ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಕ್ತಿ ಯೋಜನೆಯ ಪ್ರಭಾವ:ಬಸ್ಸಿನಲ್ಲಿ ಪ್ರಯಾಣಿಸುವವರು ಮನುಷ್ಯರೋ..?ಏನು ನಿರ್ಜೀವಿ ವಸ್ತುಗಳೋ..?!

ಹೌದು ಇದು ಕಂಡು ಬಂದಿದ್ದು ಕಲಬುರಗಿಯಿಂದ ಧರ್ಮಸ್ಥಳಕ್ಕೆ ಹೊರಟಿರುವ ಕಲಬುರಗಿಯ ಡಿಪೋ ನಂಬರ್ ೨ರ ಬಸ್ ಸಂಖ್ಯೆ ಕೆಎ ೩೨ ಎಫ್ ೨೫೭೯ ಬಸ್ ನಲ್ಲಿ ಇಂದು ಪ್ರಯಾಣಿಸುತ್ತಿರುವಾಗ ಬಸ್ಸಿನಲ್ಲಿ ದೂರದ ಪ್ರಯಾಣ ಮಾಡುವವರು ಹಾಗೂ ಲೋಕಲ್ ಪ್ರಯಾಣಿಕರು ಇರುವುದು ಸಹಜ ಆದರೆ ಬಸ್ ನಲ್ಲಿ ಪ್ರಯಾಣಕ್ಕೆ ಸೂಕ್ತವಾದ ಆಸನಗಳನ್ನು ಮೀರಿ ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸಲು ಅವಕಾಶ ನೀಡುವುದು ಅದೆಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ ಅದರಲ್ಲೂ ವೃದ್ದರು, ಮಹಿಳೆಯರಿಗಂತೂ ತುಂಬಾ ತೊಂದರೆಯಾಗುವುದಂತೂ ಸಹಜ.ಇಷ್ಟೆಲ್ಲಾ ಮೀರಿಯೂ ಯಾವುದೇ ಬಸ್ ನಲ್ಲಿ ಮೀಸಲಿರುವ ಸೀಟುಗಳಿಗಿಂತಲೂ ಅಧಿಕ ಜನರನ್ನು ತುಂಬಿಸಿಕೊಂಡು ಹೋಗುವುದೆಂದರೆ ಏನು? ಇದನ್ನು ಪ್ರಶ್ನಿಸಿದರೆ ಉಡಾಫೆ ಉತ್ತರ ಕೊಡುವ ಬಸ್ ಕಂಡಕ್ಟರ್ ಹೀಗೆಲ್ಲ ಇದ್ದರೂ ಇದನ್ನು ಸರಿಪಡಿಸದೇ ಇರುವ ಉನ್ನತ ಅಧಿಕಾರಿಗಳು.ಇಷ್ಟೆಲ್ಲಾ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಮಾತ್ರ ಜನಸಾಮಾನ್ಯರು ಹಾಗಾಗಿ ಇದನ್ನು ಆದಷ್ಟು ಬೇಗ ಸರಿಪಡಿಸಬೇಕೆಂದು ಬಸ್ಸಿನಲ್ಲಿ ಪ್ರಯಾಣಿಸುವ ಹೆಸರು ಹೇಳಲಿಚ್ಛಿಸದ ಪ್ರಯಾಣಿಕರೊಬ್ಬರು ತಮ್ಮ ನೋವನ್ನು ನಮ್ಮ ವರದಿಗಾರರೊಂದಿಗೆ ಹಂಚಿಕೊಂಡರು.

-ಕರುನಾಡ ಕಂದ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ