ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಭೋವಿ ಸಮಾಜದ ನಾಮ ಫಲಕ ಉದ್ಘಾಟನೆ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಇಬ್ರಾಂಪುರ ಗ್ರಾಮದ ಬೋವಿ ವಡ್ಡರ ಸಮಾಜ ಶಿವಯೋಗಿ ಸಿದ್ರಾಮೇಶ್ವರ ಆಶೀರ್ವಾದದೊಂದಿಗೆ ಜನವರಿ 26ರಂದು ಗ್ರಾಮದಲ್ಲಿ ಭೋವಿ ಸಂಘದ ಫಲಕದ ಉದ್ಘಾಟನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಭೋವಿ ಸಮಾಜದ ಜನಾಂಗದ ದೊಡ್ಡ ಕಾಳಿಂಗ ಅವರ ಮನೆ ಮುಂದೆಯೇ ಸ್ವ-ಇಚ್ಚೆಯಿಂದ ಸ್ವತಃ ತಾವೇ ಭೋವಿ ಜನಾಂಗದ ಸಮಿತಿಯ ಫಲಕವನ್ನ ನಿರ್ಮಿಸಿದರು.
ನಮ್ಮಲ್ಲಿ ಇರುವ ಯುವಕರ ಕೌಶಲಕ್ಕೆ ಗ್ರಾಮದ ನಿರುದ್ಯೋಗ ಸಮಸ್ಯೆ ನಿರ್ಮೂಲನೆ ಸಾಧ್ಯ ಅದಕ್ಕೆ ಭೋವಿ ಸಮಾಜದ ಬುನಾದಿ ಆಗಬೇಕು ಎಂಬ ನಿಟ್ಟಿನಲ್ಲಿ ಗ್ರಾಮದ ಹಿರಿಯರು ಮಹನೀಯರು ಯುವಕರು ಎಲ್ಲರೂ ಸೇರಿ ಭೋವಿ ಜನಾಂಗದ ಸಮಿತಿಯ ಸಂಘದ ಫಲಕ (ಬೋರ್ಡ್) ಅನ್ನು ಪ್ರತಿಷ್ಠಾಪನೆ ಮಾಡಿ ಸ್ಥಳೀಯ ಖಾಸಗಿ ಶಾಲೆ ಆದಂತಹ ಶ್ರೀ ಓಂಕಾರೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅನ್ನದಾಸೋಹವನ್ನು ಏರ್ಪಡಿಸಿದ್ದರು.ಸಮಾಜದಲ್ಲಿ ಈಗಲಾದರೂ ಅವಕಾಶ ವಂಚಿತದಿಂದ ಹಿಂದುಳಿದ ಸಮಾಜವಾಗಿರುವ ಭೋವಿ ಜನಾಂಗಕ್ಕೆ ಆದ್ಯತೆ ದೊರಕಲಿ ಎಂದು ಹಿರಿಯರು,ತಾಲೂಕು ಅಧ್ಯಕ್ಷರಾದ ಗಾಳೆಪ್ಪ ಅವರು ಭೋವಿ ಸಮಾಜದ ಫಲಕದ ಉದ್ಘಾಟನಾ ಕಾರ್ಯಕ್ರಮವನ್ನು ಯಶಸ್ವಿಯಾಗಿಗೊಳಿಸಿದರು.
ಗುರು ಮನೆಯಿಂದ ಅರಮನೆಯವರೆಗೂ ಕಟ್ಟಿಕೊಟ್ಟ ಖ್ಯಾತಿಯು ಭೋವಿ ಸಮಾಜದ್ದು ಇಂತಹ ಸಮಾಜವನ್ನು ಸಾಂಘಿಕ ಶಕ್ತಿಯಾಗಿ ರೂಪಿಸುವ ಮೂಲಕ ಸಮಾಜದ ಸಮಾನ ಹಕ್ಕನ್ನು ಪಡೆಯಬೇಕು ಎಂದು ಅಲ್ಲಿನ ಯುವಕರು ಸರಳವಾಗಿ ಇಚ್ಛಾಶಕ್ತಿಯಿಂದ ಭೋವಿ ಸಮಾಜದ ಫಲಕದ ಉದ್ಘಾಟನಾ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು
ಈ ಸಂದರ್ಭದಲ್ಲಿ ಎಲ್ಲಾ ಸಮಾಜದ ಮುಖಂಡರು,ಹಿರಿಯರು ಭಾಗವಹಿಸಿ ಪ್ರೋತ್ಸಾಹಿಸಿದರು.

ವರದಿ-ಎಂ ಪವನ್ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ