ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಸ್ಸುಗಳನ್ನು ತಡೆದು ಪ್ರತಿಭಟನೆ

ಲಕ್ಷ್ಮೇಶ್ವರ -21 ಇಂದು ಪಟ್ಟಣದ ಪ್ರಮುಖ ರಸ್ತೆಯಾದ ಶಿಗ್ಲಿ ವೃತ್ತದ ಬಳಿ ಲಕ್ಷ್ಮೇಶ್ವರ ಪಟ್ಟಣದಿಂದ ಗದಗ, ಹುಬ್ಬಳ್ಳಿ, ಹಾವೇರಿ ಭಾಗಗಳಿಗೆ ಸಂಚರಿಸುವ ಬಸ್ಸುಗಳನ್ನು ತಡೆದು ಪ್ರತಿಭಟನೆ ಮಾಡಲಾಯಿತು. ಲಕ್ಷ್ಮೇಶ್ವರದಿಂದ ಗದಗಗೆ ಸಂಚಾರ ಮಾಡಲು ನಾಗರೀಕರಿಗೆ ಹಾಗೂ ಬಸ್ಸ ಚಾಲಕರಿಗೆ ಜೀವ ಭಯ ಕಾಡುವಂತ ಪರಿಸ್ಥಿತಿ ಬಂದಿದೆ. ಸಂಪೂರ್ಣ ಹದಗೆಟ್ಟು ಹೋಗಿರುವ ರಸ್ತೆಯಲ್ಲಿ ಬಸ್ಸ, ಟಿಪ್ಪರ, ಖಾಸಗಿ ವಾಹನಗಳ ದಟ್ಟಣೆಯಿಂದ ಸಂಪೂರ್ಣ ರಸ್ತೆಯು ಹಾಳಾಗಿದ್ದು ದಿನಾಲೂ ಗದಗ ಭಾಗಕ್ಕೆ ಸಂಚಾರ ಮಾಡುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯದಲ್ಲಿ ಬಸ್ಸುಗಳು ಸಂಚರಿಸುತಿಲ್ಲ ಅಲ್ಲದೆ ಬಸ್ ಗಳ ಸಂಖ್ಯೆಯು ಕಡಿಮೆಯಿರುವುದು ಎದ್ದು ಕಾಣುತ್ತದೆ.ಹೊಸ ಬಸ್ಸ ನಿಲ್ದಾಣದಿಂದ ಸಂಪೂರ್ಣ ದೂಳಿನ ಮಜ್ಜನವನ್ನು ಎಲ್ಲಾ ಅಂಗಡಿ ಮಾಲೀಕರು, ಸಾರ್ವಜನಿಕರು ಅನುಭವಿಸುವಂತಾಗಿದೆ.ಈ ವ್ಯವಸ್ಥೆ ಗೆ ಜನ ಪ್ರತಿನಿಧಿಗಳಾಗಲಿ, ಸರ್ಕಾರಿ ಅಧಿಕಾರಿಗಳಲಿ ಸೂಕ್ತ ವ್ಯವಸ್ಥೆ

ಮಾಡುವಲ್ಲಿ ವಿಫಲರಾಗಿರುವದನ್ನು ಖಂಡಿಸಿ ಕಾಲೇಜು ವಿದ್ಯಾರ್ಥಿಗಳು ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ, ಕರುನಾಡ ವಿಜಯ ಸೇನೆ,ಮುಂತಾದ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮೂಲಕ ಡಿಸಿ ಅವರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

ವರದಿ ಸದಾಶಿವ ಭೀ ಮುಡೆಮ್ಮನವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ