ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಂಬಬ್ಯಾಡೋ

ನಂಬಬ್ಯಾಡ ಯಾವತ್ತೂ ಅಷ್ಟು ಸರಳ ಯಾರನ್ನೂ
ಇಷ್ಟದಲಿ ಜೊತೆಗಿರುವರು ಕಷ್ಟದಲಿ ಕೈಕೊಡುವರು
ಸ್ಪಷ್ಟತೆಯಲಿ ನಡಿಯುವಂತೆ
ಮುಷ್ಟಿಯಲಿ ಎಲ್ಲಾ ಮುಚ್ಚಿಡುವವರು….!!

ನಂಬಬ್ಯಾಡ ಯಾವತ್ತೂ ಅಷ್ಟು ಸರಳ ಯಾರನ್ನೂ
ಬಂಧುಗಳಾಗಿ ಬರುವರು ಬೆನ್ನಹಿಂದೆ ಮಾತನಾಡುವರು
ಸ್ನೇಹ ಸಂಬಂಧವ ಬೆಸೆದು ಕತ್ತಿ ಕುಡುಗೋಲು ಮಸೆಯುವರು
ಕಣ್ಣೆದುರಿಗೆ ಬಂದಾಗ ಮಾತ್ರ ಮುತ್ತಿನಂತ ಮಾತನಾಡುವರು…!!

ನಂಬಬ್ಯಾಡ ಯಾವತ್ತೂ ಅಷ್ಟು ಸರಳ ಯಾರನ್ನೂ
ಕೊರಳಿಗೆ ಹಾರ ಹಾಕಿ ಬೆರಳ ಹಿಡಿದು ಬರುವರು
ಮರುಳ ಮಾಡಿ ನೆರಳ ಹಿಂದೆ ಬಂದು ನರಳುವಂತೆ ಮಾಡುವರು
ಸರಳವಾಗಿ ತಿರುಳ ತಿಳಿದು ಮುರುಳಿ ಲೋಲನಂತೆ ನಟಿಸುವರು…!!

ನಂಬಬ್ಯಾಡೋ ಯಾವತ್ತೂ ಅಷ್ಟು ಸರಳ ಯಾರನ್ನೂ
ಮುಂದೆ ಒಂದು ಹಿಂದೆ ಇನ್ನೊಂದು ತರ ಇರುವವರು
ನೆರೆದ ಮಂದಿಯೊಳಗ ಮಾತ್ರ ಕರೆದು ಕೂಡಿಸುವವರು
ಬರಿದಾದ ಬದುಕಿಗೆ ಬಣ್ಣ ಹಚ್ಚಿ ಬದುಕಿ ಸಾಗುವವರು….!!

ನಂಬಬ್ಯಾಡೋ ಯಾವತ್ತೂ ಅಷ್ಟು ಸರಳ ಯಾರನ್ನೂ
ತಲೆ ಸವರಿ ಬೆನ್ನು ತಟ್ಟಿ ಗಟ್ಟಿಯಾಗಿ ಬಿಗಿದಪ್ಪುವವರ
ಹಣ ಐಶ್ವರ್ಯವಿದ್ದಾಗ ಮಾತ್ರ ಹಿಂಬಾಲಿಸುವವರ
ಬರಿದಾದ ಬದುಕಿಗೆ ಆಸರೆಯಾಗಿ ಸಹಕರಿಸದವರ….!!

  • ಹನುಮಂತ ದಾಸರ ಹೊಗರನಾಳ
    ಮೊ : 9945246234
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ