ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಪ್ತಗಿರಿ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಜೆ.ಇ.ಇ.ಪರೀಕ್ಷೆಯಲ್ಲಿ ಆಲ್ ಇಂಡಿಯಾ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಬೀದರಿನ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಸಪ್ತಗಿರಿ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಜೆ.ಇ.ಇ.ಆಲ್ ಇಂಡಿಯಾ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ದಿನಾಂಕ:01-05-2023 ರಂದು ಸಂಸ್ಥೆಯ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.ಅದರಲ್ಲಿ,ಅಭಿಜೀಕ ತಂದೆ ರವಿ ಆರ್. ಇಂಡಿಯಾ ರ‍್ಯಾಂಕ್‌ 306, ಚಾಮುಂಡೇಶ್ವರಿ ತಂದೆ ಮಲ್ಲಿಕಾರ್ಜುನ, ಆಲ್ ಇಂಡಿಯಾ ರ‍್ಯಾಂಕ್‌ 525, ರಕ್ಷಿತಾ ತಂದೆ ಗಣಪತಿ ಆಲ್ ಇಂಡಿಯಾ ರ‍್ಯಾಂಕ್‌ 607, ರಾಜಶೇಖರ ತಂದೆ ಬಂಡಪ್ಪಾ, ಆಲ್ ಇಂಡಿಯಾ ರ‍್ಯಾಂಕ್‌ 962, ಅಕ್ಷತಾ ತಂದೆ ಭೀಮಗೊಂಡ ಆಲ್ ಇಂಡಿಯಾ ರ‍್ಯಾಂಕ್‌ 981, ಪಲ್ಲವಿ ತಂದೆ ವಿಠಲ ಆಲ್ ಇಂಡಿಯಾ ರ‍್ಯಾಂಕ್‌ 1021, ಅಶ್ವಿನಿ ತಂದ ಮಾಣಿಕ ಆಲ್ ಇಂಡಿಯಾ ರ‍್ಯಾಂಕ್‌ 13571, ಕೃಷ್ಣಾ ತಂದೆ ಅಂಬಾದಾಸ ಆಲ್ ಇಂಡಿಯಾ ರ‍್ಯಾಂಕ್‌ 14211, ಶಿವಾರೆಡ್ಡಿ ತಂದೆ ಗೋಪಾಲರೆಡ್ಡಿ ಆಲ್ ಇಂಡಿಯಾ ರ‍್ಯಾಂಕ್‌ 15017, ನಿತಿಶ್ ತಂದೆ ಚಂದ್ರಕಾಂತ, ಆಲ್ ಇಂಡಿಯಾ ರ‍್ಯಾಂಕ್‌ 15461, ಇವರೆಲ್ಲರೂ ಜೆ.ಇ.ಇ. Mains ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಉತ್ತಮ ರ‍್ಯಾಂಕ್‌ ಪಡೆದು, ಕಾಲೇಜಿಗೆ ಕೀರ್ತಿ ತಂದಿರುತ್ತಾರೆ ಹಾಗೂ ಸಂಗಮೇಶ ತಂದೆ ರಾಜಕುಮಾರ, ಭಾಗ್ಯಶ್ರೀ ತಂದೆ ದಶರಥ, ಐಶ್ವರ್ಯ ತಂದೆ ರಮೇಶ, ವೈಷ್ಣವಿ ತಂದೆ ರಮೇಶ, ಬಸವಾದಿತ್ಯ ತಂದೆ ಗಣಪತಿ, ವಿಜ್ಞೇಶ ತಂದೆ ಅಮರೇಶ, ಸಹನಾ ತಂದೆ ಶಿವರಾಜ, ಶ್ವೇತಾ ತಂದೆ ಭೀಮಶಾ, ಸೈಯದ ಸಹೇಲ್ ತಂದೆ ಸೈಯದ ಇಸ್ಮಾಯಿಲ, ದಿಕ್ಷಿತಾ ತಂದೆ ಶಿವರಾಜ, ಮನಿಷ ತಂದ ಶೇಷಪ್ಪಾ, ಸ್ನೇಹಾ ತಂದೆ ದೇವೆಂದ್ರಪ್ಪಾ, ಮೇಲಿನ ವಿದ್ಯಾರ್ಥಿಗಳು, ಜೆ.ಇ.ಇ. Mains ನಲ್ಲಿ ಅರ್ಹತೆಯನ್ನು ಹೊಂದಿರುತ್ತಾರೆ.

2022-23ನೇ ಸಾಲಿನ ಏಪ್ರಿಲ್‌ನಲ್ಲಿ ನಡೆದ ಪ್ರವೇಶ ಪರೀಕ್ಷೆಗೆ ಐ.ಐ.ಟಿ./ ಎನ್.ಐ.ಟಿ.ಗೆ ಪ್ರವೇಶ ಪಡೆಯಲು ಕೇಂದ್ರ ಸರ್ಕಾರದ ಪ್ರವೇಶ ಪರೀಕ್ಷೆಯಲ್ಲಿ 8 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದಿದ್ದು, ಅದರಲ್ಲಿ ನಮ್ಮ ಕಾಲೇಜಿನಲ್ಲಿ 22 ವಿದ್ಯಾರ್ಥಿಗಳು ಆಯ್ಕೆಯಾಗಿ ಉತ್ತಮ ಸಾಧನೆ ಮಾಡಿ, ಕಾಲೇಜು ಹಾಗೂ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಡಿ. ತಾಂದಳೆ, ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಗೋಪಾಲ ಡಿ. ತಾಂದಳೆ, ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ ಹಾಗೂ ಸಪ್ತಗಿರಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಗೋವಿಂದ ಡಿ. ತಾಂದಳೆ ಕಾಲೇಜಿನ ಹಾಗೂ ಉಪನ್ಯಾಸಕರಾದ ಸಲಾಉದ್ದಿನ, ಬಿರೇಶ ಯಾತನೂರ್, ಅನಿಲ್ ಜಾಧವ್, ಆಸಿಫ್, ಸಾಗರ್ ಪಡಸಾಲೆ, ಚಂದ್ರಕಾಂತ ಝಬಾಡೆ, ಮಾಧವ ತಪಸಾಳೆ, ಸಂತೋಷ ಗಿರಿ, ಮಹೇಶ ಪಾಂಪಡೆ, ಅಕ್ಬರ, ಗಣೇಶ ರೆಡ್ಡಿ, ಏಂಜಲ್ ಅನುಷ, ಪ್ರಾಜಕ್ತಾ, ಅಶ್ವಿನಿ, ಮತ್ತು ಸಿಬ್ಬಂದಿ ವರ್ಗದವರು ಹರ್ಷವ್ಯಕ್ತಪಡಿಸಿ, ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಕಾಲೇಜಿನ ಪರವಾಗಿ ಅಭಿನಂದನೆಗಳು ಸಲ್ಲಿಸಿದ್ದಾರೆ.

ವರದಿ-ಸಾಗರ್ ಪಡಸಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

One Response

Leave a Reply

Your email address will not be published. Required fields are marked *

ಇದನ್ನೂ ಓದಿ