ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಾಸಕ ಆರ್ ನರೇಂದ್ರ ರವರಿಂದ ಭೂಮಿ ಪೂಜೆ

ಹನೂರು:ತಾಲೂಕಿನ ತೆಳ್ಳನೂರು ಗ್ರಾಮದಿಂದ ಬಂಡಳ್ಳಿ ಗ್ರಾಮಕ್ಕೆ ಸಂಪರ್ಕ ಕಲಪಿಸುವ ಮುಖ್ಯ ರಸ್ತೆ ಗೆ ಶಾಸಕ ಆರ್ ನರೇಂದ್ರರವರಿಂದ ಭೂಮಿ ಪೂಜೆ ನೆರವೇರಿತು.

ಹನೂರು ತಾಲೂಕಿನ ತೆಳ್ಳನೂರು ಗ್ರಾಮದಿಂದ ಬಂಡಳ್ಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಮುಖ್ಯ ರಸ್ತೆಗೆ ಶಾಸಕ ಆರ್.ನರೇಂದ್ರ ರವರು ಇಂದು ಸುಮಾರು 7 ಕೋಟಿ 50 ಲಕ್ಷದ ಟೆಂಡರ್ ಆಗಿರುವ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿ ಈ ರಸ್ತೆಗೆ ಸುಮಾರು ವರ್ಷಗಳಿಂದ ರಸ್ತೆ ದುರಸ್ತಿ ಮಾಡಬೇಕು ಎಂದುಕೊಂಡಿದ್ದೆ ಆದರೆ ಅದು ಆಗುತ್ತಾನೆ ಇರಲಿಲ್ಲ ಆದರೆ ಇಂದು ಆ ಕೆಲಸ ಕೂಡಿ ಬಂದಿರುವುದು ಸಂತಸದ ವಿಷಯ ಈ ರಸ್ತೆ ನಿರ್ಮಾಣಕ್ಕೆ ನನ್ನ ಹೆಚ್ಚುವರಿ ಖರ್ಚಿನಲ್ಲೆ ಮಾಡುತ್ತಿದ್ದೇನೆ.ರಸ್ತೆ ಸರಿ ಇಲ್ಲ ಎಂದು ಜನರು ಇಷ್ಟು ದಿನ ನನಗೆ ಬೈದುಕೊಂಡಿದ್ದಾರೆ ಆದರೂ ಪರವಾಗಿಲ್ಲ ಯಾಕಂದರೆ ನಾನು ಕಳೆದ 15 ವರ್ಷಗಳ ಕಾಲದಿಂದ ಅನೇಕ ಅಭಿವೃದ್ಧಿ ಕೆಲಸ ಮಾಡುತ್ತಾ ಬಂದಿದ್ದೇನೆ ಆದರೂ ಕೆಲ ರಸ್ತೆ ಗಳು ಹಾಗೂ ಕೆಲವು ಸಣ್ಣ ಪುಟ ಕಾಮಗಾರಿಗಳು ಆಗಿರುವುದಿಲ್ಲ ಅಷ್ಟೇ,ಮಾನವನ ಸಹಜ ಗುಣ ಏನೆಂದರೆ ನೂರು ಕೆಲಸದಲ್ಲಿ 99 ಕೆಲಸಗಳು ಆಗಿ 1 ಕೆಲಸ ಆಗಿಲ್ಲ ಎಂದರೆ ಆಗಿರುವ 99 ಒಳ್ಳೆ ಕೆಲ್ಸಗಳು ಬಿಟ್ಟು ಆಗದೆ ಇರುವ ಒಂದು ಕೆಲಸದ ಬಗ್ಗೆ ಹೆಚ್ಚು ಹೇಳುತ್ತಾರೆ ಇದು ಮಾನವನ ಸಹಜ ಗುಣ ಅದು ನಾನು ಆದ್ರೂ ಹಾಗೆಯೇ ಎಂದು ಹೇಳಿದರು ನಂತರ ಮಾತನಾಡಿದ ಅವರು ಉಳಿದಂತಹ ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ಮಾಡುತ್ತೇನೆ ಎಂದರು ಈ ಸಂಧರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಜವಾದ್ ಅಹಮದ್,ಚಾಮುಲ್ ನಿರ್ದೇಶಕ ಶಾಹುಲ್ ಅಹಮ್ಮದ್(ತಾರಿಖ್,) ಬಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಿಲ್ಲತ್ ಜಾನ್,ಹಾಗೂ ತೆಳ್ಳನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಬಂಡಳ್ಳಿ ಹಾಗೂ ತೆಳ್ಳನೂರು ಗ್ರಾಮಸ್ಥರು ಹಾಜರಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ