ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿವಿಧ ಪಕ್ಷಗಳ ನಾಯಕರು ಬಿಜೆಪಿಗೆ ಸೇರ್ಪಡೆ

ಬೀದರ:ಔರಾದ ಮುಖಂಡರಾದ ಡಾ. ಬಿ.ವೈ ಪಾಟೀಲ್ ಮುಸ್ತಾಪೂರ, ನಾಗೇಂದ್ರ ಪಾಟೀಲ್, ಅಕ್ಷಯ ಪಾಟೀಲ್ ಸೇರಿ ಔರಾದನ ಹಲವು ಮುಖಂಡರು ವಿವಿಧ ಪಕ್ಷಗಳನ್ನು ತೊರೆದು ಸಚಿವ ಪ್ರಭು ಚವ್ಹಾಣ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಪಟ್ಟಣದಲ್ಲಿನ ಪಕ್ಷದ ಕಚೇರಿಯಲ್ಲಿ ಸಚಿವರು ಅವರನೆಲ್ಲಾ ಪಕ್ಷಕ್ಕೆ ಬರಮಾಡಿಕೊಂಡರು ಬಂದಂತ ಮುಖಂಡರನ್ನು ಪಕ್ಷದ ಶಾಲು ಹಾಗೂ ಧ್ವಜವನ್ನು ನೀಡಿ ಸ್ವಾಗತಿಸಿದರು. ಔರಾದ ಮೀಸಲು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಪ್ರಭು ಚವ್ಹಾಣ ಅವರು ಮಾಡಿರುವ ಕೆಲಸ ಸ್ಮರಣೀಯವಾಗಿದೆ ಅವರು ಬಡವರು, ಕೂಲಿಕಾರ್ಮಿಕರ, ದೀನ ದಲಿತರ ಬಗ್ಗೆ ಹೊಂದಿರುವ ಕಾಳಜಿ ಮೆಚ್ಚುವಂತದ್ದು, ಸಚಿವರಾದರೂ ಕೂಡ ಗ್ರಾಮ ಸಂಚಾರ ಕಾರ್ಯಕ್ರಮ ಕೈಗೊಂಡು ಬಡವರ ಮನೆ ಬಾಗಿಲೆಗೆ ಹೋಗಿ ಸಮಸ್ಯೆ ಪರಿಹಾರ ಕಲ್ಪಸಿದಾರೆ ಎಂದು ಹೆಳಿದರು

ಅವರು ಮೂರು ಭಾರಿ ಶಾಸಕ ಹಾಗೂ ಸಚಿವರಾದರು ತಪ್ಪದೆ ಪ್ರತಿ ಹಳ್ಳಿಗೂ ಭೇಟಿ ನೀಡಿ ಜನರ ಸಮಸ್ಯೆಯನ್ನು ಆಲಿಸುತ್ತಾರೆ ಯಾವುದೇ ಸಮಸ್ಯೆ ಇರಲಿ ಖುದ್ದಾಗಿ ಭೇಟಿ ನೀಡಿ ಅಗತ್ಯ ಪರಿಹಾರ ಸೂಚಿಸುತ್ತಾರೆ. ಇಂಥಹ ಜನನಾಯಕ ನಮಗೆ ಬೇಕು. ಅವರ ಕೆಲಸಗಳಿಂದ ಪ್ರೇರಿತರಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದೇವೆ ಎಂದರು.

ಯಾವಾಗಲೂ ಜನರ ಜತೆಗೆ ಇರುವ ಪ್ರಭು ಚವ್ಹಾಣರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಔರಾದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸುತ್ತೇವೆ ಎಂದು ಪಕ್ಷಕ್ಕೆ ಸೇರ್ಪಡೆಯಾದ ಪ್ರಮುಖರು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ದೊಂಡಿಭಾ ನರೋಟೆ, ಸತೀಶ ಪಾಟೀಲ್, ಸಚಿನ್ ರಾಠೋಡ್, ಖಂಡೋಬಾ ಕಂಗಟೆ, ರಮೇಶ ಗೌಡಾ, ಆರೀಫ್ ಪಠಾನ, ವಿಜಯ್‌ ಜಾಧವ, ನಾಗೇಂದ್ರ ಪಾಟೀಲ್‌ ಸೇರಿ ಅನೇಕರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ