ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಆಶ್ರಯ ಮನೆ‌ ಫಲಾನುಭವಿಗಳಿಗೆ ಹಕ್ಕು ಪತ್ರಕ್ಕಾಗಿ ಉಪವಾಸ‌ ಸತ್ಯಾಗ್ರಹ

ಮೈಸೂರು:ಕೃಷ್ಣರಾಜ ಕ್ಷೇತ್ರದ ಆಶ್ರಯ ಮನೆ ನಿವಾಸಿಗಳಿಗೆ ಅನ್ಯಾಯವಾಗಿದೆ ಎಂದು ‌ಆರೋಪಿಸಿ ಕರ್ನಾಟಕ ಪ್ರಜಾ ಪ್ರಾರ್ಟಿ ಅಭ್ಯರ್ಥಿ ತೇಜಸ್ವಿ ನಾಗಲಿಂಗಸ್ವಾಮಿ ಶುಕ್ರವಾರ ಉಪವಾಸ ಸತ್ಯಾಗ್ರಹ ಮಾಡಿದರು.

ಮೈಸೂರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ಉಪಾಸ ಸತ್ಯಾಗ್ರಹ ಮಾಡಿದ ತೇಜಸ್ವಿಯವರು ಕಳೆದ 20 ವರ್ಷಗಳಿಂದ ಅಲ್ಲಿನ ನಿವಾಸಿಗಳು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದಾರೆ ಆದರೆ ಇದುವರೆಗೆ ಹಕ್ಕುಪತ್ರವನ್ನಾಗಲಿ ಮತ್ತು ಹಕ್ಕು ಖುಲಾಸೆ ಪತ್ರವನ್ನಾಗಲಿ ನೀಡಿಲ್ಲವೆಂದು ದೂರಿದರು.

2003 ಮತ್ತು 2004 ನೇ ಸಾಲಿನಲ್ಲಿ 850 ಮಂದಿ ಫಲಾನುಭವಿಗಳನ್ನು ಗುರುತಿಸಿ ಅವರುಗಳಿಂದ ತಲಾ ಹತ್ತು ಸಾವಿರ ರೂಗಳನ್ನು ಕಟ್ಟಿಸಿಕೊಳ್ಳಲಾಗಿದೆ.

ಸದರಿ ಫಲಾನುಭವಿಗಳಿಗೆ ಆಶ್ರಯ ಸಮಿತಿ ಅಧಿಕಾರಿಗಳು ಸರ್ವೆ ನಂಬರ್ ಮತ್ತು ಸೈಟ್ ನಂಬರ್ ಗಳನ್ನು ಹಾಕಿ ಅಳತೆ ಮಾಡಿಸಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದಾರೆ ಎಂದು ತಿಳಿಸಿದರು

ಆದರೆ ಈ ಫಲಾನುಭವಿಗಳಿಗೆ ಮನೆ ನೀಡುವುದರಲ್ಲಿ ಕೃಷ್ಣರಾಜ ಆಶ್ರಯ ಸಮಿತಿ ವಿಫಲವಾಗಿದೆ, ಆದ್ದರಿಂದ ಕೂಡಲೇ ಈ ಫಲಾನುಭವಿಗಳಿಗೆ ಹಕ್ಕು ಪತ್ರ ಮತ್ತು ಹಕ್ಕು ಖುಲಾಸೆ ಪತ್ರವನ್ನು ನೀಡಬೇಕೆಂದು ಮೈಸೂರು ನಗರ ಪಾಲಿಕೆ ಆಯುಕ್ತರನ್ನು ತೇಜಸ್ವಿ ಒತ್ತಾಯಿಸಿದರು.

ಸತ್ಯಾಗ್ರಹದ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ಬಹಳಷ್ಟು ಮಂದಿ ಹಾಜರಿದ್ದರು. ಅಲ್ಲದೆ ಕರ್ನಾಟಕ ಪ್ರಜಾ ಪಾರ್ಟಿಯ ರಾಜ್ಯಾಧ್ಯಕ್ಷ ಡಾ.ಶಿವಣ್ಣ ಅವರು ತೇಜಸ್ವಿ ಅವರಿಗೆ ಸಾಥ್ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ಯ ಮೈಸೂರು ಜಿಲ್ಲಾಧ್ಯಕ್ಷ ಕುಮಾರ ಸ್ವಾಮಿ, ಮೈಸೂರು ಮಾಜಿ ಜಿಲ್ಲಾಧ್ಯಕ್ಷ ಲೋಕೇಶ್, ಗುರುದತ್ತ,ಸಿದ್ದಲಿಂಗ ಮೂರ್ತಿ,ಶೈಲೇಶ್, ಜೀವನ್,ಪಳನಿ ಸ್ವಾಮಿ,
ಕೃಷ್ಣ ರಾಜ ಕ್ಷೇತ್ರದ ಯುವ ಘಟಕದ ಅಧ್ಯಕ್ಷ ರವಿಕಾಳೇ ಗೌಡ ಹಾಗೂ ಕಾರ್ಯಕರ್ತರು ಹಾಜರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ