ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ದಂಪತಿಗಳಿಗೆ ಆಸರೆಯಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಬಂಡಳ್ಳಿ ವಲಯ ಹಲಗಪುರ ಕಾರ್ಯಕ್ಷೇತ್ರದ ಶ್ರೀಮತಿ ಲಕ್ಷ್ಮಮ್ಮ ಕುಂಟಯ್ಯ ದಂಪತಿಗಳಿಗೆ ತಿಂಗಳಿಗೆ ಸಾವಿರ ರೂ.ಗಳ ಮಾಶಾಸನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡುತ್ತಿದ್ದು ಇವರು ತಮ್ಮ ದೈನಂದಿನ ಜೀವನಕ್ಕಾಗಿ ಭಿಕ್ಷೆಯನ್ನು ಬೇಡಿ ತಿನ್ನುತ್ತಿದ್ದರು ಇವರು ಬಾಗಿಲೇ ಇಲ್ಲದ ಮನೆಯಲ್ಲಿ ವಾಸವಾಗಿದ್ದು ಮಳೆ ಬಂದರೆ ಮನೆ ಸೋರುತಿತ್ತು ಮುರಿದ ಗೋಡೆಯ ಮನೆಯಲ್ಲಿಯೇ ಈ ದಂಪತಿಗಳು ವಾಸವಾಗಿದ್ದರು, ಹಾಗೂ ಇವರನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಇವರ ಕಷ್ಟಕರ ಜೀವನ ನಡೆಸುತ್ತಿದ್ದರು,ಆದರೆ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶೌಚಾಲಯವನ್ನು ಒಳಗೊಂಡಂತೆ ವಾತ್ಸಲ್ಯ ಮನೆಯನ್ನು ಪೂಜ್ಯ ಖಾವಂದ ದಂಪತಿಗಳ ಆಶೀರ್ವಾದದಿಂದ ಕಟ್ಟಿಸಲಾಗಿದೆ,ಪ್ರಾದೇಶಿಕ ನಿರ್ದೇಶಕರಾದಂತ ಜಯರಾಮ್ ನೆಲ್ಲಿತ್ತಾಯ ರವರಿಂದ ವಾತ್ಸಲ್ಯ ಮನೆಯನ್ನು ಉದ್ಘಾಟನೆ ಮಾಡಿ ಬಡದಂಪತಿಗಳಿಗೆ ಹಸ್ತಾಂತರಿಸಲಾಯಿತು ಈ ಸಮಯದಲ್ಲಿ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ಲತಾ ಬಂಗೇರ ರವರು,ತಾಲೂಕು ಯೋಜನಾಧಿಕಾರಿಯದಂತಹ ಪ್ರವೀಣ್ ಕುಮಾರ್ ರವರು ಹಾಗೂ ಪಿಡಿಒ ಆದಂತಹ ವಿಶ್ವನಾಥ್, ಜಿಲ್ಲಾ ಜನಜಾಗ್ರತಿ ಸದ್ಯರು ರಾಚಾಪ್ಪ ಹಲಗಪುರ ಗ್ರಾಮದ ಮುಖಂಡರು ಗ್ರಾಮ ಪಂಚಾಯತ್ ಸದ್ಯಸರು ಮಹದೇವಪ್ಪ,ಪ್ರಭಣ್ಣ ಡೈರಿ ಮಾಜಿ ಅಧ್ಯಕ್ಷರು,ಮೇಲ್ವಿಚಾರಕರು ಸುರೇಶ ಎನ್.ಕೆ,ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ಭಾನುಪ್ರಿಯಾ,ಸೇವಾಪ್ರತಿನಿಧಿ ಸುಜಾತಾ ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ