ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯ

ಪೊನ್ನಾಚಿ ಗ್ರಾಮಕ್ಕೂ ಹರಡಿದ ಹಸುಗಳ ಚರ್ಮ ಗಂಟು ರೋಗ

ಚಾಮರಾಜನಗರ:ಗೇರಟ್ಟಿ ಗ್ರಾಮದ ಸದಾಶಿವಪ್ಪ ಎಂಬುವವರ ಹಸುವಿನ ಕಾಲು ಊದಿಕೊಂಡು ಚರ್ಮ ಗಂಟು ಬಂದಿರುವುದು ಗ್ರಾಮಸ್ಥರಿಗೆ ಆತಂಕ ಉಂಟು ಮಾಡಿದೆ ಮೊದಲು ಪಕ್ಕದ ಗ್ರಾಮ ಕಕ್ಕೇಹೊಲದ ತಂಗವೇಲು ಎಂಬವವರ ಹಸುಗಳಿಗೆ ಬಂದ ಈ ರೋಗ ಒಂದು

Read More »

ಹನೂರು ತಾಲ್ಲೂಕು ಕೇಂದ್ರದಲ್ಲಿ ಕರ್ನಾಟಕ ಪತ್ರಕರ್ತರ ಸಂಘ (ರಿ.) ಅಸ್ತಿತ್ವ

ಹನೂರು : ಹನೂರು ಪಟ್ಟಣದ ಮೈರಾಡ ಕಚೇರಿಯಲ್ಲಿ ಶನಿವಾರದಂದು ಸಮಾನ ಮನಸ್ಕ ಪತ್ರಕರ್ತರು ಸಭೆ ಸೇರಿದ್ದರು.ಆ ಸಭೆಯಲ್ಲಿ ಮೊದಲು ಕರ್ನಾಟಕ ಪತ್ರಕರ್ತರ ಸಂಘಕ್ಕೆ ಸದಸ್ಯತ್ವವನ್ನು ಪಡೆದು ನಂತರ ಸಂಘದ ದ್ಯೆಯೋದ್ದೇಶ ಹಾಗೂ ಸಂಘದ ಚಟುವಟಿಕೆಗಳ

Read More »

ಕೆ.ಬಿ.ಜೆ.ಎನ್.ಎಲ್ ಕಳಪೆ ಕಾಮಗಾರಿಯ ಕರ್ಮಕಾಂಡ

ಯಾದಗಿರಿ:ಸುರಪುರ ತಾಲೂಕಿನ ಕೆಂಭಾವಿ ಪಟ್ಟಣ ಯಾಳಗಿ ಗ್ರಾಮದ ಸಿಸಿ ಲೈನ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ . ಸರ್ಕಾರದಿಂದ ಮಂಜೂರಾದ ಹಣ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಗುತ್ತಿಗೆದಾರರ ಮತ್ತು ಅಧಿಕಾರಿಗಳು ಸಿಸಿ

Read More »

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ

ಬೆಳಗಾವಿ:Rcu University BELAGAVI ಅಧ್ಯಾಪಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿಯವರೆಗೆ ಮುಷ್ಕರ ಮುಂದುವರಿಯಲಿದೆ ಮೌಲ್ಯಮಾಪನ ಕಾರ್ಯ ವಿಳಂಬದಿಂದಾಗಿ ಅಂತಿಮ ವರ್ಷದ ಪದವಿ ವಿಧ್ಯರ್ಥಿಗಳ ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಡಚಣೆ ಉಂಟಾಗುವ ಲಕ್ಷಣಗಳು ಕಂಡುಬರುತ್ತಿವೆ

Read More »

ಶರಣ ಸಾಹಿತಿ ಡಾ.ಸೋಮನಾಥ ಯಾಳವರ ರವರಿಗೆ ಗೌರವ ಸನ್ಮಾನ

ಹುಮನಾಬಾದ:ಸಮಾನತೆ ಸಾರಿದ ಭಾವೈಕ್ಯತೆಯ ಪವಿತ್ರ ಭೂಮಿ ಬಸವಕಲ್ಯಾಣದ ವಿಶ್ವ ಬಸವ ಧರ್ಮ ಟ್ರಸ್ಟ್ ಮತ್ತು ಅನುಭವ ಮಂಟಪದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ೪೩ ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ಆಚರಣೆ ಸಮಾರಂಭದಲ್ಲಿ

Read More »

ರೈತರು ಆರ್ಥಿಕ ಅಭಿವೃದ್ಧಿಗೆ ಎಫ್‌ಪಿಒ ಸಹಕಾರಿ: ಜಿಪಂ ಸಿಇಒ

ಕಾರಟಗಿ: ಎಫ್‌ಪಿಒಗಳ ಮೂಲಕ ರೈತರು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಿದ್ದು, ರೈತ ಉತ್ಪಾದಕ ಕಂಪನಿಗಳು ಸರ್ಕಾರದ ನೆರವು ಪಡೆದುಕೊಂಡು ಆರ್ಥಿಕವಾಗಿ ಬಲಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಫೌಜಿಯಾ ತರುನಂ ಸಲಹೆ ನೀಡಿದರು. ಕಾರಟಗಿ ತಾಲೂಕು ಬೂದಗುಂಪ ಗ್ರಾಮದಲ್ಲಿನ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಪದಾಧಿಕಾರಿಗಳ ನೇತೃತ್ವದ ರೈತ ಜೀವ ಫಾರ್ಮರ್ ಪ್ರೋಡ್ಯೂಸರ್ ಕಂಪನಿಯ ಕಚೇರಿಗೆ ಶುಕ್ರವಾರ ಭೇಟಿ ನೀಡಿ, ರೈತರೊಂದಿಗೆ ಸಂವಾದ ನಡೆಸಿದರು. ಈ ಭಾಗದ ರೈತರು ಕೇವಲ ಭತ್ತ ಬೆಳೆಯುವದನ್ನು ಬಿಟ್ಟು, ತೋಟಗಾರಿಗೆ ಬೆಳೆಗಳ ಕಡೆಯೂ ಹೆಚ್ಚು ಗಮನ ನೀಡಬೇಕಿದೆ. ಇತ್ತೀಚೆಗೆ ಭತ್ತ ಬೆಳೆಯಲು ಉತ್ಪಾದನಾ ವೆಚ್ಚ ಹೆಚ್ಚಾಗಿ, ಲಾಭದ ಪ್ರಮಾಣ ತೀರಾ ಕಡಿಮೆ ಆಗಿದೆ. ಈ ಕಾರಣಕ್ಕೆ ಭತ್ತ ಬೆಳೆಯುವ ಜೊತೆ ಜೊತೆಗೆ ಆರಂಭದಲ್ಲಿ ಅಲ್ಪ ಪ್ರಮಾಣದಲ್ಲಾದರೂ ತೋಟಗಾರಿಕೆ ಬೆಳೆ ಕಡೆಗೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.  ಈ ಬಗ್ಗೆ ರೈತರಿಗೆ ಸೂಕ್ತ ಸಲಹೆ ಮತ್ತು ತರಬೇತಿ ಕೊಡಿಸುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತ ಸಿದ್ದವಿದೆ. ಕೊಪ್ಪಳ ಜಿಲ್ಲೆಯಲ್ಲಿನ ಎಲ್ಲ ಎಫ್‌ಪಿಒಗಳ ರೈತರು ಮತ್ತು ಇತರೇ ರೈತರನ್ನು ಒಳಗೊಂಡು ಪ್ರತಿ ತಿಂಗಳಿಗೆ ಕನಿಷ್ಠ ಒಂದು ತರಬೇತಿ ಕಾರ್ಯಾಗಾರ ಆಯೋಜನೆ ಮಾಡುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಕೆಲಸ ಮಾಡಬೇಕಿದೆ. ಇನ್ನು ರೈತ ಜೀವ ಎಫ್‌ಪಿಒ ನಿರ್ದೇಶಕರು ಮತ್ತು ರೈತರ ವಿವಿಧ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರೈತ ಜೀವ ಎಫ್‌ಪಿಒ ನಿರ್ದೇಶಕ ಶರಣಗೌಡ ಕೇಸರಹಟ್ಟಿ ಮಾತನಾಡಿ, ನಮ್ಮ ಕಂಪನಿಯಲ್ಲಿ ಕೃಷಿ, ತೋಟಗಾರಿಕೆ ಬೆಳೆ ಬೆಳೆಯುವ ರೈತರ ಜೊತೆಗೆ ಮೀನುಗಾರಿಕೆ ಮಾಡುವ ಕಾರ್ಮಿಕರೂ ಇದ್ದು, ಕೆಲ ಕೆರೆಗಳನ್ನ ನಮಗೆ ಬಿಟ್ಟು ಕೊಡಬೇಕು. ಸುಮಾರು ೧೮ ಜಿಲ್ಲೆಯಲ್ಲಿ ನಮ್ಮ ರೈತ ಸಂಘಟನೆ ಇದ್ದು, ಸಂಘಟನೆ ಸದಸ್ಯರೆಲ್ಲರೂ ಸೇರಿ ಎಫ್‌ಪಿಒ ರಚಿಸಿಕೊಡು ಆರ್ಥಿಕವಾಗಿ ಸಬಗೊಳ್ಳುವಂತೆ ತರಬೇತಿ ನೀಡುತ್ತಿದ್ದೇವೆ. ಎಲ್ಲ ಕಡೆಯೂ ನಮ್ಮ ಎಫ್‌ಪಿಒಗಳಿಗೆ ಸರ್ಕಾರಿ ಅಧಿಕಾರಿಗಳ ಸಲಹೆ ಸಹಕಾರ ಅಗತ್ಯ ಎಂದು ಮನವಿ ಮಾಡಿದರು. ನಿರ್ದೇಶಕ ಶರಣಪ್ಪ ಕೆಂಡದ ಮಾತನಾಡಿ, ರೈತ ಜೀವ ಎಫ್‌ಪಿಒ ತನ್ನದೇ ಬ್ರಾö್ಯಂಡ್ ನಡಿ ಅಕ್ಕಿ ಮಾರಾಟಕ್ಕೆ ಯೋಜನೆ ರೂಪಿಸಿದ್ದು, ಕೊಪ್ಪಳ ಜಿಲ್ಲಾಡಳಿತದಿಂದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ ರೈತರಿಗೆ ಅನುಕೂಲ ಮಾಡಬೇಕು ಎಂದು ಮನವಿ ಮಾಡಿದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ, ಕೃಷಿ ಇಲಾಖೆ ಸಹಾಯ ನಿರ್ದೇಶಕ ಸಂತೋಷ ಬೆಟ್ಟದಕಲ್ಲು, ಕಾರಟಗಿ ತಾಪಂ ಎಡಿ ವನಜಾ, ತೋಟಗಾರಿಕೆ ಇಲಾಖೆ ಎಸ್‌ಎಡಿಎಚ್ ರತ್ನ ಪ್ರೀಯಾ, ಎಎಚ್‌ಒ ಜಗದ್ದೀಶ, ರೈತ ಜೀವ ಎಫ್‌ಪಿಒ ನಿರ್ದೇಶಕ ಯಂಕಣ್ಣ, ಸಿಫಿನ್ ಎಂಡಿ ಶಿವಕುಮಾರ ಎನ್. ಸೇರಿ ಇತರರು ಇದ್ದರು. ಕಂಪನಿ ಸಿಇಒ ಶರಣಬಸವ ಹುಲಿಹೈದರ ನಿರ್ವಹಿಸಿದರು.

Read More »

ಆರೋಗ್ಯ ಕೇಂದ್ರ ಆವರಣದಲ್ಲಿ ಸ್ವಚ್ಛ ಶುಕ್ರವಾರ ಶ್ರಮದಾನ ಕಾರ್ಯಕ್ರಮ

ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡಿ:ಗುರುಪ್ರಸಾದ್.ಎಸ್. ಕಾರಟಗಿ (ಕೊಪ್ಪಳ ಜಿಲ್ಲೆ) ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛತೆ ಕಾಪಾಡಿ ಎಂದು ತಾಲೂಕು ಪಂಚಾಯತಿ ಯೋಜನಾಧಿಕಾರಿ ಗುರು ಪ್ರಸಾದ್ ಎಸ್ ಅವರು ಹೇಳಿದರು. ತಾಲೂಕಿನ ಹೋಸಕೇರಾ ಡಗ್ಗಿಯಲ್ಲಿ

Read More »

ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಕಟ್ಟಿಮನಿ ಆಯ್ಕೆ

ಇಂಡಿ:- 04/11/2022 ರಂದು ಮಹಾನಾಯಕ ಡಾ.ಬಿ. ಆರ್. ಅಂಬೇಡ್ಕರ್ ಸಂಘರ್ಷ ಸಮಿತಿಯ ವಿಜಯಪುರ ಜಿಲ್ಲಾಧ್ಯಕ್ಷರಾಗಿ ರಾಜಧ್ಯಕ್ಷರಾದ ಮಹೇಶ ಎಮ್ ಅವರು ಶರಣಬಸವ ಕಟ್ಟಿಮನಿ ಅವರನ್ನು ವಿಜಯಪುರ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಈ ಸಂಧರ್ಭದಲ್ಲಿ ಮಹೇಶ್

Read More »

ಶಾಸಕರಿಂದ ಸನ್ಮಾನ

ರಾಯಚೂರು:ಜಿಲ್ಲೆಯ ಹಟ್ಟಿ ಪಟ್ಟಣದಲ್ಲಿ ಸೋಲಗಿತ್ತಿ ಜಾನಪದ ಸಾಹಿತಿ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತರಾದ ಕಮಲಮ್ಮ ಇವರಿಗೆ ಲಿಂಗಸುಗೂರು ಶಾಸಕರಾದ ಶ್ರೀ ಮಾನ್ಯ ಡಿ.ಎಸ್.ಹೂಲಿಗೇರಿಯವರು ಸನ್ಮಾನಿಸಿದರುಜೊತೆಗೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಭೂಪನಗೌಡ ಪಾಟೀಲ ಕಡಕಲ್

Read More »

ಹುಬ್ಬಳ್ಳಿಯಿಂದ ಶಬರಿಮಲೆ ಯಾತ್ರೆ ಮಾಡುವ ಭಕ್ತರಿಗೆ ಶುಭ ಸುದ್ದಿ

ಶಬರಿಮಲೆ ತೆರಳುವ ಕರ್ನಾಟಕದ ಅಯ್ಯಪ್ಪ ಮಾಲಾಧಾರಿಗಳಿಗೆ ಅನುಕೂಲವಾಗಲು ಕೇಂದ್ರ ಸರ್ಕಾರವು ರೈಲಿನ ವ್ಯವಸ್ಥೆ ಮಾಡಿದ್ದು (ಪ್ರತಿ ಬುಧವಾರ ಮಾತ್ರ)ಈ ರೈಲು ಹುಬ್ಬಳ್ಳಿಯಿಂದ ಚೆಂಗನೂರ್ ಗೆ ಇರಲಿದ್ದು ಭಕ್ತರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಪ್ರಕಟಣೆ

Read More »
error: Content is protected !!