ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರೇಷ್ಮಾ ಕಂದಕೂರಗೆ ಒಲಿದ ರಾಷ್ಟ್ರಮಟ್ಟದ ಕಾವ್ಯ ರತ್ನ ಪ್ರಶಸ್ತಿ

ರಾಯಚೂರು:ಬೆಳಕು ಸಾಹಿತ್ತಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ.)ವತಿಯಿಂದ ದಿನಾಂಕ 24-12-2023 ರಂದು ರಾಜ್ಯ ಮಟ್ಟದ ಬೆಳಕು ಸಂಭ್ರಮ ನಗರದ ವೀರ ಶೈವ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ರೆಡ್ಡಿ ಕಿರಿಯ ಪ್ರಾಥಮಿಕ ಶಾಲೆ ಸಿಂಧನೂರು ಹಾಗು ಪಿಂಚಣಿ ವಂಚಿತ ನೌಕರರ ಸಂಘದ ಮಹಿಳಾ ಸದಸ್ಯರಾಗಿರುವ ರೇಷ್ಮಾ ಕಂದಕೂರರವರಿಗೆ ರಾಷ್ಟ್ರ ಮಟ್ಟದ ಕಾವ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರೇಷ್ಮಾ ಕಂದಕೂರ್ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು ಹವ್ಯಾಸ ಬರಹಗಾರರಾಗಿದ್ದು ಹಲವಾರು ಕಥೆ ಕವನಗಳ ರಚನೆ ಮಾಡಿರುತ್ತಾರೆ ಇವರು ರಚಿಸಿರುವ ಕಥೆ ಕವನಗಳು ಹಲವಾರು ದಿನಪತ್ರಿಕೆ,ವಾರಪತ್ರಿಕೆ ಹಾಗೂ ಇನ್ನಿತರ ಕಡೆಗಳಲ್ಲಿ ಪ್ರಕಟಗೊಂಡು ಉತ್ತಮ ಬರಹಗಾರ್ತಿಯಾಗಿ ಹೊರಹಮ್ಮಿದ್ದಾರೆ.ಈ ರಾಷ್ಟ್ರಮಟ್ಟದ ಕಾವ್ಯರತ್ನ ಪ್ರಶಸ್ತಿ ತಮ್ಮನ್ನು ಗುರುತಿಸಿ ಗೌರವ ನೀಡಿದ ಸಂಸ್ಥೆಗೆ ಧನ್ಯವಾದ ತಿಳಿಸುತ್ತಾ ತಮ್ಮ ಹವ್ಯಾಸಿ ಬರಹಕ್ಕೆ ಸಹಕರಿಸಿದ ತಮ್ಮ ಕುಟುಂಬದ ವರ್ಗದವರಿಗೆ ಹಾಗೂ ಸ್ನೇಹಿತ ವರ್ಗಕ್ಕೆ ರೇಷ್ಮಾ ಕಂದಕೂರ ಕೃತಜ್ಞತೆಗಳನ್ನು ತಿಳಿಸಿದರು
ವೇದಿಕೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು,ಹಿರಿಯ ಪತ್ರ ಕರ್ತರಾದ ಭೀಮಾರಾಯ ಹದ್ದಿನಾಳ, ಚನ್ನಬಸವ ಬ್ಯಾಗಲವಾಡ,ಅಭಯಕೃಷ್ಣ, ಅಭಯಶೀಲಾ,ನವನೀತ,ಸುರಕ್ಷಾ ಆಸ್ಪತ್ರೆ ವೈದ್ಯ ಡಾ. ಹರೀಶ,ಎರ್ರಿ ಸ್ವಾಮಿ,ದೊಡ್ಡಪ್ಪ ಪೂಜಾರಿ,ಮಾರುತಿ ಬಡಿಗೇರ,ಬಸವರಾಜ್ ಸೇರಿದಂತೆ ಬೆಳಕು ಸಂಸ್ಥೆಯ ಸಂಸ್ಥಾಪಕರಾದ ಅಣ್ಣಪ್ಪ ಮೇಟಿಗೌಡ ಉಪಸ್ಥಿತಿ ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ