ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕರ್ನಾಟಕ ರಾಜ್ಯ ರೈತ ಸಂಘದ ಘಟಕದ ವಾರ್ಷಿಕೋತ್ಸವ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಪುರ ಹೋಬಳಿಯ ಪುದುರಾಮಪುರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಘಟಕದ ವಾರ್ಷಿಕೋತ್ಸವವನ್ನು ದೀಪ ಬೆಳಗುವುದರ ಮೂಲಕ ಹಾಗೂ ರೈತ ಗೀತೆ ಮೂಲಕ ಉದ್ಘಾಟನೆ ಮಾಡಲಾಯಿತು.
ರೈತ ಸಂಘಕ್ಕೆ ನೂತನವಾಗಿ ಸೇರ್ಪಡೆಗೊಂಡ ಪುದು ರಾಮಪುರ ಗ್ರಾಮಸ್ಥರಿಗೆ ಶಾಲನ್ನು ಹಾಕಲಾಯಿತು.
ಈ ವೇಳೆ ಮಾತನಾಡಿದ ಹನೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್ ರೈತ ಸಂಘದ ಉದ್ದೇಶ ಭ್ರಷ್ಟಾಚಾರ ತೊಲಗಬೇಕು ಸಾರ್ವಜನಿಕರ ಕೆಲಸಗಳಲ್ಲಿ ರೈತ ಸಂಘದ ಅಧ್ಯಕ್ಷರು ಕಾರ್ಯಕರ್ತರು ಒಗ್ಗೂಡಬೇಕು.ಕೃಷಿ ಇಲಾಖೆಯಲ್ಲಿ 2019ರಲ್ಲಿ ಅನುದಾನವಿಲ್ಲದೆ ರೈತರಿಗೆ ಯಾವುದೇ ಪರಿಕಾರಗಳು ದೊರಕುತ್ತಿರಲಿಲ್ಲ,ರೈತ ಸಂಘಟನೆ ಮಾಡಿ ಸ್ಪಿಂಕ್ಲರ್ ಪೈಪ್,ಉತ್ತಮವಾದ ಬಿತ್ತನೆ ಬೀಜ,ಗುಣಮಟ್ಟದ ಔಷಧಿ ಇಂಥ ಸಮಸ್ಯೆಗಳು ರೈತ ಸಂಘಟನೆಯ ಮೂಲಕ ಬಗೆಹರಿದಿದೆ ಹನೂರು ತಾಲೂಕು ವ್ಯಾಪ್ತಿಯ ರಾಮಪುರ ಮಾರ್ಗಗಳಲ್ಲಿ ಸರ್ಕಾರಿ ಬಸ್ ಗಳು ಇಲ್ಲದ ಕಾರಣ ಚಳುವಳಿ ಮುಖಾಂತರ ಪ್ರತಿಭಟನೆ ಮಾಡ ಬೇಕಾಗುತ್ತದೆ.ರೈತ ಸಂಘದ ವಾರ್ಷಿಕೋತ್ಸವದ ಸಭೆ ಎಲ್ಲೂ ಮಾಡಿಲ್ಲ,ಈ ಕಾರ್ಯಕ್ರಮವು ಖುಷಿ ತಂದಿದೆ, ರೈತ ಸಂಘದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಶಿವ ಮಲ್ಲು ತಿಳಿಸಿದರು.ಜಿಲ್ಲಾ ಕಾರ್ಯದರ್ಶಿ ಶೈಲೆಂದ್ರ ಮಾತನಾಡಿ ರೈತ ಸಂಘದ ಸಂಘಟನೆಯಿಂದ ಶಕ್ತಿ ಬಂದಿದೆ ರೈತರ ಜಮೀನಿನಲ್ಲಿ ಕಾಡು ಪ್ರಾಣಿಗಳು ಬೆಳೆ ನಾಶಪಡಿಸಿದ ಸಮಯದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಪರಿಹಾರ ಪಡೆದುಕೊಳ್ಳಿ ಗ್ರಾಮೀಣ ಭಾಗದಲ್ಲಿ ವಯೋವೃದ್ದರು,ಅಂಗವಿಕಲರು,ಪಿಂಚಣಿ ಹಣವನ್ನ ಅಂಚೆ ಇಲಾಖೆ ನೌಕರರು ಲಂಚ ತೆಗೆದುಕೊಳ್ಳುತ್ತಾರೆ ಮುಂದಿನ ದಿನಗಳಲ್ಲಿ ಲಂಚ ತೆಗೆದುಕೊಳ್ಳದ ರೀತಿ ಮಾಡಬೇಕು.ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಅಂತಹ ವ್ಯಕ್ತಿಗಳನ್ನು ಗಡಿಪಾರು ಮಾಡಬೇಕು,ಆಧಾರ್,ಪಡಿತರ,ಬ್ಯಾಂಕ್ ಖಾತೆ ಸ್ಥಗಿತ ಮಾಡುವಂತೆ ಅಬಕಾರಿ ಇಲಾಖೆ, ಕಂದಾಯ ಇಲಾಖೆಗೆ ತಿಳಿಸಿದ್ದೇವೆ.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೆಬ್ಬಸೂರು ಬಸವಣ್ಣ,ಗೌರವಾಧ್ಯಕ್ಷ ಮಹದೇವ್, ಗೌಡೇಗೌಡ,ರವಿನಾಯ್ಡು,ಚಂದ್ರು,ಬಸವರಾಜು, ವೆಂಕಟಾಚಲ,ರಾಜಣ್ಣ,ರಾಜಮಣಿ, ಪುಂಗೋಡಿ,ಕನಕಮ್ಮ,ವರದರಾಜು,ಯುವ ಘಟಕದ ಅಧ್ಯಕ್ಷ ಸೂರ್ಯ ಹಾಗೂ ಮಹಿಳಾ ಮತ್ತು ಪುರುಷ ರೈತರು,ಗ್ರಾಮಸ್ಥರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ