ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗದಗಕಾಟಾಚಾರದ ಕಾಮಗಾರಿ:ಚಾಪೆಯಂತೆ ಡಾಂಬಾರ್ ಹಾಕಿದ ಗುತ್ತಿಗೆದಾರ

ಎರಡೇ ತಿಂಗಳಲ್ಲಿ ಕಿತ್ತು ಹೋದ ₹9.29 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆ ಕಾಲಿಂದ ಒದ್ದರೆ ಕಿತ್ತು ಬರುತ್ತಿದೆ ಕಲ್ಲಿನ ಕಡಿ ಹಾಗೂ ಡಾಂಬಾರ್
ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ನೆರೇಗಲ್ ಹೋಬಳಿ ಹಾಲಕೆರೆ ಗ್ರಾಮದ ಹೊರಗಿನ ರಸ್ತೆಯನ್ನು ಅಂದಾಜು ₹9.29 ಕೋಟಿ ವೆಚ್ಚದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 2022 ಜನವರಿ 1ರಂದು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಪಡೆದು ಅಂದಾಜು ಎರಡು ತಿಂಗಳ ಹಿಂದೆ ಅಭಿವೃದ್ಧಿ ಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಆದರೆ ಗುತ್ತಿಗೆದಾರರು ವಿಳಂಬ ಮಾಡುವುದರ ಜೊತೆಗೆ ಗರಚು ಹಾಗೂ ಕಲ್ಲಿನ ಕಡಿಗಳ ಮೇಲೆ ನೆಪ ಮಾತ್ರಕ್ಕೆ ಡಾಂಬರು ಹಾಕಿದ್ದಾರೆ ಸಂಪೂರ್ಣ ಕಳಪೆಯಾಗಿರುವ ಕಾರಣ ಸಾಮಾನ್ಯ ವ್ಯಕ್ತಿ‌ ಜೋರಾಗಿ ಕಾಲಿಂದ ಒದ್ದರೆ ಕಟ್ಟಿಗೆಯಿಂದ ಸರಿಸಿದರೂ ಕೂಡಾ ರಸ್ತೆಗೆ ಹಾಕಿದ ಕಡಿ,ಡಾಂಬಾರು ಕಿತ್ತು ಬರುತ್ತಿದೆ ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ ₹9.29 ಲಕ್ಷ ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿ ಇಷ್ಟೊಂದು ಕಳಪೆ ಮಾಡುವ ಮೂಲಕ ಜನರ ಹಣವನ್ನು ಗುತ್ತಿಗೆದಾರರು, ಅಧಿಕಾರಿಗಳು ಪೋಲು ಮಾಡಿದ್ದಾರೆ ಆದ್ದರಿಂದ ಅಂತವರ ವಿರುದ್ಧ ಸಂಬಂಧಿಸಿದ ಇಲಾಖೆಯವರು ಕ್ರಮ ಕೈಗೊಳ್ಳಲು ಮುಂದಾಗಬೇಕು ಹಾಗೂ ರಸ್ತೆಯನ್ನು ಮತ್ತೊಮ್ಮೆ ಅಭಿವೃದ್ಧಿ ಪಡಿಸಲು ಎನ್ನುವುದು ಹಾಲಕೆರೆ ನಿಡಗುಂದಿಕೊಪ್ಪ ನೆರೇಗಲ್ ಬೂದಿಹಾಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ-ಉಸ್ಮಾನ ಬಾಗವಾನ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ