ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹಳ್ಳಿಕಾರ್ ಎತ್ತುಗಳ ಅದ್ದೂರಿ ಮೆರವಣಿಗೆ

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮದಲ್ಲಿ ಕರ್ನಾಟಕದ ಪ್ರಸಿದ್ಧ ಚುಂಚನಕಟ್ಟೆ ಜಾತ್ರೆಯ ಪ್ರಯುಕ್ತ ಹಳ್ಳಿಕಾರ್ ಎತ್ತುಗಳನ್ನು ಶೃಂಗರಿಸಿ ಅವುಗಳಿಗೆ ವಿವಿಧ ರೀತಿಯ ಅಲಂಕಾರವನ್ನು ಮಾಡಿ ಎತ್ತುಗಳನ್ನು ಮದುವೆಯ ವಧುವಿನ ರೀತಿ ಶೃಂಗಾರ ಮಾಡಿ ಎತ್ತುಗಳನ್ನು ಪೂಜಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು ಗ್ರಾಮಸ್ಥರು ಎತ್ತುಗಳಿಗೆ ಆರತಿ ಎತ್ತಿ ಗ್ರಾಮದ ಎಲ್ಲಾ ಬೀದಿಗಳು ಮತ್ತು ಎಲ್ಲಾ ಮನೆಯ ಮುಂಭಾಗ ಎತ್ತುಗಳನ್ನು ಪೂಜಿಸಿ,ದೃಷ್ಟಿ ತೆಗೆದು ಮಾರುತಿ ಸರ್ಕಲ್ ನಲ್ಲಿ ಗ್ರಾಮಸ್ಥರು ಎತ್ತುಗಳ ಮಾಲೀಕರನ್ನು ಸನ್ಮಾನಿಸಿ ಅವುಗಳನ್ನು ಪ್ರೋತ್ಸಾಹಿಸಿದರು.ಇಲ್ಲಿ ಯಾವುದೇ ಜಾತಿ ಧರ್ಮವಿಲ್ಲದೆ ಪ್ರತಿಯೊಬ್ಬರೂ ಗ್ರಾಮದಲ್ಲಿ ಹಬ್ಬ ರೀತಿ ಆಚರಣೆ ಮಾಡಿರುವುದು ಒಂದು ವಿಶೇಷವಾಗಿ ಇರುವುದು ಕಂಡುಬಂದಿತು.ಎತ್ತುಗಳ ಮಾಲೀಕರಾದ ಭಾಸ್ಕರ್ ಕುಮಾರ್,ದೇವರಾಜ,ಸತೀಶ್ ಆರ್ ಇವರುಗಳು ಡಿಜೆ ಸೌಂಡ್ ವ್ಯವಸ್ಥೆ ಮಾಡಿದ್ದರು.ಇವರನ್ನು ಹಂಡಿತವಳ್ಳಿ ಗ್ರಾಮಸ್ಥರು ಯುವಕರು ಯಜಮಾನ್ರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಹಾಜರಿದ್ದು ಇವರಿಗೆ ಶುಭ ಹಾರೈಸಿದರು ಇದೇ ರೀತಿ ಹಳ್ಳಿಕಾರ್ ಎತ್ತು ಮತ್ತಷ್ಟು
ಸಂಖ್ಯೆ ಹೆಚ್ಚಿ ನಮ್ಮ ಸಂಸ್ಕೃತಿ ಉಳಿಯುವಂತಾಗಲಿ ಎಂದು ಎಲ್ಲಾ ಗ್ರಾಮಸ್ಥರು ಹಾರೈಸಿದರು.

ವರದಿ-ಆರ್.ಶಂಕರ್ ಹಂಡಿತವಳ್ಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ