ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸ್ವಂತ ಖರ್ಚಿನಲ್ಲಿ ಕೈಲಾಸ ಭೂಮಿ ನಿರ್ಮಿಸಿದ ಚಿಟ್ಟೂರು ರಾಮಬಾಬು ಅವರ ಕಾರ್ಯ ಶ್ಲಾಘನೀಯ:ಮಂಜುನಾಥ ಬಡಿಗೇರ

ಸಿಂಧನೂರು ನಗರದ ಉಪ್ಪಾರವಾಡಿ ರಸ್ತೆಯ ಹಳ್ಳದ ಹತ್ತಿರ ಚಿಟ್ಟೂರಿ ರಾಮಬಾಬು ಅವರು ಸಾಮಾಜಿಕ ಕಳಕಳಿಯಿಂದ ಹಿಂದೂ ಸಮುದಾಯಗಳಿಗೆ ದಹನದ ಅಂತ್ಯಕ್ರಿಯೆ ಮಾಡಲು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ಸಿ.ಎಸ್.ಆರ್.ಫೌಂಡೇಶನ್ ಕೈಲಾಸ ಭೂಮಿ (ರುದ್ರಭೂಮಿ)ಗೆ ವಿಶ್ವಕರ್ಮ ಸಮಾಜದ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಅದ್ಯಕ್ಷರಾದ ಮಂಜುನಾಥ ಬಡಿಗೇರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಮಂಜುನಾಥ ಬಡಿಗೇರ ಮಾತನಾಡಿ ಚಿಟ್ಟೂರಿ ರಾಮಬಾಬು ಅವರು ಹಲವಾರು ಸಮಾಜಿಕ ಕಾರ್ಯಗಳ ಮೂಲಕ ಜನರ ಮನಸ್ಸಿನಲ್ಲಿರುವವರು.ಇವರು ಪರಿಸರ ಪ್ರೇಮಿಗಳಾಗಿ ಸಿಂಧನೂರಿನ ಹಲವಡೆ ಸಸಿಗಳನ್ನು ನೆಟ್ಟಿದ್ದಾರೆ,ಶಿಕ್ಷಣ ಮತ್ತು ಸಾಮಾಜಿಕ ಸೇವೆಗಳನ್ನು ಮಾಡಿದ್ದಾರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಿಂಧನೂರು ನಗರದಲ್ಲಿ ಸ್ವಂತ ರುದ್ರಭೂಮಿ ಹೊಂದಿರದ ಹಾಗೂ ಅತ್ಯಂತ ಹಿಂದುಳಿದಿರುವ ಸಮಾಜಗಳಿಗೆ ಎಲ್ಲಾ ಹಿಂದೂ ಸಮುದಾಯಗಳಿಗೆ ಅಂತ್ಯ ಸಂಸ್ಕಾರ ದಹನಕ್ರಿಯೆ ಮಾಡಲು ಸಿ.ಎಸ್.ಆರ್.ಫೌಂಡೇಶನ್ ಮೂಲಕ ಕೈಲಾಸ ಭೂಮಿ ಹೆಸರಿನ ರುದ್ರಭೂಮಿಯನ್ನು ಸ್ವಂತ ಖರ್ಚಿನಲ್ಲಿ ನಿರ್ಮಿಸಿ ಅತ್ಯಂತ ಹಿಂದುಳಿದ ಸಮಾಜಗಳಿಗೆ ಹಾಗೂ ನಮ್ಮ ವಿಶ್ವಕರ್ಮ ಸಮಾಜಕ್ಕೂ ದಹನದ ಅಂತ್ಯಕ್ರಿಯೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ತುಂಬಾ ಶ್ಲಾಘನೀಯ ಇದು ಎಲ್ಲಾ ಹಿಂದುಳಿದ ಸಮುದಾಯಗಳಿಗೆ ಬಹಳ ಉಪಯುಕ್ತವಾಗಿದೆ ಚಿಟ್ಟೂರು ರಾಮಬಾಬು ಅವರಿಗೆ ಅವರಿಗೆ ವಿಶ್ವಕರ್ಮ ಸಮಾಜದ ವತಿಯಿಂದ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಚಿಟ್ಟೂರು ರಾಮಬಾಬು,ವಿಶ್ವಕರ್ಮ ಸಮಾಜದ ತಾಲೂಕ ಸದಸ್ಯರಾದ ಗಂಗಾಧರ ಪೇಂಟರ್,ಉಪೇಂದ್ರ ಆಚಾರಿ ಹಾಗೂ ಇನ್ನೂ ಹಲವಾರು ಜನರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ