ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿದ್ಯಾರ್ಥಿಗಳಿಗೆ ಕಳಪೆ ಸಮವಸ್ತ್ರ ಪೂರೈಕೆ ವಿರುದ್ಧ ಪೋಷಕರ ಆಕ್ರೋಶ

ಶಿವಮೊಗ್ಗ ಸೊರಬ ತಾಲೂಕಿನ
ಆನವಟ್ಟಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ಪೂರೈಸಿರುವ 2 ಜೊತೆ ಸಮವಸ್ತ್ರ ಬಟ್ಟೆಗಳು ಕಳಪೆ ಗುಣ ಮಟ್ಟದಿಂದ ಕೂಡಿದೆ ಎಂದು ಪಾಲಕರು ಆರೋಪಿಸಿದ್ದಾರೆ.
ಸರ್ಕಾರ ನೀಡುವ 1 ಸಮವಸ್ತ್ರದ ಜೊತೆಗೆ ಬೇರೆ ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ವಿತರಿಸಲಾಗುತ್ತದೆ ಈ ಬಾರಿ ಸಮವಸ್ತ್ರದ ಗುತ್ತಿಗೆದಾರನು ಹೆಚ್ಚು ಹಣ ಪಡೆದು ಕನಿಷ್ಟ ಗುಣ ಮಟ್ಟದ ಬಟ್ಟೆ ನೀಡಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ 8ನೇ ತರಗತಿಯ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪೂರೈಸಿರುವ ಬಟ್ಟೆಗಳ ಬೆಲೆ ಮಾರುಕಟ್ಟೆಯಲ್ಲಿ 350ರೂಪಾಯಿ ಅದರೆ ಪ್ರತಿ ಮಕ್ಕಳಿಂದ ಗುತ್ತಿಗೆದಾರ 850ರೂಪಾಯಿ ಪಡೆದಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.
ಪ್ರತಿ ವರ್ಷ ಪಾಲಕರ ಒಪ್ಪಿಗೆ ಪಡೆದು ಸಮವಸ್ತ್ರ ಪೂರೈಸಲಾಗುತ್ತಿತ್ತು ಶಿಕ್ಷಕರು ಮತ್ತು ಶಾಲಾ ಅಭವೃದ್ಧಿ ಸಮಿತಿಯವರು ಸ್ಥಳೀಯ ವ್ಯಾಪಾರಿಗಳ ಜೊತೆ ಪಾಲಕರಿಗೆ ಹೊರೆಯಾಗದಂತೆ
ಗುಣಮಟ್ಟದ ಸಮವಸ್ತ್ರ ಬಟ್ಟೆಯನ್ನು ಪೂರೈಸುವಂತೆ ಒಪ್ಪಂದ ಮಾಡಿಕೊಳ್ಳುತ್ತಿದ್ದರು.ಆದರೆ ಈ ವರ್ಷ ಕಾಲೇಜು ಅಭಿವೃದ್ಧಿ ಸಮಿತಿಗೆ ಹೊಸದಾಗಿ ನೇಮಕವಾಗಿರುವ ಸದಸ್ಯರು ಯಾರ ವಿಶ್ವಾಸ ಪಡೆಯದೆ ಸಮವಸ್ತ್ರ ಗುತ್ತಿಗೆ ನೀಡಿದ್ದಾರೆ ಎಂದು ಉಪ ಪ್ರಾಂಶುಪಾಲರು ಮಹದೇವಪ್ಪ ತಿಳಿಸಿದರು.
ಗುತ್ತಗೆದಾರರ ಸಂಗಮೇಶ್ ಗಾಳಪೂಜಿ ಕಡಿಮೆ ಬೆಲೆಗೆ ಗುಣ ಮಟ್ಟದ ಬಟ್ಟೆಗಳನ್ನು ವಿತರಿಸುವುದಾಗಿ ಭರವಸೆ ನೀಡಿದ್ದರು ಈಗ ಕಳಪೆ ಗುಣಮಟ್ಟದ ಸಮವಸ್ತ್ರ ವಿತರಿಸಿದ್ದು ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ ಆದ್ದರಿಂದ ಈ ವಿಷಯದ ಬಗ್ಗೆ ಕಾಲೇಜು ಅಭಿವೃದ್ಧಿ
ಅಧ್ಯಕ್ಷರಾಗಿರುವ ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯ ನಾಗರಾಜ್ ಶುಂಠಿ ವಿವರಿಸಿದ್ದಾರೆ .
ಈ ಗುತ್ತಿಗೆದಾರನು ಹೆದರಿಸಿ ವಾಮಮಾರ್ಗದ ಹಾದಿಯಲ್ಲಿ ಗುತ್ತಿಗೆ ಪಡೆದು ಸಮವಸ್ತ್ರ ವಿತರಣೆಯಲ್ಲಿ ವಂಚನೆ ಮಾಡಿದ್ದು ಇವನು ಪಡೆದ ಎಲ್ಲಾ ಟೆಂಡರ್ ಗಳನ್ನು ಈ ಕೂಡಲೇ ರದ್ದು ಮಾಡಬೇಕು ಎಂದು ಇದಕ್ಕೆ ಸಂಬಂದಿಸಿದ ಅಧಿಕಾರಿಗಳಿಗೆ ಪೋಷಕರು ಮತ್ತು ಸಾರ್ವಜನಿಕ ರಿಂದ ಮನವಿ.
ವರದಿ-ಶರತ್ ಗೌಡರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ