ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕತ್ತಲಲ್ಲಿ ದಿನ ಕಳೆಯುತ್ತಿರುವ ಚಿಗರಿಹಾಳ ಗ್ರಾಮಸ್ಥರು

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಗರಿಹಾಳ ಗ್ರಾಮದ ಜನರು ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುತ್ತಿದ್ದಾರೆ.ಕಂಬಗಳ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ತಮ್ಮ ಮನೆಗಳ ಮುಂದೆ ತಾತ್ಕಾಲಿಕವಾಗಿ ಬಿದಿರಿನ ಕಂಬಗಳನ್ನು ಹಾಕಿ ಅದರ ಮುಖಾಂತರ ವಿದ್ಯುತ್ ವೈರ್ ಎಳೆದು ಬೆಳಕು ಮಾಡಿಕೊಂಡಿರುವುದು ತಾತ್ಕಾಲಿಕವಾಗಿದ್ದು ಹಾಗೂ ಅಪಾಯಕಾರಿಯೂ ಆಗಿದೆ ಹಾಗಾಗಿ ಗ್ರಾಮಸ್ಥರು ಆತಂಕದಿಂದ ಜೀವನ ನಡುಸುತ್ತಿದ್ದಾರೆ ಕೆಇಬಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದೂ ಅಲ್ಲದೇ ಗ್ರಾಮಸ್ಥರ ಮನೆ ಮನೆಗಳಿಗೆ ಮೀಟರ್ ಅಳವಡಿಸಿ ಹೋಗಿದ್ದಾರೆ ಕೆಇಬಿ ಅಧಿಕಾರಿಗಳು ಐದು ವರ್ಷಗಳಿಂದ ವಿದ್ಯುತ್ ಬಿಲ್ ಪಡೆಯುತ್ತಿದ್ದು ದುರದೃಷ್ಟಕರ ಸಂಗತಿ.ಚಿಗರಿಹಾಳ ಗ್ರಾಮದ ಮಹಿಳೆಯರು ಮತ್ತು ಗ್ರಾಮಸ್ಥರು ಸೇರಿ ಕೆಇಬಿ ಕಚೇರಿಗೆ ಮುತ್ತಿಗೆ ಹಾಕುವುದರ ಮುಖಾಂತರ ಪ್ರತಿಭಟನೆ ಮಾಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಇನ್ನು ಮುಂದೆ ಆದರೂ ಕೆಇಬಿ ಅಧಿಕಾರಿಗಳು ಚಿಗರಿಹಾಳ ಗ್ರಾಮದ ಜನರ ಮನವಿಗೆ ಸ್ಪಂದಿಸುವ ಕೆಲಸ ಮಾಡಬೇಕು.
ಗ್ರಾಮದ ಯುವ ಮುಖಂಡ ಬಸವರಾಜ ಮಾಪಹಳ್ಳಿ,ಗೋವಿಂದಪ್ಪ,ಪರಮಣ್ಣ,ಮೈನುದೀನ್, ನಿಂಗಪ್ಪ ಕವಲಿ,ಮಹದೇವ,ಹಣಮಂತ್ರಾಯ, ಸಿದ್ದರಾಮ,ಪೀಡಪ್ಪ,ತಿಪ್ಪವ್ವ,ಮಹಿಬೂಬಿ,ಚಾಂದಬಿ, ಹಣಮಂತಿ,ನಿಂಗಮ್ಮ,ಲಕ್ಷ್ಮೀ,
ಹಿರಿಯರು ಹಾಗೂ ಮಹಿಳೆಯರು ಭಾಗವಹಿಸಿದ್ದರು.
ವರದಿ-ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ