ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರಾಮಾನುಜ ರಸ್ತೆಯ “ಹಿರಿಯ ನಾಗರಿಕರ ಡೇ ಕೇರ್ ಸೆಂಟರ್” ಗೆ “ಮಾಜಿ ನಗರ ಪಾಲಿಕೆ ಸದಸ್ಯ” ದಿವಂಗತ. (ಎನ್, ಸುನೀಲ್ ಕುಮಾರ್) ರವರ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸಿದ ಯುವ ನಾಯಕ “ಶ್ರೀ ತೇಜಸ್ವಿ ನಾಗಲಿಂಗ ಸ್ವಾಮಿ”

ಮೈಸೂರು: ವಾರ್ಡ ನಂಬರ್ 51ರ ರಾಮಾನುಜ ರಸ್ತೆಯ ಮಡಿವಾಳ ಸ್ವಾಮಿ ಮಠದ ಎದುರುಗಡೆ ಇರುವ ಅಕ್ಕ ಮಣ್ಣಿ ಆಸ್ಪತ್ರೆಯ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣ ವಾಗಿದ್ದು
ಆ ಕಟ್ಟಡಕ್ಕೆ ಶ್ರೀ ರಾಮಾನುಜಾಚಾರ್ಯ ಹಿರಿಯ ನಾಗರಿಕರ ಡೇ ಕೇರ್ ಸೆಂಟರ್ ಎಂಬ ಹೆಸರಿಡಲಾಗಿದೆ
ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದು 2013ರಿಂದ2018ರ ವರೆಗಿನ ಅಧಿಕಾರ ಅವಧಿಯಲ್ಲಿ ಅಗ್ರಹಾರ ವಾರ್ಡಿನ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸಿ ಕಳೆದ ವರ್ಷ ಕಾಲವಾದ “ಅಗ್ರಹಾರ ವಾರ್ಡಿನ ಅಭಿವೃದ್ಧಿಯ ಹರಿಕಾರ ಎನ್, ಸುನೀಲ್ ಕುಮಾರ್ ರವರ ಹೆಸರು ಇಡಬೇಕೆಂದು ಒತ್ತಾಯಿಸಿದ್ದಾರೆ,
ಆದರೆ ಈಗಾಗಲೇ ನಗರ ಪಾಲಿಕೆ ಸದಸ್ಯರಾದ “ಬಿ,ವಿ, ಮಂಜುನಾಥ್” ರವರು ಕ್ಷೇತ್ರದ ಶಾಸಕರಾದ “ಎಸ್ ಎ ರಾಮದಾಸ್” ರವರನ್ನು ಕರೆಸಿ ಶ್ರೀ ರಾಮಾನುಜ ಚರ್ಯರ ಹೆಸರಿನ ಡೇ ಕೇರ್ ಸೆಂಟರ್ ಉದ್ಘಾಟನೆ ಮಾಡಿಸಿದ್ದಾರೆ,
ಸದರಿ ನಗರ ಪಾಲಿಕೆ ಸದಸ್ಯರಾದ ಬಿ,ವಿ, ಮಂಜುನಾಥ್ ರವರು ಮತ್ತೋಮ್ಮೆ ಸ್ಥಳಿಯ ನಾಗರಿಕರ ಜೊತೆ ಚರ್ಚಿಸಿ ಸುನೀಲ್ ಕುಮಾರ್ ರವರ ಹೆಸರನ್ನು ಮರುನಾಮಕರಣ ಮಾಡಬೇಕೆಂದು ತೇಜಸ್ವಿ ರವರು ಒತ್ತಾಯಿಸಿದ್ದಾರೆ
ಅಲ್ಲದೆ ಈಗಾಗಲೇ ಪಕ್ಕದಲ್ಲೇ ಇರುವ ಸ್ಥಳದಲ್ಲಿ (ರಾಮಾನುಜ ಚರ್ಯರ ಪ್ರತಿಮೆ) ಸ್ಥಾಪಿಸುತ್ತಿದ್ದಿರಿ ಅದಕ್ಕೆ ನಮ್ಮ ವಿರೋಧ ಇಲ್ಲ
ಆದರೆ ಹಿರಿಯ ನಾಗರಿಕರ ಡೇ ಕೇರ್ ಸೆಂಟರ್ ಗೆ ದಿವಂಗತ ಸುನೀಲ್ ಕುಮಾರ್ ಹೆಸರನ್ನು ಮರುನಾಮಕರಣ ಮಾಡಿ ಪ್ರಸ್ತುತ ಸ್ಥಳಕ್ಕೆ “ಅಕ್ಕಮಣ್ಣಿ” ಯವರ “ಉದ್ಯಾನವನ” ಎಂದು ನಾಮಕರಣ ಮಾಡ ಬೇಕೆಂದು “ತೇಜಸ್ವಿ ನಾಗಲಿಂಗ ಸ್ವಾಮಿ” ಒತ್ತಾಯಿಸಿದ್ದಾರೆ
ಒಂದು ವೇಳೆ ಹೆಸರು ಬದಲಾವಣೆ ಮಾಡದೆ ಇದ್ದಲ್ಲಿ ಹೋರಾಟದ ಹಾದಿ ಹಿಡಿದು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಗುತ್ತಾದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ