ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಿರುಗುಪ್ಪ ಪೋಲೀಸರ ಕಾರ್ಯ ಕಳವು ಮಾಲು ಪತ್ತೆ


ಸಿರುಗುಪ್ಪ ನಗರದ ಪೋಲಿಸ್ ಠಾಣೆಯ ಅಧಿಕಾರಿಗಳು ಕಳವು ಮಾಲುಗಳನ್ನು ಪತ್ತೆ ಕಾರ್ಯ ಮಾಡಿದ್ದಾರೆ
ಸಿರುಗುಪ್ಪ ನಗರದ 14ನೇ ವಿಭಾಗದ 52ವರ್ಷದ ಕೃಷಿಕ ರಾಮರಾವ್ ತಂದೆ ತಿಮ್ಮರಾಜು ಇವರು ಠಾಣೆಯಲ್ಲಿ ದೂರು ದಾಖಲಿಸಿದ್ದು ಕಳೆದ ತಿಂಗಳು 23 ಮತ್ತು 24ನೇ ತಾರೀಕಿನಂದು
ತಾವು ಕಳೆದ 20ವರ್ಷಗಳ ಹಿಂದೆ ಕೃಷಿ ಕೆಲಸಕ್ಕಾಗಿ ಹಸಿರು ಬಣ್ಣದ ಟ್ರ್ಯಾಕ್ಟರ್ ಟ್ರಾಲಿ ಕೆಎ 37 ಟಿ 1207 ಖರೀದಿ ಮಾಡಿದ್ದಾರೆ ದಿನಾಂಕ 23ರಂದು ರಾತ್ರಿ ಹತ್ತು ಗಂಟೆಗೆ ಸಿರುಗುಪ್ಪ ಪಟ್ಟಣದ ತಮ್ಮ ಮನೆ ಮುಂದೆ ಟ್ರ್ಯಾಕ್ಟರ್ ಮತ್ತು ಟ್ರಾಲಿಯನ್ನು ನಿಲ್ಲಿಸಿ ಮನೆಗಳಿಗೆ ಹೋಗಿ ಊಟ ಮಾಡಿ ಮಲಗಿದ್ದು ಮಾರನೇ ದಿನ ಬೆಳಿಗ್ಗೆ 7ಗಂಟೆ ಸುಮಾರಿಗೆ ಎದ್ದು ರ್ಯಾಲಿಯನ್ನು ನೋಡಲು ಕಾಣಲಿಲ್ಲ ಇದರಿಂದ ಗೆಳೆಯರೊಂದಿಗೆ ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರಲಿಲ್ಲ ಕಾರಣ ಅಂದಾಜು ಐವತ್ತು ಸಾವಿರ₹ಬೆಲೆಯುಳ್ಳ ಟ್ರಾಲಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದಾರೆ ಪ್ರಕರಣ ಪತ್ತೆ ಮಾಡಿಕೊಡುವಂತೆ ದೂರು ದಾಖಲಿಸಿದ್ದರು
ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಸಿರುಗುಪ್ಪ ಪೊಲೀಸ್ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿ ಉಪ್ಪಳ ಗ್ರಾಮ ಕೆಸರ ಕುಣಿ ಗ್ರಾಮ ಸೇರಿದಂತೆ ಇತರೆಡೆ 4ಜನ ಆರೋಪಿಗಳನ್ನು ಬಂಧಿಸಿದ್ದಾರೆ ಆರೋಪಿಗಳಿಂದ 1ಟ್ರ್ಯಾಕ್ಟರ್ ಎಂಜಿನ್ 1ಟ್ರಾಲಿ 1ಹಳೆಯ ಟ್ರಾಲಿ ಮತ್ತು ಕೃಷಿ ಉಪಕರಣಗಳು ಟಿಲ್ಲರ್ ಹಾಗೂ ಇನ್ನಿತರ ವಸ್ತುಗಳನ್ನು ಕಳ್ಳರಿಂದ ವಶಕ್ಕೆ ಪಡೆದು ಕಾನೂನು ರೀತ್ಯ ಕ್ರಮ ಜರುಗಿಸುತ್ತಿದ್ದಾರೆ
ವಶಪಡಿಸಿಕೊಂಡ ವಾಹನ ಖಾಲಿ ಮತ್ತು ಇನ್ನಿತರ ವಸ್ತುಗಳೊಂದಿಗೆ ಫೋಟೋ ಸಹಿತವಾಗಿ ಪೊಲೀಸ್ ಅಧಿಕಾರಿಗಳು ವಿವರಣೆ ನೀಡಿದ್ದಾರೆ
ಈ ಸಂದರ್ಭದಲ್ಲಿ ಪಿಎಸ್ ಐ ರಂಗಯ್ಯ ಕೆ ಕ್ರೈಂ ಪಿಎಸ್ ಐ ಗಂಗಾಧರ್ ಮತ್ತು ಸಿಬ್ಬಂದಿಗಳಾದ ದ್ಯಾಮನಗೌಡ ಇದ್ದರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ