ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಾಲೆ ಆವರಣದಲ್ಲಿ ತರಕಾರಿ ತೋಟ

ಔರಾದ:ತಾಲ್ಲೂಕಿನ ವನಮಾರಪಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕೈತೋಟ ಬೆಳೆಸುವ ಪ್ರಾತ್ಯಕ್ಷಿಕೆ ನಡೆಯಿತು.

ಸಮುದಾಯ ಸಂಪನ್ಮೂಲ ವ್ಯಕ್ತಿ ಮಲ್ಲಪ್ಪ ಗೌಡ ಅವರು ಕೈತೋಟ ಬೆಳೆಸುವ ವಿಧಾನ ಹೇಳಿಕೊಟ್ಟರು. 14 ಬಗೆಯ ತರಕಾರಿ, ಬಿಸಿಯೂಟಕ್ಕೆ ಬೇಕಾಗುವ ತರಕಾರಿ, ಶಾಲಾ ಆವರಣದಲ್ಲಿ ಬೆಳೆಸುವ ವಿಧಾನ ಹೇಳಿಕೊಟ್ಟರು. ಪಪ್ಪಾಯಿ ಹಾಗೂ ಬಾಳೆ ಹಣ್ಣು ಸುಲಭವಾಗಿ ಬೆಳೆಯಲು ಅವಕಾಶವಿದೆ ಎಂದು ಮಲ್ಲಪ್ಪ ಗೌಡ ಅವರು
ವಿವರಿಸಿದರು.

ಶಿಕ್ಷಕರು ಮನಸ್ಸು ಮಾಡಿದರೆ ವಾರದ ಆರು ದಿನ ಮಕ್ಕಳಿಗೆ ಬಗೆ ಬಗೆಯ ಪ್ರಕಾರದ ತರಕಾರಿ ಊಟ ಮಾಡಿಸಬಹುದೆಂದು ಮುಖ್ಯ ಶಿಕ್ಷಕ ಮಾಧವರಾವ ಭಾಲೆಕರ್ ತಿಳಿಸಿದರು.

ಈ ಸಂಧರ್ಭದಲ್ಲಿ ಗ್ರಾಮದ ಮುಖಂಡ ನಾಗನಾಥ ಮೊರ್ಗೆ ಶಿಕ್ಷಕಿ ಜೈಶ್ರೀ ಡೊಂಬಾಳೆ, ವೆಂಕಟ ಭಾಲ್ಕೆ, ದಿಗಂಬರ ಪಾಂಚಾಳ, ರುಕ್ಕಿಣಿಬಾಯಿ, ಮಹೇಶ ಪೂಜಾರಿ, ಮಹಬೂಬ್ ಪಟೇಲ್, ಮಮತಾ, ವಿದ್ಯಾ ವತಿ, ಶಾಲಾ ಸಮಿತಿ ಅಧ್ಯಕ್ಷ ಸಂಜು ಬಿರಾದಾರ, ಸೋಪಾನರಾವ ಇದ್ದರು..
ವರದಿ:ಅಮರ ಮುಕ್ತೆದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ