ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಡವರ ಡಾಕ್ಟರ ಕಲ್ಲಪ್ಪ ಉಪ್ಪೆ ನಿಧನ

ಬೀದರ:ಔರಾದ ತಾಲೂಕಿನ ನಿರ್ಗತಿಕ ಬಡವರ ಡಾಕ್ಟರ್ ಎಂದೇ ಪ್ರಸಿದ್ಧರಾಗಿದ್ದ ಡಾ.ಕಲ್ಲಪ್ಪ ಉಪ್ಪೆ ಬುಧವಾರ ಮಧ್ಯಾಹ್ನ 2:10ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದರೆ.

ಇವರು 1975ರಲ್ಲಿ ತಮ್ಮ ಶಿಕ್ಷಣ ವ್ಯಾಸಂಗ MBBS ಮುಗಿಸಿದರು.ಅವರು MBBS ಮುಗಿಸಿದ ಮೇಲೆ ಅವರಿಗೆ ಬಂದಂತ ಸರಕಾರಿ ಹುದ್ದೆ ತ್ಯಜಿಸಿ ಹಿಂದುಳಿದ ತಾಲೂಕಿನ ಜನರ ಅರೋಗ್ಯ ಹೀತ ದೃಷ್ಟಿಯಿಂದ ಅವರು ಔರಾದ ಪಟ್ಟಣದಲ್ಲಿ ಆಸ್ಪತ್ರೆ ತೆರೆದು ಬಡವರ ಸೇವೆ ಪ್ರಾರಂಭಿಸಿದರು.

ತಾಲೂಕಿನಲ್ಲಿ ವೈದ್ಯರಿಲ್ಲದ ಅಂದಿನ ಕಾಲದಲ್ಲಿ ಜನಸಾಮಾನ್ಯರಿಗೆ ವೈದ್ಯಕೀಯ ಸೌಲಭ್ಯ ದೊರಯಬೇಕೆಂಬ ಏಕೈಕ ಉದೇಶದಿಂದ ಜೀವನ ಪೂರ್ತಿ ಔರಾದ ಪಟ್ಟಣದಲ್ಲಿ ನೆಲೆಸಿ ನಗು ನಗುತಲೆ ರೋಗಿಗಳ ಆರೋಗ್ಯ ಗುಣಮುಖ ಮಾಡಿದರು.

ಮೃತರು ಇಬ್ಬರು ಸಹೋದರಿಯರು, ಮೂವರು ಸಹೋದರರು, ಒಬ್ಬ ಪುತ್ರ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಗುರುವಾರ ಮಧ್ಯಾಹ್ನ 1 ಗಂಟೆಗೆ ಖಂಡೆಕೇರಿ ರಸ್ತೆಯಲ್ಲಿರುವ ಅವರ ಸ್ವಂತ ಜಮೀನಿನಲ್ಲಿ ನೇರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವರದಿ:ಅಮರ ಮುಕ್ತೆದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ