಮ್ಮ ಭಾಷೆ ಸುಮಾರು 3 ಸಾವಿರ ವರ್ಷ ಇತಿಹಾಸ ಇರುವ ಭಾಷೆಯಾಗಿದೆ ಆದರೆ ಇಂಗ್ಲಿಷ್ ಭಾಷೆ ಕೆಲ ವರ್ಷಗಳ ಹಿಂದೆ ಹುಟ್ಟಿಕೊಂಡಿರುವ ಭಾಷೆ ಇದನ್ನು ಹೆಚ್ಚು ಬಳಸುವುದರಿಂದ ಗೌರವ ದೊರೆಯುತ್ತದೆ ಎನ್ನುವ ಮನೋಭಾವನೆ ಹೊಂದಿದ್ದಾರೆ ಅಷ್ಟೇ ನಮ್ಮ ಭಾಷೆ,ನುಡಿ,ಇತಿಹಾಸ ತಿಳಿದುಕೊಂಡವರು ಇದನ್ನು ಹೆಚ್ಚು ಗೌರವದಿಂದ ಕಾಣುತ್ತಾರೆ ಇದರಿಂದಾಗಿ ಕನ್ನಡ ನಾಡು ನುಡಿಯ ಬಗ್ಗೆ ಗೌರವ ಹೊಂದಿರಬೇಕು ಮತ್ತು ನಮ್ಮ ಭಾಷೆಗೆ ಧಕ್ಕೆ ಬಂದರೆ ಹೋರಾಟಕ್ಕೆ ಸದಾ ಸಿದ್ದರಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶಾಂತ ಮೂರ್ತಿ ಕುಲಕರ್ಣಿ ಕಾಲೇಜ್ ಆಡಳಿತ ಸದಸ್ಯರಾದ ಅಡಕಿ ಮಂಜುನಾಥ ಅವಂತಿ ಬಸವರಾಜ್,ಮಂಜುನಾಥ ಮಠಪತಿ, ಮೃತ್ಯುಂಜಯ,ಕೊಟ್ರಗೌಡರು,ಕೃಷ್ಣಪ್ಪ,ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಕುಸುಮ ಸರ್ಜನ್ ಸ್ವಾಗತಿಸಿ, ವಿಜಯಲಕ್ಷ್ಮಿ ವಂದಿಸಿದರು ಹಾಗೂ ಪ್ರಕಾಶ್ ಜೈನ್ ರವರ ತಂಡದಿಂದ ಸಂಗೀತ ಕಾರ್ಯಕ್ರಮವನ್ನು ನೆರವೇರಿಸಲಾಯಿತು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ