ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪ್ರಾಚಾರ್ಯರು ಮತ್ತು ಉಪನ್ಯಾಸಕರಿಗೆ ‘ಜ್ಞಾನ ರತ್ನ’ ಪ್ರಶಸ್ತಿಯ ಗರಿ

ಬೀದರ್:ನಗರದ ಲಾವಣ್ಯ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಟರಿ ಕ್ಲಬ್ ಬೀದರ ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಲಾಯಿತು ಜಗತ್ತಿನ ಅತಿದೊಡ್ಡ ಸಂಸ್ಥೆಯಾದ ರೋಟರಿ ಕ್ಲಬ್ ಸೇವೆಯೇ ಮೊದಲ ಮತ್ತು ಕೊನೆಯ ಧ್ಯೇಯವಾಗಿಟ್ಟುಕೊಂಡು ಶತಮಾನ ಪೂರೈಸಿದೆ ಮನುಕುಲದ ಏಳಿಗೆಗಾಗಿ ಹುಟ್ಟಿದ ಈ ಸಂಸ್ಥೆ ಶಿಕ್ಷಣ, ಆರೋಗ್ಯ,ಪರಿಸರ, ಮಹಿಳಾ ಸಬಲೀಕರಣ,ಮಕ್ಕಳ ಅಭಿವೃದ್ಧಿ, ನಾಡ-ನುಡಿ,ಸೇರಿದಂತೆ ನೂರಾರು ಜನ ಹಿತಕಾರ್ಯ ಮಾಡುತ್ತಿದ್ದು ರೋಟರಿ ಕ್ಲಬ್ ನ ಮೂಲ ಆಶಯದಂತೆ ಶಿಕ್ಷಕರಿಗೆ ಗೌರವ ಸನ್ಮಾನ,ಪ್ರತಿಭಾವಂತ ವಿದ್ಯರ್ಥಿಗಳಿಗೆ ಪುರಸ್ಕಾರ,ನಿರ್ಗತಿಕರಿಗೆ ಹೊಲಿಗೆ ಯಂತ್ರ,ಪ್ರೋತ್ಸಾಹಧನ,ರಕ್ತದಾನ ಶಿಬಿರ,ಶೌಚಾಲಯ ನಿರ್ಮಾಣ,ನೆರೆ ಪರಿಹಾರ,ಕೊವಿಡ್ ಒಳಗಾದವರಿಗೆ ಆಕ್ಸಿಜನ್ ಸಾಂದ್ರಕ ಪೂರೈಕೆ,ಬಡವರಿಗೆ ಆಹಾರ ಕಿಟ್ ವಿತರಣೆ ಹೀಗೆ ಹಲವಾರು ಸಮಾಜಮುಖಿ ಕಾರ್ಯ ಮಾಡುತಿದ್ದು,ದಿನಾಂಕ 22ನೇ ಜುಲೈ 2023 ರಂದು ಗುರುದ್ವಾರ ಹತ್ತಿರದ ಲಾವಣ್ಯ ಕಲ್ಯಾಣ ಮಂಟಪದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಸಪ್ತಗಿರಿ ಪಿ.ಯು.ಕಾಲೇಜಿನ ಇಂಗ್ಲೀಷ್ ಉಪನ್ಯಾಸಕರಾದ ಸಾಗರ್ ಪಡಸಲೆ,ಅವರಿಗೂ ಆರ್. ಆರ್.ಕೆ. ಪಿ.ಯು. ಕಾಲೇಜಿನ ಉಪನ್ಯಾಸಕರಾದ ಬಂಡೆಪ್ಪ ಬಿರಾದರ,ಶ್ರೀ ದತ್ತಾಗಿರಿ ಮಹಾರಾಜ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ರೂಪಾ ಜೋಷಿ, ಸ್ವಾಮಿ ನರೇಂದ್ರ ಪಿ.ಯು.ಕಾಲೇಜಿನ ಉಪನ್ಯಾಸಕರಾದ ಸುಭಾಷ ಮಾಹಾಗಾಂವಕರ್, ಪನ್ನಾಲಾಲ ಹೀರಾಲಾಲ ಪಿ.ಯು. ಕಾಲೇಜಿನ ಉಪನ್ಯಾಸಕರಾದ ಹೊಮಾಪತಿ,ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಚನ್ನಬಸವ ಹೆಡೆ ಮತ್ತು ಇತರ ಕಾಲೇಜಿನ ಉಪನ್ಯಾಸಕರು ಮತ್ತು ಪ್ರಾಶುಪಾಲರಿಗೆ ಬೀದರ್ ನ ದಕ್ಷೀಣ ವಿಧಾನಸಭಾ ಶಾಸಕರಾದ ಡಾ|| ಶೈಲೇಂದ್ರ ಬೆಲ್ದಾಳೆ ಯವರಿಂದ ‘ಜ್ಞಾನ ರತ್ನ’ಪ್ರಶಸ್ತಿ ಪತ್ರದ ಜೊತೆಗೆ 12ನೇ ಶತಮಾನದ ಬಸವಕಲ್ಯಾಣದಲ್ಲಿ ಸ್ಥಾಪಿಸಲ್ಪಟ್ಟ ಅನುಭವ ಮಂಟಪದ ಚಿತ್ರವನ್ನು ನಿಡಿ ಗೌರವ ಸನ್ಮಾನ ಮಾಡಲಾಯಿತು ಮತ್ತು
ಅತಿ ಹೆಚ್ಚು ಅಂಕ ಪಡೆದು ಮನೆಗೆ ಮತ್ತು ಸಪ್ತಗಿರಿ ವಿಜ್ಞಾನ ಪಿ.ಯು.ಕಾಲೇಜಿಗೆ ಕೀರ್ತಿತಂದಿರುವ ಸಂಗಮೇಶ/ರಾಜಕುಮಾರ,ರಕ್ಷಿತಾ ಕಾಳಗಿ/ಗಣಪತಿ ಕಾಳಗಿ,ಶ್ರೀ ದತ್ತಗಿರಿ ಮಹಾರಾಜ ಕಾಲೇಜಿನ ವಿದ್ಯಾರ್ಥಿನಿಯಾದ ಸಂಧ್ಯಾರಾಣಿ,ಶ್ರೀ ಸ್ವಾಮಿ ನರೇಂದ್ರ ಪಿ.ಯು.ಕಾಲೇಜಿನ ವಿದ್ಯಾರ್ಥಿನಿಯಾದ ಸುವರ್ತಾ ರಾಜಕುಮಾರ,ವಿದ್ಯಾಶ್ರೀ ಸಂಸ್ಥೆಯ ವಿದ್ಯಾರ್ಥಿನಿಯಾದ ನಾಗೇಶ್ವರಿ ಆರ್ ಮತ್ತು ಇತರ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಸುರೇಶ ಚನ್ನಶೆಟ್ಟಿ ಅಧ್ಯಕ್ಷರು ಜೀಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೀದರ್ ಮತ್ತು ಪದಾಧಿಕಾರಿಗಳು,ರೋಟರಿ ಕ್ಲಬ್ ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇನ್ನರ್ ವ್ಹಿಲ್ ಕ್ಲಬ್ ಬೀದರ ಅಧ್ಯಕ್ಷರು,ಪದಾಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.
ವರದಿ-ಸಾಗರ್ ಪಡಸಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ