ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವನಸಿರಿ ಫೌಂಡೇಶನ್ ಆಲದ ಮರಕ್ಕೆ ಅಮರ ಶ್ರೀ ಎಂದು ನಾಮಕರಣ ಮಾಡಿರುವುದು ಪರಿಸರ ಪ್ರೇಮಿಗಳಿಗೆ ಸಂತಸವಾಗುತ್ತಿದೆ:ಪ್ರಮೀಳಾ ಪತ್ತಾರ

ವನಸಿರಿ ಫೌಂಡೇಶನ್ ತಂಡದ ಸದಸ್ಯರು ಆಲದ ಮರಕ್ಕೆ ನಾಮಕರಣ ಮಾಡಿರುವುದು ಪರಿಸರ ಪ್ರೇಮಿಗಳಿಗೆ ಸಂತೋಷವುಂಟು ಮಾಡಿದೆ ಎಂದು ಸಿಂಧನೂರ ನಗರದ 7 ನೇ ವಾರ್ಡ ನಿವಾಸಿ ಪ್ರಮೀಳಾ ರವಿಕುಮಾರ ಪತ್ತಾರ ಸಂತಸ ವ್ಯಕ್ತಪಡಿಸಿದರು.

ಅವರು ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರಕ್ಕೆ ಭೇಟಿ ನೀಡಿ ಮಾತನಾಡಿದರು. ನಾನು ಮಗುವಿಗೆ ನಾಮಕರಣ ಮಾಡುವುದನ್ನು ನೋಡಿದ್ದೇನೆ.ಸಿಂಧನೂರು ನಗರದ ನೀರಾವರಿ ಇಲಾಖೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಮರಕ್ಕೆ ಮರುನಾಮಕರಣ ಮಾಡಿದ್ದಾರೆ ಎಂದು ವಿಷಯ ತಿಳಿದು ನಾನು ಇಲ್ಲಿಗೆ ಬಂದಿದ್ದೇನೆ.ರೈತನೋರ್ವ ಕಡಿದು ಹಾಕಿದ ಆಲದ ಮರವನ್ನು ತಂದು ಜೀವ ತುಂಬಿ ಅದಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಅನುಗ್ರಹದಿಂದ ಅಮರ ಶ್ರೀ ಎಂಬ ಹೆಸರನ್ನು ಇಟ್ಟಿರುವುದು ತುಂಬಾ ಖುಷಿ ಎನಿಸುತ್ತದೆ ಇದರ ಒಂದು ಶ್ರಮಕ್ಕೆ ವನಸಿರಿ ಫೌಂಡೇಶನ್ ತಂಡ ತುಂಬಾ ಚೆನ್ನಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಲು ಹೆಮ್ಮೆ ಅನಿಸುತ್ತಿದೆ.ಬೆಳೆಯುವ ಸಿರಿ ಮೊಳಕೆಯಲಿ ಎನ್ನುವಂತೆ ಪ್ರತಿಯೊಂದು ಸಸಿಯು ಚಿಗುರೊಡೆದು ಮರವಾಗ ಬೆಳೆಯಬೇಕು ಅದರ ನೆರಳಲ್ಲಿ ನಾವು ಬದುಕಬೇಕು ಉಸಿರಾಡಬೇಕು ಅಂದರೆ ಜಗತ್ತಿನಲ್ಲಿ ಪ್ರತಿಯೊಂದು ಗಿಡಕೂಡ ಮುಖ್ಯವಾಗಿರುತ್ತೆ.ಜಗತ್ತಿನಲ್ಲಿ ಪ್ರತಿಯೊಂದು ಸಸ್ಯಕ್ಕೂ ಜೀವವಿದೆ ಎನ್ನುವುದನ್ನು ಜಗದೀಶ್ ಚಂದ್ರಬೋಸ್ ಅವರು ನಮಗೆ ತಿಳಿಸಿಕೊಟ್ಟಿದ್ದಾರೆ.ಆವತ್ತಿನಿಂದ ಮಾನವರ ಜೊತೆಗೆ ಸಸ್ಯಗಳು ಉಸಿರಾಡುತ್ತವೆ ಎಂಬುದನ್ನು ತಿಳಿಯಬಹುದನ್ನು ನಾವುಗಳೆಲ್ಲರೂ ತಿಳಿಯೋಣ ಪ್ರತಿಯೊಬ್ಬರೂ ಇಂತಹ ಒಂದು ವನಸಿರಿ ಫೌಂಡೇಶನ್ ಕಾರ್ಯಕ್ಕೆ ಸಹಕಾರ ನೀಡೋಣ ಪರಿಸರ ರಕ್ಷಣೆ ನಮ್ಮನಿಮ್ಮೆಲ್ಲರ ಹೊಣೆ ಎಂದು ಹೇಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ