ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಿವಪುತ್ರ ಜಿ ನೆಲ್ಲಗಿಯವರ ಕವನ ಸಂಕಲನ

ಬದುಕಲು ಕಲಿಸು ಗುರುದೇವ ನಿನ್ನಂತೆ

ರಾಗ ದ್ವೇಷಕೆ ಸಿಲುಕದೆ
ಭೋಗ ಭಾಗ್ಯವ ಬಯಸದೆ
ಕಾಮ ಕ್ರೋಧಕೆ ಸಿಲುಕದೆ
ಲೋಭ ಮೋಹಕೆ ಮನಸೋಲದೆ
ಮಧ ಮತ್ಸರಗಳಿಗೆ ಮಣಿಯದೆ
ಶಾಂತಿ ಸಹನೆಯಿಂದ ಬದುಕಲು
ಕಲಿಸು ಗುರುದೇವ ನಿನ್ನಂತೆ

ಆವ ಜಾತಿ ಮತ ಪಂಥಗಳಿಗಂಟದೆ
ದೇವರನು ಜಡದಲ್ಲಿ ಹುಡುಕದೆ
ಭಾವ ಶುದ್ಧವಿರದೆ ಕಾಯಕವ ಮಾಡದೆ
ಜೀವ ಜಂತುಗಳಲ್ಲಿ ಬೇಧವನು ತೋರದೆ
ಸೇವೆಯಲಿ ಸ್ವಾರ್ಥವನು ಬೆರೆಸದೆ
ಸ್ವಚ್ಚ ಸುಂದರವಾಗಿ ಬದುಕಲು
ಕಲಿಸು ಗುರುದೇವ ನಿನ್ನಂತೆ

ಹಿರಿದು ಕಿರಿದೆಂಬ ತಾರತಮ್ಯವಿಲ್ಲದೆ
ಮೇಲು ಕೀಳು ಎಂಬ ಸಂಕಲ್ಪ ಬಾರದೆ
ಬಡವ ಬಲ್ಲಿದನೆಂಬ ಒಲವು ಸುಳಿಯದೆ
ಹೆಣ್ಣು ಗಂಡೆಂದು ಎರಡನೆಣೆಸದೆ
ಪಂಡಿತ ಪಾಮರನೆಂಬ ಪದರು ಕಾಣದೆ
ಸಮ ಚಿತ್ತದಿಂದ ಬದುಕಲು
ಕಲಿಸು ಗುರುದೇವ ನಿನ್ನಂತೆ

ಮಸಣ ಮಂದಿರ ಶ್ರೇಷ್ಠ ಕನಿಷ್ಠಗಳ ನೆಚ್ಚದೆ
ರಾಹು ಗುಳಿ ಶುಭ ಅಶುಭ ಕಾಲವನರಿಯದೆ
ಪೂರ್ವ ಪಶ್ಚಿಮ ಸ್ವರ್ಗ ನರಕಗಳ ಪರಿವಿರದೆ
ಆರ್ಯ ದ್ರಾವಿಡ ಮೂಲ ವಲಸಿಗರು ಎಂದು ಹೆಸರಿಡದೆ
ಭಾಷೆ ವೇಷ ಗಡಿ ದೇಶಗಳಿಗೆ ನಿಲುಕದೆ
ಮಾನವ ಕುಲ ಒದೆಂದು ಬದುಕಲು
ಕಲಿಸು ಗುರುದೇವ ನಿನ್ನಂತೆ

ಶಿವಪುತ್ರ ಜಿ. ನೆಲ್ಲಗಿ
ಕವಿಗಳು ಜೇವರ್ಗಿ.

ವರದಿ: ಚಂದ್ರಶೇಖರ ಎಸ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ