ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಳಪೆ ಆಹಾರ ನೀಡುತ್ತಿರುವ ಅಂಗನವಾಡಿಗಳು

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಚಿಕ್ಕಮಕ್ಕಳಿಗೆ, ಗರ್ಭಿಣಿ,ಬಾಣಂತಿಯರಿಗೆ ನೀಡುವ ಆಹಾರವು ಕಳಪೆಯಾಗಿದ್ದು ಸೇವಿಸಲು ಯೋಗ್ಯವಾಗಿಲ್ಲ ಎಂದು ಸ್ಥಳೀಯ ಮಹಿಳೆಯರು ಗ್ರಾಮ ಪಂಚಾಯಿತಿ ಕಚೇರಿಗೆ ಬಂದು ದೂರಿದ ಪ್ರಸಂಗ ನಡೆದಿದೆ.ಅಂಗನವಾಡಿ ಕೇಂದ್ರಗಳಲ್ಲಿ ಜಡ್ಡುಗಟ್ಟಿದ ಕೊಳಕು ಬೆಲ್ಲ,ಕಸಕಡ್ಡಿಯಿಂದ ಕೂಡಿದ ಅಕ್ಕಿ,ಸಕ್ಕರೆ, ಬೇಳೆ,ಹಾಲಿನ ಪುಡಿ,ಕೊಳೆತ ಮೊಟ್ಟೆಗಳನ್ನು ನೀಡಲಾಗುತ್ತಿದೆ ಕೆಲವು ಕೇಂದ್ರಗಳಲ್ಲಿ ಇದನ್ನೂ ಕೂಡಾ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಅಂಗನವಾಡಿ ಕಾರ್ಯಕರ್ತೆಯರನ್ನು ಕೇಳಿದರೆ ನಮಗೆ ಇಲಾಖೆಯಿಂದ ಪೂರೈಕೆಯಾದ ಆಹಾರವನ್ನು ಕೊಡುತ್ತಿದ್ದೇವೆ ಎಂದು ಬೇಜವಾಬ್ದಾರಿ ಉತ್ತರ ನೀಡಿ ಜಾರಿಕೊಳ್ಳುತ್ತಾರೆ ಅವರ ಮನೆಗಳಲ್ಲಿ ತಾವು ಮತ್ತು ತಮ್ಮ ಮಕ್ಕಳು ಇಂತಹ ಆಹಾರ ತಿನ್ನುತ್ತಾರ? ಎಂದು ಮಹಿಳೆಯರು ಪಂಚಾಯಿತಿಯಲ್ಲಿ ಪ್ರಶ್ನೆ ಮಾಡಿದರು.
ಈ ವೇಳೆ ಅಂಗನವಾಡಿ ಕಾರ್ಯಕರ್ತರನ್ನು ಕೇಳಿದಾಗ ಒಂದು ಕೇಂದ್ರದಲ್ಲಿ ನಿರ್ವಹಣೆ ಮಾಡುವಲ್ಲಿ ಈ ಸಮಸ್ಯೆಯಾಗಿದೆ ಎಲ್ಲಾ ಕೇಂದ್ರಗಳಲ್ಲಿ ಗುಣ ಮಟ್ಟದ ಆಹಾರ ನೀಡಲಾಗುತ್ತಿದೆ ಎನ್ನುವ ಅಭಿಪ್ರಾಯವೂ ಕಂಡು ಬಂತು ಆದರೆ ಮಹಿಳೆಯರು ದೂರಿದಂತೆ ಇತ್ತೀಚಿಗೆ ಅಂಗನವಾಡಿ ಕೇಂದ್ರಗಳಿಂದ ಕೊಡುವ ಆಹಾರವಾಗಲಿ ಆಹಾರ ಪದಾರ್ಥವಾಗಲಿ ಗರ್ಭಿಣಿ ಯರು,ಬಾಣತಿಯರು ತೆಗೆದುಕೊಳ್ಳುತ್ತಿಲ್ಲ ಹದಿನೈದು ದಿನ ಅಂಗನವಾಡಿಯಲ್ಲಿ ಅಡಿಗೆ ಮಾಡಿ ಗರ್ಭಿಣಿ ಯರಿಗೆ ಉಣ್ಣಿಸಿದರು ಈಗ ಅದು ನಿಲ್ಲಿಸಿದ್ದಾರೆ. ಆಹಾರ ಕೊಡುತ್ತೇವೆಂದು ಹೇಳುತ್ತಾರೆ ಯಾರಿಗೆ ಏನು ಕೊಡುತ್ತಿದ್ದಾರೆ ಚಿಕ್ಕ ಮಕ್ಕಳಿಗೆ ಯಾವ ರೀತಿ ಅಡಿಗೆ ಮಾಡಿ ಹಾಕುತ್ತಾರೋ,ಏನು ತಿನ್ನಿಸುತ್ತಾರೋ ಎಂಬುವುದು ನಮಗೆ ಹೇಗೆ ಗೊತ್ತಾಗಬೇಕು ಎಂದು ತಮ್ಮ ಆಕ್ರೋಶ ಹೊರ ಹಾಕಿದರು.
ಮಕ್ಕಳನ್ನು ಕಳಿಸುವುದಿಲ್ಲವೆಂದರೂ ಬಲವಂತ ಮಾಡಿ ಕೇಂದ್ರಗಳಿಗೆ ಕರೆದುಕೊಂಡು ಹೋಗುತ್ತಾರೆ ನಮ್ಮ ಮಕ್ಕಳಿಗೆ ಹೆಚ್ಚು ಕಡಿಮೆ ಆದರೆ ಏನು ಗತಿ? ಇವರನ್ನು ಕೇಳುವ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಇಂತಹ ಆಹಾರ ತಿಂದ ಚಿಕ್ಕ ಮಕ್ಕಳು,ಬಡ ಕುಟುಂಬದ ಗರ್ಭಿಣಿ,ಬಾಣತಿಯರ ಪರಿಸ್ಥಿತಿ ಏನಾಗಬೇಕು ಎಂದು ತರಾಟೆಗೆ ತೆಗೆದುಕೊಂಡರು.
ಕೇಂದ್ರದಿಂದ ನೀಡಿದ ಮೊಟ್ಟೆ,ಬೆಲ್ಲ,ಸಕ್ಕರೆ,ಹಾಲಿನ ಪುಡಿ ಇತರೆ ಪದಾರ್ಥಗಳನ್ನು ಪಂಚಾಯಿತಿ ಕಚೇರಿಯ ಟೇಬಲ್ ಮೇಲೆ ಹಿಟ್ಟು ಪ್ರದರ್ಶಿಸಿದರು. ಇದನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಪಂಚಾಯ್ತಿ ಮುಂದೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ