ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಚೆನ್ನದಾಸರ ಬೃಹತ್ ಸಮಾವೇಶ,
ಪ್ರತಿಭಾ ಪುರಸ್ಕಾರ


ಮುದ್ದೇಬಿಹಾಳ-ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಚೆನ್ನದಾಸರ /ಹೊಲೆಯ ದಾಸರ / ರಿ, ಮಾಲ ದಾಸರ / ರಿ, ಜನಸೇವಾ ಸಮೀತಿ ಬೆಂಗಳೂರು / ರಿ, ವಿಜಯಪುರ ಜಿಲ್ಲಾ ಘಟಕ ತಾಲೂಕಾ ಘಟಕ ಮುದ್ದೇಬಿಹಾಳ. ಇದರ ಅಡಿಯಲಿ ಹಮ್ಮಿಕೊಳ್ಳಲಾದ ಚೆನ್ನದಾಸರ ಬೃಹತ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ಭವ್ಯ ಮೆರವಣಿಗೆಯ ಕಾರ್ಯಕ್ರಮ ದಿನಾಂಕ : ೦೧-೦೨-೨೦೨೩ ರವಿವಾರ ಸಮಯ : ಮುಂಜಾನೆ ೧೦-೦೦ ಘಂಟೆಗೆ, ಸ್ಥಳ : ಶ್ರೀ ರಾಘವೇಂದ್ರ ಮಂಗಲ ಕಾರ್ಯಾಲಯ,ಮಹಾಂತೇಶ ನಗರ .ಈ ಕಾರ್ಯಕ್ರಮವನ್ನು ಆಲಮಟ್ಟಿ ರಸ್ತೆಯ ಮೂಲಕ ಶ್ರೀ ವೆಂಕಟರಮಣ ದೇವರ ಬಾವಚಿತ್ರಕ್ಕೆ ಹಾಗೂ ದಾಸರ ಗೋಪಾಳ ವೃತ್ತಕೆ ಪೂಜೆ ಸಲ್ಲಿಸಿ ಮೆರವಣಿಗೆಯ ಮೂಲಕ ಕುಂಬ ಮೇಳದೊಂದಿಗೆ ಬಸವೆಶ್ವರ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ರಾಘವೇಂದ್ರ ಗುಡಿಯವರೆಗೆ ಮೆರವಣಿಗೆಗೆ ಶಾಸಕರಾದ ಶ್ರೀ ಎ.ಎಸ್.ಪಾಟೀಲ (ನಡಹಳ್ಳಿ) ರವರು ಚಾಲನೆ ನೀಡಿದರು
ಚೆನ್ನದಾಸರ ಬೃಹತ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ಭವ್ಯ ಮೆರವಣಿಗೆಯ ಕಾರ್ಯಕ್ರಮದ ಉದ್ಘಾಟಕರಾದಂತಹ ಅಧ್ಯಕ್ಷರು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಹಾಗೂ ಶಾಸಕರು ಎ,ಎಸ್.ಪಾಟೀಲ(ನಡಹಳ್ಳಿ) ಉದ್ಘಾಟಿಸಿ ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಚೆನ್ನದಾಸರ ಹಿನ್ನೆಲೆಯನ್ನು ವಿವರಿಸಿದರು‌ಚೆನ್ನದಾಸರು ಎಂದರೆ ಹಣಗಳಿಸಲು,ಆಸ್ತಿ ಮಾಡಲು ಯೋಚಿಸಿದವರಲ್ಲ ಇವರು ಹರಿಯ ಸಂದೇಶವನ್ನು ಜಗತ್ತಿಗೆ ಸರುತ್ತಾ ಸರ್ಥದ ಬದುಕಿನಲ್ಲಿ ಆದ್ಯಾತ್ಮದ ಬೆಳಕನ್ನು ಚೆಲ್ಲುವುದು ದಾಸರ ಕಾಯಕ ಹಾಗೂ ಇವರನ್ನು ಸಂತರು ಎಂದರೇ ತಪ್ಪಾಗುವುದಿಲ್ಲ ಎಂದು ವರ್ಣಿಸಿದರು. ಈ ದಾಸರು ಈ ಕಾಲದಲ್ಲಿ ಬಂದಿರುವುದು ಅಲ್ಲಾ ಇವರು ಶ್ರೀ ಕೃಷ್ಣದೇವರಾಯನ ಆಡಳಿತ ಕಾಲದಲ್ಲಿ ತಮ್ಮ ಕೀರ್ತನೆಗಳು, ಚಿಂತನೆಗಳನ್ನು ಊರು ಊರಲ್ಲಿ ಸಾರುತ್ತಾ ಉತ್ತುಂಗಕ್ಕೆ ಏರಿದವರು ಹಾಗೂ ಶಿಕ್ಷಣ ಸಂಚಿತರಾಗಬೇಕು ಮಕ್ಕಳಿಗೆ ವಿದ್ಯಾಬ್ಯಾಸ ಕಲಿಸಬೇಕು ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು, ಈಗಾಗಲೆ ನಿಗಮವಾಗಿದೆ ಆದರೆ ಅನುದಾನ ಬಿಡುಗಡೆಯಾಗದೆ ಅದನ್ನು ಮರಳಿ ಸರಕಾರ ವಾಪಸ್ಸು ಕಸೆದುಕೊಂಡಿದೆ ಹಾಗೂ ಸರಕಾರದಿಂದ ಸೌಲಬ್ಯಗಳನ್ನು ಒದಗಿಸುವ ಬರವಸೆ ನೀಡಿದರು
ಚೆನ್ನದಾಸರ ಬೃಹತ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ಭವ್ಯ ಮೆರವಣಿಗೆಯ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ವಹಿಸಿದಂತಹ ದಾಸೋಹ ಮಠ ಪಡೇಕನೂರ ಪೂಜ್ಯಶ್ರೀ ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾ ಸ್ವಾಮಿಗಳು, ಅಧ್ಯಕ್ಷರು ನಿವೃತ್ತ ಎ.ಇ.ಇ.ಬಗಲಕೋಟ ಶ್ರೀ ಬಿ.ಕೆ.ದಸರ ರವರು ಹಾಗೂ ಮುಖ್ಯ ಅತಿಥಿಗಳಾದಂತಹ ರಾಜ್ಯಾಧ್ಯಕ್ಷರು ಚನ್ನದಾಸರ ಸಂಘ ಶ್ರೀ ಬಸವರಾಜ ನಾರಾಯಣಕರ್. ಗೌರವಾಧ್ಯಕ್ಷರು ಚನ್ನದಾಸರ ಸಂಘ ಶ್ರೀ ಎ.ವಾಯ್.ಪದ್ಮಾಕರ. ಉಪನ್ಯಾಸಕರು ಸ.ಪ್ರ.ದ.ಕಲೇಜು ಡಾ.ಹಳ್ಳೆಪ್ಪ ಲಿಂಗದಳ್ಳಿ. ಜಿಲ್ಲಾಧ್ಯಕ್ಷರು ಚನ್ನದಾಸರ ಸಂಘ ಶ್ರೀ ಸಂಜೀವಕುಮಾರ ದಶವಂತ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನದಾಸರ ಸಂಘ ಶ್ರೀ ಪ್ರೀತು ದಶವಂತ. ದಲಿತ ನಾಯಕರು ಶ್ರೀ ಡಿ.ಬಿ.ಮುದೂರ. ಕಾರ್ಯಾಧ್ಯಕ್ಷರು ಚನ್ನದಾಸರ ಸಂಘ ಶ್ರೀ ಶ್ರೀನಿವಾಸ ದಾಸರ. ಕಾರ್ಯಾಧ್ಯಕ್ಷರು ಚನ್ನದಾಸರ ಸಂಘ ಶ್ರೀಪಿ.ಎಸ್.ಕವಡಿಮಟ್ಟಿ. ಪ್ರಧಾನ ಕಾರ್ಯದರ್ಶಿಗಳು ಚನ್ನದಾಸರ ಸಂಘ ಶ್ರೀ ಗೋವಿಂದ ದಾಸರ. ಮಹಿಳಾ ರಾಜ್ಯ ಅಧ್ಯಕ್ಷರು ಚನ್ನದಾಸರ ಸಂಘ ಶ್ರೀಮತಿ ಸಾವಿತ್ರಿ ಎಂ.ರತ್ನಾಕರ. ದಲಿತ ನಾಯಕರು ಶ್ರೀ ಹರೀಶ ನಾಟೀಕಾರ. ದಲಿತ ನಾಯಕರು ಶ್ರೀ ಸಿ,ಜಿ.ವಿಜಯಕರ. ಅಧ್ಯಕ್ಷರು ಕಾರ್ಮಿಕ ಸಂಘ ಶ್ರೀ ಮೆಹಬೂಬ ಕುಂಟೋಜಿ ಡೆಪ್ಯೂಟಿ ಡೈರೆಕ್ಟರ ನ್ಯಾಚ್ಯುರೋಪತಿ ಮತ್ತುಯೋಗ ಆಯುಷ್ ಡಿರ್ಪಾಟ ಮೆಂಟ್ ಡಾ|| ಮಾರುತಿ ಅಯ್ಯಪ್ಪ ದಾಸರ, ಸಂಗೀತಗಾರರು ಗೆದ್ದಲಮರಿ ಶ್ರೀ ಕೃಷ್ಣಪ್ಪ ಬಾಲಪ್ಪ ದಾಸರ, ಗಣಪತಿ ಹಣಮಂತ ದಾಸರ ಶರೋಳ. ಕರ್ನಾಟಕ ರಜ್ಯ ಪರಿಶಿಷ್ಟ ಜಾತಿ ಚೆನ್ನದಾಸರ /ಹೊಲೆಯ ದಾಸರ / ರಿ, ಮಾಲ ದಾಸರ / ರಿ, ಜನಸೇವಾ ಸಮೀತಿ ಬೆಂಗಳೂರು / ರಿ, ವಿಜಯಪುರ ಜಿಲ್ಲಾ ಘಟಕ ತಾಲೂಕಾ ಘಟಕ ಮುದ್ದೇಬಿಹಾಳ ಪರವಾಗಿ ಎಲ್ಲಾ ಘನ್ಯಮಾನರಿಗೂ ,ಮುಖ್ಯ ಅತಿಥಿಗಳಿಗೂ ,ವಿಶೇಷ ಸನ್ಮಾನಿತರಿಗೂ,ಚೆನ್ನದಾಸರ ಸಮಾಜದ ತಾಲೂಕಾ ಗಣ್ಯರಿಗೂ,ದಾನಿಗಳಿಗೂ ಹಾಗೂ ಪದಾಧಿಕಾರಿಗಳಿಗೂ ಸನ್ಮಾನಿಸಿ ಗೌರವಿಸಲಾಯಿತು.
-ಸಚಿನ್ ಅಡಗಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ