ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನನ್ನವನೇ…ಕವನ


ಮಳೆ ಬಂದು ನಿಂತಾಗ ಹನಿಗಳ ಜೊತೆಗೂಡಿ
ಮನಸ ಹೂವ ಮೇಲೆ ಜಿನುಗುತಿರುವ
ನನ್ನವನೇ
ಆ ಜಾತ್ರೆಯಲಿ ಗದ್ದಲದ ರಾತ್ರಿಯಲಿ
ಮುದ್ದಾದ ಗುರಿಯಿಟ್ಟು ಕಣ್ಣಲ್ಲೇ ಹೊಡೆದವನೇ
ನಾ ಮುಂದೆ ನಡೆವಾಗ ನೀ ಹಿಂದೆ ಬರುವಾಗ
ಕತ್ತಲಲ್ಲೇ ಕೈಬೀಸಿ ನಸುನಕ್ಕು ನಡೆದವನೇ
ಕಣ್ಣ್-ಕಣ್ಣು ಬೆರೆತಾಗ ನಾ ನಿಂತಲ್ಲೇ ನುಲಿದವಳು
ನೀ ದಾರೀಲಿ ನಡೆವಾಗ ನಾ ನಸುನಕ್ಕವಳು
ಊರಾಚೆ ಗುಡಿ ಮುಂದೆ ಕುರಿ ಕಡಿಯುವಾಗ
ದೇವರಿಗೆ ಕೈಮುಗಿದು ನನ್ನ ನೋಡಿ ನಿಂತವನೆ
ಮರುದಿನ ರಾತ್ರಿ ಆರ್ಕೆಸ್ಟ್ರಾದವರಿಗೆ ಹೇಳಿ
ಸಾಲುತಿಲ್ಲವೇ.ಸಾಲುತಿಲ್ಲವೇ…ಹಾಡನ್ನು
ಎರಡು ಬಾರಿ ಹೇಳಿಸಿದ್ದನ್ನ ನಾ ಮರೆಯಲಾರೆ
ನಿಮ್ಮೂರ ಗುಂಪಲ್ಲಿ ಹುಲಿಯಂತೆ ಇರುವವನೇ
ನನ್ನವನೇ
-ರತ್ನಾ,ಹೊನ್ನನಾಯಕನಹಳ್ಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ