ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

206 ನೆಯ ಭೀಮಾ ಕೋರೆಗಂವ್ ವಿಜಯೋತ್ಸವ ಆಚರಣೆ

ಭೀಮಾ ಕೊರೆಗಂವ್ ಅಂದ್ರೇ ಎನು, ಮತ್ತು ಇದರ ಇತಿಹಾಸ ಎಷ್ಟೋ ಜನಕ್ಕೆ, ಭೀಮಾ ತಿಳಿದಿಲ್ಲಾ, 01/01/1818 ಸಾಲಿನಲ್ಲಿ 28,000 ಪೇಶ್ವೆಗಳನ್ನ ಕೇವಲ 500 ಜನ ಮಹಾರ್ ಸೈನಿಕರು ಯುದ್ದ ಮಾಡಿ ವಿಜಯ್ ಸಾಧಿಸಿದ ದಿನವೇ ಭೀಮಾ ಕೋರೆಗಂವ್.

ಗದಗ ಜಿಲ್ಲೆ ನರಗುಂದ ತಾಲೂಕಿನ ರಡ್ಡೇರನಾಗನೂರ ಗ್ರಾಮದಲ್ಲಿ 206 ನೆಯ ಭೀಮಾ ಕೋರೆಗಂವ್ ವಿಜಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಯೋಜಕರಾದ ಡಾ. ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಸರ್ವ ಸದಸ್ಯರುಗಳು ಭೀಮ ಕೋರೆಗಂವ್ ವಿಜಯೋತ್ಸವದ ನಿಮಿತ್ತವಾಗಿ ಶಾಲಾ ಮಕ್ಕಳಿಗೆ ಪುಸ್ತಕ,ಪೆನ್ನುಗಳನ್ನು ವಿತರಿಸುವುದರ ಮೂಲಕ ಗ್ರಾಮದಲ್ಲಿ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.ಯುದ್ದದಲ್ಲಿ ಭಾಗವಹಿಸಿದ 500 ಮಹಾರ್ ಯೋಧರಿಗೆ ಕೋಟಿ ಕೋಟಿ ನಮನಗಳನ್ನು ಸಲ್ಲಿಸುವದರ ಜೊತೆಗೆ ಅವರ ಆದರ್ಶಗಳನ್ನು ನಾವು ನಮ್ಮ ಮುಂದಿನ ಪೀಳಿಗೆಯವರು ಅನುಸರಿಸಬೇಕೆನ್ನುವುದು ಆಶಯವಾಗಿತ್ತು. ದತ್ತಾತ್ರೇಯ ಜೋಗಣ್ಣವರ,ವಿಜಯಕುಮಾರ ಚಲವಾದಿ,ಗುರುನಾಥ ಕೆಂಗಾರಕರ್,ಬಸವರಾಜ ಜೋಗಣ್ಣವರ,V.M.ಶಾಲ್ದಾರರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕೃಷ್ಣಗೌಡ ಶಿವನಗೌಡ್ರರವರು ಕಾರ್ಯಕ್ರಮದ ನಿರೂಪಣೆ ಮಾಡಿದರು ಕಾರ್ಯಕ್ರಮದಲ್ಲಿ ಶರಣಪ್ಪ ಚಲವಾದಿ (ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ನರಗುಂದ ತಾಲ್ಲೂಕ ಅಧ್ಯಕ್ಷರು),ನಾಗನಗೌಡ ಕಗದಾಳ (ರೈತ ಮುಖಂಡರು),ಗ್ರಾಮ.ಪಂ.ಅಧ್ಯಕ್ಷರು ಮತ್ತು ಸರ್ವ ಸದಸ್ಯರು-ಸಿಬ್ಬಂದಿ ವರ್ಗದವರು,ಗ್ರಾಮದ ಗುರು ಹಿರಿಯರು,ರೈತ ಬಾಂಧವರು,ಯುವಕರು ಮತ್ತು ಶಾಲಾ ಸಿಬ್ಬಂದಿ ಜೊತೆಗೆ ಶಾಲಾ ಮಕ್ಕಳು ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು.

ವರದಿ-ನಾಗರಾಜ ಪ್ರಚಂಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ