ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಪಘಾತ:4 ವರ್ಷದ ಮಗು ಸಾವು

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಕೆ.ಅಯ್ಯನಹಳ್ಳಿ ಬಸ್ ಸ್ಟ್ಯಾಂಡ್ ನಲ್ಲಿ ವರ್ಷಿಣಿ ಎಂಬ ನಾಲ್ಕು ವರ್ಷದ ಹೆಣ್ಣು ಮಗು KA 36 B 0695 ನಂಬರಿನ ಕೊಟ್ಟೂರಿನಿಂದ ಹರಪನಹಳ್ಳಿಗೆ ಹೋಗುವ ಲಾರಿ ಗಾಲ್ಲಿಗೆ ಸಿಕ್ಕಿ ಸಾವನ್ನಪ್ಪಿದ್ದಾಳೆ.ಕೆ. ಅಯ್ಯನಹಳ್ಳಿ ಗ್ರಾಮದಿಂದ ಮೂಗಮ್ಮ ಎಂಬುವರು ತನ್ನ ಎರಡು ಮಕ್ಕಳನ್ನು ಆಸ್ಪತ್ರೆಗೆ ಎಂದು ಕೊಟ್ಟೂರಿಗೆ ಹೊರಟಿದ್ದ ಸಂದರ್ಭದಲ್ಲಿ ಬಸ್ ಸ್ಟ್ಯಾಂಡ್ ನಲ್ಲಿ ಬಸ್ಸಿಗಾಗಿ ಕಾಯುತ್ತಿರುವಾಗ ವರ್ಷಿಣಿ ಎಂಬ ಹೆಣ್ಣು ಮಗು ರೋಡಿನಲ್ಲಿ ಹಂಪ್ಸ್ ಗಳಿಲ್ಲದೆ ವೇಗವಾಗಿ ಬರುತ್ತಿದ್ದ ಲಾರಿ ಒಂದು ಡಿಕ್ಕಿ ಹೊಡೆದು ಕೊನೆಗೆ ಗಾಲಿಗೆ ಸಿಕ್ಕಿಬಿದ್ದು ಸ್ಥಳದಲ್ಲಿ ಮರಣ ಹೊಂದಿರುತ್ತಾರೆ.
ಇದಕ್ಕೆಲ್ಲ ಕಾರಣ ಪಿಡಬ್ಲ್ಯೂಡಿ ಸಿಸಿ ರಸ್ತೆ ಮಾಡಿದ ಕಾಂಟ್ರಾಕ್ಟರ್ ರವರಿಗೆ ಅನೇಕ ಬಾರಿ ಹಂಪ್ಸ್ ಗಳನ್ನು ಹಾಕಿ ಎಂದು ಕೇಳಿದರು ಹಾಕಲಿಲ್ಲ ಮತ್ತು ಇಲ್ಲಿ ಸರಿಯಾಗಿ ಹಂಪ್ಸ್ ಗಳಲ್ಲದೆ ತಿರುವುಗಳಲ್ಲಿ ಮಾರ್ಗ ಸೂಚನೆಗಳಿಲ್ಲದೆ ಇರುವುದು ನೋಡಿದರೆ ಆರ್ ಟಿ ಓ ಇವರ ನಿರ್ಲಕ್ಷತನವೇ ಎಂದು ಎದ್ದು ಕಾಣುತ್ತದೆ ಆದರೆ ಇಂದು ಈ ಮಗುವಿನ ಬಲಿ ತೆಗೆದುಕೊಂಡಿತು ಎಂದು ನೋವಿನಿಂದ ದುರ್ಗಪ್ಪ ಮತ್ತು ಕೆಂಚಪ್ಪನವರು ನಮ್ಮ ಸುದ್ದಿ ವಾಹಿನಿಯೊಂದಿಗೆ ಹಂಚಿಕೊಂಡರು.

ವರದಿ-ವೈ.ಮಹೇಶ್ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ