ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮುಂಡಗೋಡ ದಲ್ಲಿ ಗೋಮಾಂಸ ಮಾರಾಟಕ್ಕಿಲ್ಲ ಕೊನೆ

ಉತ್ತರ ಕನ್ನಡ/ಮುಂಡಗೋಡ:
ಕರ್ನಾಟಕ ವಿಧಾನಸಭೆಯ ಎಂಟನೆಯ ಅಧಿವೇಶನದಲ್ಲಿ
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020 ಮಂಡನೆ ಆಗಿದ್ದರೂ ಮುಂಡಗೋಡದಲ್ಲಿ ಕಾಯ್ದೆ ಮಾತ್ರ ಇನ್ನೂ ಸಂಪೂರ್ಣವಾಗಿ ಅನುಷ್ಠಾನ ವಾಗದೇ ಗೋಮಾಂಸ ಮಾರಾಟ ಎಗ್ಗಿಲ್ಲದೆ ಯಾರ ಭಯ ಭೀತಿ ಇಲ್ಲದೆ ಸಾಗಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ

ಕೈಗನ್ನಡಿಯಾಗಿದೆ.ಮುಂಡಗೋಡ ಗ್ರಾಮೀಣ ಭಾಗ ಹಾಗೂ ನಗರ ಪ್ರದೇಶಗಳಲ್ಲಿ ಗೋಮಾಂಸ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ ಸರಕು ಸಾಗಣೆ ವಾಹನಗಳಲ್ಲಿ ತಂದರೆ ದಾಳಿಯಾಗುತ್ತದೆ ಎಂಬ ಭೀತಿಯಿಂದ ಐಷಾರಾಮಿ ಕಾರುಗಳು ಹಾಗೂ ದ್ವಿಚಕ್ರ ವಾಹನ ಹಾಗೂ ಸೋಮವಾರದ ಸಂತೆಯ ತರಕಾರಿ ವಾಹನಗಳಲ್ಲಿ ಕೂಡಾ ಗೋಮಾಂಸ ಸಾಗುತ್ತಿರುವುದು ಕಂಡುಬರುತ್ತಿದೆ ಮಾಂಸ ಮಾರಾಟಕ್ಕೆ ಕೆಲವೊಂದು ಡೆಲಿವರಿ ಪಾಯಿಂಟ್ ಮಾಡಿಕೊಂಡಿರುವ ಮಾರಾಟಗಾರರು ಶುಕ್ರವಾರ ಮಂಗಳವಾರ ದಿನಗಳಲ್ಲಿ ಮನೆ ಮನೆಗೆ ಹೋಗಿ ವಿತರಣೆ ಮಾಡುತ್ತಾರೆ, ಗೋಮಾಂಸ ತುಂಬಿದ ಚೀಲಗಳನ್ನು ಬೈಕ್ ನಲ್ಲಿ ಇಟ್ಟು ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದು,ಇವರನ್ನು ಕಾನೂನುಬದ್ಧವಾಗಿ ನಿಯಂತ್ರಿಸುವ ಕೆಲಸ ಆಗಬೇಕಿದೆ.ಸವಣೂರು, ಕಲಘಟಗಿ, ಗುಂಜವತಿ, ಮುಂಡಗೋಡ ದ ಗ್ರಾಮೀಣ,ಯಲ್ಲಾಪುರ ಭಾಗಗಳಿಂದ ಕಾರು, ಬೈಕ್ , ಸಂತೆಯ ವಾಹನಗಳಲ್ಲಿ ಪ್ಯಾಕ್ ಮಾಡಲಾದ ಗೋಮಾಂಸ ಸಾಗಿಸುತ್ತಿದ್ದಾರೆ,ಹೊರ ಭಾಗಗಳಲ್ಲಿ ವಧೆ ಮಾಡಿ ಅವುಗಳನ್ನು ಪ್ಲಾಸ್ಟಿಕ್ ಪೊಟ್ಟಣದಲ್ಲಿ ಪಾರ್ಸೆಲ್ ಮೂಲಕ ವಿತರಣೆ ಮಾಡುತ್ತಿದ್ದಾರೆ. ಗೋಮಾಂಸ ಮಾರಾಟದ ಬಗ್ಗೆ ಮಾಹಿತಿ ನೀಡಿದ ಸಾರ್ವಜನಿಕರು ಮಾರಾಟಗಾರರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅಮಾಯಕ ಗೋವುಗಳ ವಧೆಯನ್ನು ನಿಲ್ಲಿಸುವಂತೆ ಅಧಿಕಾರಿಗಳನ್ನು ಆಗ್ರಹಿಸುತ್ತಿದ್ದಾರೆ. ಒಟ್ಟಿನಲ್ಲಿ ಸರ್ಕಾರಗಳು ತಂದ ಕಾನೂನುಗಳು ಸಂಪೂರ್ಣವಾಗಿ ಅನುಷ್ಠಾನ ವಾಗಬೇಕಾದರೆ ಸಂಬಂಧ ಇಲಾಖೆಗಳು ಸರಿಯಾಗಿ ಕೆಲಸ ಮಾಡಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

-ಕರುನಾಡ ಕಂದ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ