ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಡಾಕ್ಟರ್ ಪದ್ಮಜಿತ್ ನಾಡಗೌಡ ಅವರ ಹುಟ್ಟು ಹಬ್ಬ ಆಚರಿಸಿದ ಆಟೋ ಚಾಲಕರು

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನಗರದ ಬಸ್ ನಿಲ್ದಾಣದ ಹತ್ತಿರ ಪ್ರತಿ ವರ್ಷ ದಂತೆ ಈ ವರ್ಷ ರಬಕವಿ ಬನಹಟ್ಟಿ ಆಟೋ ಚಾಲಕರ ಮತ್ತು ಮಾಲಕರ ವತಿಯಿಂದ,ನಗರದ ಖ್ಯಾತ ಕಣ್ಣಿನ ವೈದ್ಯ ಡಾ. ಪದ್ಮಜಿತ್ ನಾಡಗೋಡ್ ಅವರು 47 ನೇಯ ಹುಟ್ಟುಹಬ್ಬವನ್ನು ಕೇಕ್ ಅನ್ನು ಕಟ್ ಮಾಡುವುದರ ಮೂಲಕ ಬಹಳ ಸರಳವಾಗಿ ಆಚರಿಸಿದರು.
ಡಾಕ್ಟರ್ ಪದ್ಮ ಜಿತ್ ನಾಡಗೋಡ್ ಸಾಮಾಜಿಕ ಕಾರ್ಯಗಳನ್ನು ಮಾಡಿ,ಕಳೆದ ವರ್ಷ ತೇರದಾಳ್ ಮತಕ್ಷೇತ್ರಾಧ್ಯಾಂತ ಬಡವರಿಗಾಗಿ ಉಚಿತ ಕಣ್ಣಿನ ತಪಾಸ್ನೆ ಹಾಗೂ ಶಸ್ತ್ರಚಿಕಿತ್ಸೆ ಮಾಡಿ ಅಪಾರ ಖ್ಯಾತಿ ಕೀರ್ತಿಗೊಳಿಸಿದ್ದಾರೆ ಅವರು ಕಳೆದ ಲಾಕ್ ಡೌನ್ ಸಮಯದಲ್ಲಿ ಬಡವರಿಗೆ ಹಾಗೂ ಆಟೋ ಚಾಲಕರಿಗೆ ಕೂಡ ಸಹಾಯ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.ಈ ಸಂದರ್ಭದಲ್ಲಿ ಅಪಾರ ಆಟೋ ಅಭಿಮಾನಿಗಳಿಂದ ಅನ್ನ ಸಂತರ್ಪಣೆ ಕೂಡಾ ಮಾಡಿದ್ದರು.ಈ ಹುಟ್ಟು ಹಬ್ಬದ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆ ಉತ್ತರ ಕರ್ನಾಟಕದ ಅಧ್ಯಕ್ಷರಾದ ಹಾಗೂ ಸುದ್ದಿ ವೈಭವ ಮಾಸ ಪತ್ರಿಕೆಯ ಸಂಪಾದಕರಾದ ಮಾಳು ದುರ್ಗನವರ್ ಆಟೋ ಚಾಲಕರಾದ ದುಂಡಪ್ಪ ಹೊಸಕೋಟೆ,ದಾದಾಪೀರ್ ಶಿವಳ್ಳಿ ಕರವೇ ಘಟಕದ ಅಧ್ಯಕ್ಷ ಮೊಹಮ್ಮದ್ ಹುಸೇನ್ ಲೆಂಗ್ರೆ ಇನ್ನೂ ಅನೇಕ ಆಟೋ ಚಾಲಕರು ಹಾಗೂ ಮಾಲಕರು ಹಾಗೂ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.
ವರದಿ:ಮಹಿಬೂಬ್ ಎಂ ಬಾರಿಗಡ್ಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ