ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮುಂಡಗೋಡದಲ್ಲಿ ಖೋಟಾ ನೋಟು ದಂಧೆ

ಮುಂಡಗೋಡದ ವಾರದ ಸಂತೆ ಸೋಮವಾರ. ಈ ಸಂತೆಗೆ ಸುತ್ತಮುತ್ತಲಿನ ಹಳ್ಳಿ ಹಾಗೂ ಸವಣೂರು,
ಶಿಗ್ಗಾವಿ,ತಡಸ ಮುಂತಾದ ಭಾಗಗಳಿಂದ ವ್ಯಾಪಾರಕ್ಕಾಗಿ ವ್ಯಾಪಾರಸ್ಥರು ಬರುತ್ತಾರೆ, ಹಾಗೆಯೇ ಮುಂಡಗೋಡದ ವಾರದ ಸಂತೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ.
ಈರುಳ್ಳಿ, ಟಮೋಟ, ಆಲೂಗಡ್ಡೆ ,ಸೊಪ್ಪು ,ತರಕಾರಿ ಎಲ್ಲಾ ರೀತಿಯ ಮಾರುಕಟ್ಟೆ ಇಲ್ಲಿ ಇರುತ್ತದೆ.ಇದರ ನಡುವೆಯೇ ಸದ್ದಿಲ್ಲದೆ 10 ರೂಪಾಯಿ ಮುಖ ಬೆಲೆಯ ಖೋಟಾ ನೋಟುಗಳ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ.500, 100, 2000 ಸಾವಿರ ಮುಖ ಬೆಲೆಯ ನಕಲಿ ನೋಟುಗಳನ್ನು ತಂದರೆ ಎಲ್ಲಿ ಸಿಕ್ಕಿ
ಬೀಳುತ್ತೇವೆಯೋ ಎಂಬ ಗುಮಾನಿಯಲ್ಲಿ 10 ರೂಪಾಯಿ ಮುಖ ಬೆಲೆಯ ನಕಲಿ ನೋಟುಗಳನ್ನು ಚಲಾವಣೆ ಮಾಡಲಾಗುತ್ತಿದೆ ಹಾಗೂ ಖರೀದಿದಾರರಿಗೆ ಯಾವುದೇ ರೀತಿಯ ಅನುಮಾನಬಾರದು. ಈ 10 ರೂಪಾಯಿ ಮುಖ ಬೆಲೆಯ ನಕಲಿ ನೋಟು ನೋಡಲು ಮೂಲ ನೋಟಗಳಂತೆ ಕಂಡರೂ RBI ನ ಭದ್ರತಾ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದೊಂದು ನಕಲಿ ನೋಟು ಎಂದು ತಿಳಿಯುತ್ತದೆ. ಆದ ಕಾರಣ ಭಾರತೀಯ ಅರ್ಥ ವ್ಯವಸ್ಥೆಗೆ ಕಂಟಕ ವಾಗಿರುವ ಈ ನಕಲಿ ನೋಟು ಜಾಲವನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ ತೊಲಗಿಸಬೇಕು, ಇಲ್ಲವಾದಲ್ಲಿ ಸಾರ್ವಜನಿಕರು ಖೋಟಾ ನೋಟಗಳನ್ನು ಅಸಲಿ ಎಂದು ನಂಬಿ ಮೋಸ ಹೋಗುವ ಸಾದ್ಯತೆ ಇರುವುದರಿಂದ ಆದಷ್ಟು ಬೇಗ ಪೊಲೀಸ್ ಇಲಾಖೆ ಸೂಕ್ಷ್ಮವಾಗಿ ಇದಕ್ಕೆ ಅಂತ್ಯ ಹಾಡಬೇಕಿದೆ.
ಹಾಗೆಯೇ ಸಾರ್ವಜನಿಕರು RBI ನ ನೋಟುಗಳ ಭದ್ರತಾ ಅಂಶಗಳನ್ನು ತಿಳಿದುಕೊಂಡು ಮುಂದೆ ವ್ಯವಹರಿಸುವ ಅಗತ್ಯವಿರುತ್ತದೆ ಮತ್ತು ನೋಟುಗಳ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡುವ ಅಗತ್ಯವಿದೆ
-ಕರುನಾಡ ಕಂದ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ