ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗಣತಂತ್ರ ಶುಭದಿನ

ಗಣತಂತ್ರದ ಶುಭದಿನ
ಸುವ್ಯವಸ್ಥೆಯ ಬಾಗೀನ
ಆಡಳಿತಕೆ ಮುನ್ನುಡಿ.

ಒಂದೆಂದು ಸಾರಿ ಸಾರಿ ಹೇಳಿ
ಬಂಧುತ್ವ ಬೆಸೆದ ಸುರುಳಿ
ಜಾತಿ ಬೇಧ ಮರೆಸಿ
ಭೀತಿಯ ಸರಿಸಿ.

ಸಂಭ್ರಮದ ಘಳಿಗೆ
ನಾಗರೀಕರ ಬಾಳಿಗೆ
ಸಂವಿಧಾನ ಜಾರಿಗೆ
ಜಾತ್ಯಾತೀತ ನಡಿಗೆ.

ಶಾಂತಿ ಸೌಹಾರ್ದತೆ
ನಮಗೆ ನಾವೇ ಬದ್ಧತೆ
ಸ್ವಾಭಿಮಾನದಿ ಜೀವಿತ
ಹಕ್ಕು ಕರ್ತವ್ಯದಿ ಸಂಜಾತ.

ಅಂಬೇಡ್ಕರ್ ರ ಪರಿಶ್ರಮ
ರಾಜೇಂದ್ರ ಪ್ರಸಾದರ ವಿಕ್ರಮ
ಹಲವರೆನ್ನದ ಹಿರಿಮೆ
ಸಮನ್ವತೆಯ ಗರಿಮೆ.

ಪ್ರಜಾಸತ್ತಾತ್ಮಕ ಸಂವಿಧಾನ
ವಿಶ್ವ ಪಥದ ಔತಣ
ಗರ್ವದಿ ಹೇಳುವೆ
ಸಮಾನತೆಯ ಸಾರುವೆ.

ಭರವಸೆಯ ಸಾಕಾರ
ಮಾನವೀಯತೆಯ ಸಂಸ್ಕಾರ
ಬಾನೆತ್ತರಕೆ ಹರಡಿದೆ
ಸ್ವಾತಂತ್ರ್ಯದ ಗರಿ ಬಿಚ್ಚಿದೆ.

ಎಲ್ಲೆಲ್ಲೂ ಸಂಭ್ರಮ
ಮನೆಮನೆಯಲ್ಲೂ ಸಂಗಮ
ಕೂಡಿ ಬಾಳುವ ಸಂಕಲ್ಪದಿ
ಹರ್ಷ ತುಂಬುವ ಸರದಿಷ

-ರೇಷ್ಮಾ ಕಂದಕೂರ
ಶಿಕ್ಷಕಿ
ಸಿಂಧನೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ