ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜೆ ಡಿ ಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಹಲವು ಮುಖಂಡರು:ಶಾಸಕ ಆರ್ ನರೇಂದ್ರ

ಹನೂರು :ನನ್ನ ಅಭಿವೃದ್ಧಿ ಕಾರ್ಯ ಮೆಚ್ಚಿ ಹಲವು ಕಾರ್ಯಕರ್ತರು ಜೆ ಡಿ ಎಸ್ ಪಕ್ಷವನ್ನು ತೋರೆದು ನಮ್ಮ ಪಕ್ಷದ ಸಿದ್ದಾಂತವನ್ನು ಮೆಚ್ಚಿ ಇಂದು ಹಲವು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು,ಮರೂರು ಬಿ ಕೆ ಶಿವನಪ್ಪ ,ರಾಮಚಂದ್ರ ,ಭದ್ರ ,ಕೌದಳ್ಳಿ ನಬಿ ,ಸೇರಿದಂತೆ ಹಲವರು ಸೇರಿದರು . ಹಾಗೆಯೆ ಕ್ಷೇತ್ರದ ವ್ಯಾಪ್ತಿಯಲ್ಲಿನ ಹಲವು ಪ್ರದೇಶದಲ್ಲಿ ನಾನು ಈಗಾಗಲೇ ಪಕ್ಷ ನೀಡಿರುವ ಭರವಸೆಯನ್ನು ನಿಮಗೆ ಪ್ರಚಾರ ಮಾಡುವ ಸಲುವಾಗಿ ನಾವು ಈಗಾಗಲೇ ಪ್ರಾರಂಭಿಸಿದ್ದೆವಿ ಎಂದು ಶಾಸಕ ಆರ್ ನರೇಂದ್ರ ತಿಳಿಸಿದರು . ನಮ್ಮ ಪಕ್ಷದ ಕಳೆದ ಬಾರಿ ನೀಡಿದ ನೂರೈವತ್ತು ಭರವಸೆಗಳಲ್ಲಿ ನೂರ ಮೂವತ್ತುಕ್ಕೂ ಹೆಚ್ವು ಭರವಸೆ ಈಡೆರಿಸಿದ್ದೆವೆ ನಮ್ಮ ಸರ್ಕಾರ ಬಂದರೆ ಮುಂದಿನ ದಿನಗಳಲ್ಲಿ ಮನೆ ಯಜಮಾನನಿಗೆ ಎರಡು ಸಾವಿರ ರೂಪಾಯಿ ,ಹತ್ತುಕೆಜಿ ಅಕ್ಕಿ ,ಇನ್ನೂರು ಯುನಿಟ್ ವಿದ್ಯುತ್ ಉಚಿತ ,ಪಧವಿದರರಿಗೆ ಮೂರು ಸಾವಿರ ಹಣ ,ಐಟಿಐ ಮಾಡಿದವರಿಗೆ ಒಂದುವರೆ ಸಾವಿರ ಹಾಗೂ ಹಲವಾರು ಜನಪರ ಯೋಜನೆಯನ್ನು ಜಾರಿಗೆ ತರಲು ಎಲ್ಲಾರು ಕಾಂಗ್ರೆಸ್ ನ ವಿರೋದ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರ ಕೈ ಬಲಪಡಿಸುವ ಉದ್ದೇಶದಿಂದ ಎಲ್ಲಾರು ಮತ ನೀಡಬೇಕಾಗಿ ವಿನಂತಿ ಮಾಡಿಕೊಳ್ಳತ್ತೆವೆ ಎಂದು ತಿಳಿಸಿದರು . ಇಂದು ಪೊನ್ನಾಚಿ ,ಅಸ್ತೂರು ,ಕೌದಳ್ಳಿ, ಮಲ್ಲಯನಪುರ,ಚಿಕ್ಕಲುತ್ತೂರು, ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಪ್ರಚಾರ ಮಾಡಲಾಯಿತು. ಇದೇ ಸಮಯದಲ್ಲಿ ಕೆ ಈಶ್ವರ್,ಉದ್ಯಮಿ ಪೊನ್ನಾಚಿ ರಂಗಸ್ವಾಮಿ , ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಗಿರೀಶ್ , ಪುಟ್ಟಸ್ವಾಮಿ,ಕೌದಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ವಾಮಿ ,ಹರೀಶ್ ಕುಮಾರ್ ,ಪುಟ್ಟಸ್ವಾಮಿ,ಸಿದ್ದರಾಜು,ಜಾವೇದ್ ಅಹ್ಮದ್ ,ಚೇತನ್ ದೊರೈರಾಜು,ನಟರಾಜು ,ಮಾದೇಶ್ , ಮುಂತಾದವರು ಹಾಜರಿದ್ದರು,

ಹೂಗ್ಯಂ ಪಂಚಾಯತಿಯ ಕೂಡ್ಲೂರು ಗ್ರಾಮದ ಯುವಕರಾದ ನಂಜಪ್ಪ ,ಕಾಶಿಗೌಡ,ನಟೇಶ , ರವಿ ,ಮೂರ್ತಿ ಜೆ ಡಿ ಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಆದವರು.
ವರದಿ :ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ