ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಳಪೆ ಕಾಮಗಾರಿ ವಿರುದ್ದ ಏಕಾಂಗಿ ಹೋರಾಟ:ಮನವಿ, ದೂರು ಯಾವುದಕ್ಕೂ ಕ್ಯಾರೆ ಅನ್ನದ ಪುರಸಭೆ ಮುಖ್ಯಾಧಿಕಾರಿ

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪುರಸಭೆ ವ್ಯಾಪ್ತಿಯ ಎಸ್.ಡಬ್ಲೂ.ಎಂ ಅನುದಾನದಲ್ಲಿ ನಿರ್ಮಾಣವಾದ ಕಾಂಪೌಂಡ್ ವಾಲ್ ಕಾಮಾಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು ಕಾಮಗಾರಿಯ ವಿವರ ಕೋರಿ ಯೋಜನಾ ನಿರ್ದೇಶಕರು ನಗರಾಭಿವೃದ್ಧಿ ಕೋಶ ಕೊಪ್ಪಳ ಇವರಿಗೆ ಆರ್.ಟಿ.ಐ ಹೋರಾಟಗಾರ,ಸ್ಥಳೀಯ ನಿವಾಸಿ ಮುತ್ತುರಾಜ್ ಕಟ್ಟೀಮನಿ ಇವರು
ದೂರು/ಮನವಿಯನ್ನು ನೀಡಿದರೂ ಸಹ ಸ್ಥಳ ತನಿಖೆ ಮಾಡದೆ ಉಡಾಪೆ ಉತ್ತರವನ್ನು ನೀಡಿದ ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿಗಳ ನಡೆಯು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ ಇವರಿಗೆ
ಈ ಬಗ್ಗೆ ದೂರು ಸಲ್ಲಿಸಿದರೂ ಅವರೂ ಕೂಡಾ ಮುಖ್ಯಾಧಿಕಾರಿಗಳಿಗೆ ತನಿಖೆ ಮಾಡಿ ಸೂಕ್ತ ಕ್ರಮ‌ ಕೈಗೊಳ್ಳಿ ಎಂದು ಹಿಂಬರಹ ನೀಡಿದ್ದಾರೆ.ಇದ್ಯಾವದಕ್ಕೂ ಉತ್ತರ ನೀಡದೆ ಮೌನವಹಿಸಿರುವ ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿ ಸದರಿ ಕಾಮಗಾರಿಯು ಎಷ್ಟು ಮೊತ್ತದ ಕಾಮಾಗಾರಿ ಎಂದೂ ಸಹ ನಮೂದು ಮಾಡದೇ ಹಿಂಬರಹ ನೀಡಿದ್ದಾರೆ
ಕಾಮಗಾರಿಯ ಮಾಹಿತಿ ಬಗ್ಗೆ ನೀಡಿದ ಮನವಿ ಪತ್ರ,ಆರ್.ಟಿ.ಐ ಅರ್ಜಿ,ಮೇಲಾಧಿಕಾರಿಗಳ ಆದೇಶಕ್ಕೆ ಯಾವುದೇ ಉತ್ತರ ಇದುವರೆಗೂ ಸಿಕ್ಕಿಲ್ಲ
ಈ ಎಲ್ಲಾ ಅಂಶಗಳು ಈ ಕಾಮಾಗಾರಿಯ ಬಗ್ಗೆ ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಡುತ್ತದೆ.ಕಳಪೆ ಕಾಮಗಾರಿ ನಡೆದ ಬಗ್ಗೆ ಸರಿಯಾದ ಮಾಹಿತಿ ನೀಡದೆ ದಾರಿ ತಪ್ಪಿಸುತ್ತಿರುವ
ಅಧಿಕಾರಿಗಳಾದ ಜೆ.ಇ,ಎಇಇ ಮತ್ತು ಗುತ್ತಿಗೆದಾರ ಇವರಲ್ಲಿ ತಪ್ಪು ಯಾರಿಂದ ನಡೆದಿದೆ ಎಂದು ಮೇಲಾಧಿಕಾರಿಗಳು ತನಿಖೆ ನಡೆಸಿ ಸತ್ಯವನ್ನು ಹೊರಹಾಕಿ ಎಂದು ದೂರುದಾರನಾದ ಶ್ರೀ ಮುತ್ತುರಾಜ್ ಕಟ್ಟಿಮನಿ ಆರೋಪಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ