ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಆನೋ ಭದ್ರಾ:ಕೃತವೋ ಯಂತು ವಿಶ್ವತಃ-ಸುರೇಶ ಹಿರೇಮಠ


ಕಲಬುರಗಿ ಜಿಲ್ಲೆಯ ಜೇವರ್ಗಿ:ವಿಶ್ವದೆಲ್ಲೆಡೆಯಿಂದ ಜ್ಞಾನದ ಬೆಳಕು ಹರಿದು ಬರಲಿ ಎಂದು ನಮ್ಮ ಋಷಿ ಮುನಿಗಳು ಕೂಡಾ ಪ್ರಾರ್ಥಿಸಿದರು ನಾವೆಲ್ಲರೂ ವಿಶ್ವದ ಒಂದು ಅಂಗವೆಂಬುದೇ ಆ ಮಹಾತ್ಮರ ಸಂದೇಶವಾಗಿದೆ ಆದುದರಿಂದ ಪವಿತ್ರವಾದ ಜ್ಞಾನದಾಸೋಹವನ್ನು ಮಾಡುವ ಗುರುಗಳಲ್ಲಿ ಬೇದ ಮಾಡಲಾಗದು ಜಗತ್ತಿನ ಯಾವ ಕಡೆಯಿಂದಾಗಲಿ ಜ್ಞಾನಾಮೃತವಾಗಲಿ,ಸದ್ವಿಚಾರವಾಗಲಿ ಎಲ್ಲಾ ಸ್ಪರ್ಧಾ ಆಕಾಂಕ್ಷಿಗಳು ಪಡೆದುಕೊಂಡರೆ ಜ್ಞಾನದ ಬುತ್ತಿ ಸಿದ್ದವಾಗುತ್ತದೆ ನಂತರ ಯಾವುದೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೇಮಕಾತಿಯ ಪರೀಕ್ಷೆ ಬರೆದರೆ ಉನ್ನಯ ಹುದ್ದೆ ಸಿಗುವುದರಲ್ಲಿ ಯಾವುದೇ ರೀತಿ ಸಂಶಯವಿಲ್ಲ ಎಂದು ಮಹಾಲಕ್ಷ್ಮೀ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಸುರೇಶ ಹಿರೇಮಠ ರವರು ಸುಧೀರ್ಘವಾಗಿ ಅಭಿಪ್ರೇರಣೆಯ ನುಡಿಗಳನ್ನು ಹೇಳಿದರು.
ದಿನಾಂಕ:09-07-2023 ಹಾಗೂ 16-07-2023 ರಂದು ಪ್ರತಿ ರವಿವಾರದ ವಾರಾಂತ್ಯದ ಪರೀಕ್ಷೆಯಂತೆ ಈ ಪರೀಕ್ಷೆಯಲ್ಲಿ ಕುಮಾರ:ಪಂಕಜಕುಮಾರ ಹಾಗೂ ಕುಮಾರ:ರಘುರವರಿಗೆ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಗ್ರಂಥಾಲಯದ ನಿರ್ದೇಶಕರಾದ ಚಂದ್ರಶೇಖರ ಪಾಟೀಲ್ ಮತ್ತು ಉಪನ್ಯಾಸಕರಾದ ಸುರೇಶ ಹಿರೇಮಠರವರು ಸ್ಪರ್ಧಾ ಆಕಾಂಕ್ಷಿಗಳಿಗೆ ಗೌರವ ಸನ್ಮಾನವನ್ನು ಮಾಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪನ್ಯಾಸಕರಾದ ಸುರೇಶ ಹಿರೇಮಠ,ಚಂದ್ರಶೇಖರ ಪಾಟೀಲ್,ಸೈಯದ ಪಟೇಲ್ ಶಹಾಪೂರ,ಅಂಬ್ರೇಶ್,ಭೀಮಾಶಂಕರ,ಉಮೇಶ,
ದುಂಡೇಶ ಅನೀಲ್,ಬಸ್ಸು ಹಾಗೂ ಸ್ಪರ್ಧಾರ್ಥಿಗಳು ಉಪಸ್ಥಿತರಿದ್ದರು.

ವರದಿ:ಚಂದ್ರಶೇಖರ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ