ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕುಸಿದು ಬೀಳುವ ಹಂತದಲ್ಲಿದೆ ಯಡ್ರಾಮಿ ತಾಲೂಕಿನ ನಾಡಕಚೇರಿ

ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದ ನಾಡಕಚೇರಿ ಮಳೆಗಾಲ ಬಂದರೆ ಸಾಕು ನಾಡಕಚೇರಿಯ ಎಲ್ಲಾ ಕೋಣೆಗಳು ಕೆಸರಿನ ಗದ್ದೆಯಾಗುತ್ತವೆ ಸುಮಾರು 6 ವರ್ಷಗಳಾದರೂ ತಿರುಗಿ ನೋಡದ ಜೇವರ್ಗಿ ಮತಕ್ಷೇತ್ರದ ಜನಪ್ರತಿನಿಧಿ ಹಾಗೂ ಕಂದಾಯ ಇಲಾಖೆ ತಹಶೀಲ್ದಾರರು ಯಾವುದೇ ಸೂಕ್ತ ಪರಿಹಾರವಾಗಲಿ ಅಥವಾ ಕೋಣೆ ಬದಲಾವಣೆಯಾಗಲಿ ಮಾಡಿರುವುದಿಲ್ಲ ಹೀಗಾಗಿ ನಾಡಕಚೇರಿಯ ಸಿಬ್ಬಂದಿಗಳು ಮಳೆಗಾಲದಲ್ಲಿ ನೀರಿನಲ್ಲಿ ಕುಳಿತು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಕೆಳಗಡೆ ಯುಪಿಎಸ್ ಕರೆಂಟ್ ಅಳವಡಿಸಿದೆ ನಾಡಕಚೇರಿಯ ಸಿಬ್ಬಂದಿಗಳು ಸ್ವಲ್ಪ ಯಾಮಾರಿದರೆ ಕರೆಂಟ್ ತಗಲಿ ಜೀವಕ್ಕೆ ಅಪಾಯ ಆಗುವದಂತೂ ಖಚಿತ ನಾಡಕಚೇರಿ ಕೆಲವೊಂದು ಕೋಣೆಗಳು ತಿಪ್ಪೆಯಂತಾಗಿದೆ ಸ್ವಚ್ಛತೆಯಂತೂ ಮೊದಲೇ ಇಲ್ಲ ಸರ್ಕಾರದ ಕಚೇರಿಗಳು ಹೀಗಿದ್ದರೆ ಸಾರ್ವಜನಿಕರ ಕೆಲಸಕ್ಕೆ ಸ್ಪಂದಿಸುವುದು ಹೇಗೆ ಎಂದು ಯಡ್ರಾಮಿ ತಾಲೂಕಿನ ಹೊಂಬೆಳಕು ಸಮಿತಿ ತಾಲೂಕ ಅಧ್ಯಕ್ಷರು ವಿಜಯಕುಮಾರ್ ಜೆ ಮಲ್ಲೆದ್ ಅವರು ಸರಕಾರಕ್ಕೆ ಹಾಗೂ ಜೇವರ್ಗಿ ತಾಲೂಕಿನ ಜನಪ್ರತಿನಿಧಿಗೆ ಯಡ್ರಾಮಿ ಪಟ್ಟಣದ ಸ್ಥಳೀಯರ ಪರವಾಗಿ ಹಾಗೂ ಯಡ್ರಾಮಿ ತಾಲೂಕಿನ ಸುತ್ತಮುತ್ತಲ್ಲಿನ ಹಳ್ಳಿಯ ಜನತೆಯ ಪರವಾಗಿ ಪ್ರಶ್ನಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ