ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜನರ ಸೇವೆಯೇ ನನ್ನ ಗುರಿ ವೀರಭದ್ರಪ್ಪ ಗೌಡ ಹೊಸಮನಿ

ಯಾದಗಿರಿ:ನಿನ್ನೆ ನಡೆದ ಶಹಾಪುರ ತಾಲೂಕಿನ ಉಕ್ಕಿನಾಳ ಗ್ರಾಮದಲ್ಲಿ ಆಶೀರ್ವಾದ ಟ್ರಸ್ಟ್ ಹುಣಸಗಿ ಇವರ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡಿದ ಆಶೀರ್ವಾದ ಟ್ರಸ್ಟ್ ಅಧ್ಯಕ್ಷರಾದ ಶ್ರೀ ವೀರಭದ್ರಪ್ಪ ಗೌಡ ಹೊಸಮನಿ ಅವರು ಹಲವಾರು ವರ್ಷಗಳಿಂದ ಉಚಿತ ಆರೋಗ್ಯ ಶಿಬಿರ ನಡೆಸುತ್ತಾ ಜೊತೆಗೆ ಉತ್ತಮವಾದ ಸಮಾಜ ಸೇವೆ ಮಾಡುತ್ತಾ ಬಂದವರು ಹಾಗೇ ಗ್ರಾಮದ ಜನರ ಮನಸ್ಸಿನ ಭಾವನೆಗಳಿಗೆ ಸ್ಪಂದಿಸುವ ವ್ಯಕ್ತಿ ಇವರು.
ಡಾ|| ವೀರಭದ್ರಪ್ಪ ಗೌಡ ಹೊಸಮನಿ ಅವರು ಉಚಿತ ಆರೋಗ್ಯ ತಪಾಸಣಾ ಶಿಬಿರ ಮಾಡುವುದರಿಂದ ನನಗೆ ಹೆಮ್ಮೆ ಅನಿಸುತ್ತದೆ ಜನರ ಸೇವೆಯೇ ನನ್ನ ಸೇವೆ ಎಂದು ಹೇಳಿದರು.
ಡಾ||ಮಲ್ಲಿಕಾರ್ಜುನ ಹಚ್ಚೋಳ್ಳಿ ವೈದೇಹಿ ಆಸ್ಪತ್ರೆ ಬೆಂಗಳೂರು ಇವರು ವೈದ್ಯೋ ನಾರಾಯಣ ಹರಿ ಎನ್ನುವ ಹಾಗೆ ಕಣ್ಣಿನ ಚಿಕಿತ್ಸೆ ಮಾಡಿಸಿಕೊಂಡ ನಂತರ ವೈದ್ಯರು ನಿಮ್ಮ ಕಣ್ಣಿನ ಆಪರೇಶನ್ ಮಾಡಬೇಕು ಎಂದು ಹೇಳಿದರೆ ತಕ್ಷಣ ನನಗೆ ಒಂದು ಪೋನ್ ಕಾಲ್ ಮಾಡಿ ಸಾಕು ತಕ್ಷಣ ನಾವು ನಿಮ್ಮ ಕಣ್ಣಿನ ಆಪರೇಶನ್ ಕಲಬುರ್ಗಿ ಮಾಡಿಸಬೇಕಾ? ಬೆಂಗಳೂರು ನಲ್ಲಿ ಮಾಡಿಸಬೇಕಾ ಎಂದು ನಿವು ಹೇಳಿದರೆ ಸಾಕು ಅದರ ಸಂಪೂರ್ಣ ಖರ್ಚು ನಮ್ಮ ಆಶೀರ್ವಾದ ಟ್ರಸ್ಟ್ ಅಧ್ಯಕ್ಷರಾದ ಡಾ|| ವೀರಭದ್ರಪ್ಪ ಗೌಡರೇ ಸಂಪೂರ್ಣ ಖರ್ಚು ನೋಡಿಕೊಳ್ಳುತ್ತಾರೆ. ಹೀಗೆ ಹಲವಾರು ಕಾಯಿಲೆಗಳ ಚಿಕಿತ್ಸೆ ನೀಡುವುದರ ಜೊತೆಗೆ ದಿನ ದಲಿತರ ಮತ್ತು ಬಡವರ ಜನರಿಗೆ ಸೇವೆ ಮಾಡುತ್ತಾ ಬಂದವರು ನಮ್ಮ ಡಾ|| ವೀರಭದ್ರಪ್ಪ ಗೌಡ ಹೊಸಮನಿ ಅವರು ಎಂದು ವೈದೇಹಿ ಆಸ್ಪತ್ರೆ ಡಾ|| ಮಲ್ಲಿಕಾರ್ಜುನ ಹಚ್ಚೋಳ್ಳಿ ಅವರು ಹೇಳಿದರು.
ಈ ಕಣ್ಣಿನ ಶಿಬಿರದಲ್ಲಿ ಭಾಗವಹಿಸಿದ ಗಣ್ಯರು.
ಶ್ರೀಮತಿ ಭೀಮಬಾಯಿ ಗಂ/ ಅಂಬ್ಲಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರು, ರಾಮಣ್ಣ ಗೌಡ ಹೊಸಮನಿ, ಡಾ|| ಮಲ್ಲನಗೌಡ ಉಕ್ಕಿನಾಳ ಬಿಜೆಪಿ ಹಿರಿಯ ಮುಖಂಡರು, ಡಾ|| ವೀರಭದ್ರಪ್ಪ ಗೌಡ ಹೊಸಮನಿ ಆಶೀರ್ವಾದ ಟ್ರಸ್ಟ್ ಅಧ್ಯಕ್ಷರು ಹುಣಸಿಗಿ , ಯಲ್ಲಯ್ಯ ನಾಯಕ್ ವನದುರ್ಗ, ಡಾ|| ಮಲ್ಲಿಕಾರ್ಜುನ ಹಚ್ಚೋಳ್ಳಿ ವೈದೇಹಿ ಆಸ್ಪತ್ರೆ ಬೆಂಗಳೂರು, ಶಿವರಾಜ್ ಅಂಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಕ್ಕಿನಾಳ, ಬಸವರಾಜ ಬಡಿಗೇರ್ ( ವಿಶ್ವಕರ್ಮ) ಎಸ್.ಡಿ.ಎಂ ಅಧ್ಯಕ್ಷರು, ಸಂಗಪ್ಪ ಗ್ರಾಮ ಪಂಚಾಯಿತಿ ಸದಸ್ಯರು ಉಕ್ಕಿನಾಳ, ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ