ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮನೆ ಮನದಲ್ಲಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ: ಸುರೇಶ್ ಗೋನಾಳ್


ಕಾರಟಗಿ:ತಾಲೂಕಿನ ಕನಕಗಿರಿ ಕ್ಷೇತ್ರದ ಸಿಂಗನಾಳ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾವಣೆ ಪ್ರಣಾಳಿಕೆಗಳ ಕಾಂಗ್ರೆಸ್ ಗ್ಯಾರಂಟಿ ಕಾರ್ಡನ್ನು ವಿತರಣೆ ಮಾಡುವ ಮೂಲಕ ಮಾತನಾಡಿದ ಕನಕಗಿರಿ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಸುರೇಶ್ ಗೋನಾಳ್ ಅವರು ಸನ್ಮಾನ್ಯ ದೀನದಲಿತರ ಬಂಧು ಹಿಂದುಳಿದ ವರ್ಗದ ಅರಸರು ಸಿದ್ದರಾಮಯ್ಯನವರ ಐದು ವರ್ಷ ಆಡಳಿತದಲ್ಲಿ 50 ಪ್ರಣಾಳಿಕೆ ಗಳಲ್ಲಿ 30ಕ್ಕೂ ಹೆಚ್ಚು ಪ್ರಣಾಳಿಕೆಗಳನ್ನು ರಾಜ್ಯದ ಜನರಿಗೆ ಸೌಲಭ್ಯವನ್ನು ಕಲ್ಪಿಸಿದ್ದಾರೆ, ನುಡಿದಂತ ನಡೆ ನಡೆದ ಸರಕಾರ ಎಂದರೆ ಶ್ರೀ ಸಿದ್ದರಾಮಯ್ಯನವರ ಸರಕಾರ ಮಕ್ಕಳಿಗೆ ಶೂ ಭಾಗ್ಯ, ಕ್ಷೀರ ಭಾಗ್ಯ, ಅನ್ನಭಾಗ್ಯ, 30ಕ್ಕೂ ಹೆಚ್ಚು ಸೌಲಭ್ಯ ಕಲ್ಪಿಸುವ ಮೂಲಕ ಜನ ಮನದಲ್ಲೂ ಇಂದಿಗೂ ಜನರು ನೆನೆಯುತ್ತಿದ್ದಾರೆ ಎಂದರು, ದುರಾಳದ ರಾಜಕೀಯವರಿಂದ ಸರಕಾರ ಬೀಳಿಸಿದರು , ಜನರ ಮನದಲ್ಲಿನ ಸಿದ್ದರಾಮಯ್ಯನವರನ್ನು ಬೀಳಿಸಲು ಸಾಧ್ಯವಿಲ್ಲ ಎಂದರು, ನಂತರ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ರುದ್ರೇಶ್ ಬಿ ಮಾತನಾಡಿ ಕಾಂಗ್ರೆಸ್ ಸರಕಾರದ ಇದ್ದಾಗ ರಾಜ್ಯದ ಹಿಂದುಳಿದ ವರ್ಗದವರನ್ನು, ಮುನ್ನಡೆಸುವ ಮೂಲಕ ಎಲ್ಲಾ ಸಮಾಜದ ವರ್ಗದವರಿಗೂ ಬೇಧ ಭಾವ ಇಲ್ಲದೆ ಸರ್ಕಾರದ ಸೌಲಭ್ಯವನ್ನು ಕಲ್ಪಿಸಿದ್ದಾರೆ ಎಂದರು, ಈ ಸಂದರ್ಭದಲ್ಲಿ ಗಂಗಪ್ಪ ಬಿ, ಯಮನೂರಪ್ಪ ಭೂಪೂರ, ಬಸವರಾಜ ಹಾಗಲದಾಳ, ಸುಭಾಷ್, ಯಮನೂರಪ್ಪ ಕುಂಟೋಜಿ, ಹನುಮೇಶ ತಳವಾರ್, ಶಿವನಗೌಡ ಪೊಲೀಸ್ ಪಾಟೀಲ್, ನಾಗಪ್ಪ ನವಲಿ, ಶೇಖರಪ್ಪ ಹಗಲದಾಳ್, ಮಂಜುನಾಥ , ಲಕ್ಷ್ಮಣ ಕುಂಟೋಜಿ,ನಿಂಗಪ್ಪ ಹಟ್ಟಿ, ಶಿವಪ್ಪ ಉಪ್ಪಾರ್, ಗ್ರಾಮದ ಗುರಿ ಹಿರಿಯರು ಹಾಗೂ ಯುವಕರು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ