ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಒಂದೇ ದಿನ ಎರಡು ಮಾಂಗಲ್ಯ ಸರ ಕಳವು

ಹೊನ್ನಾಳಿ:ಒಂದೇ ದಿನ ಎರಡು ಕಡೆ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿರುವ ಸರಣಿ ಕಳ್ಳತನ ಹೊನ್ನಾಳಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ದುರ್ಗಿಗುಡಿ ಸರ್ಕಲ್‌ನ ಮೂರನೇ ಕ್ರಾಸ್ ನ ನಿವಾಸಿ ಶಿಕ್ಷಕಿ ಶಾರದಮ್ಮ ಅವರ 12 ಗ್ರಾಂ ತೂಕದ 60 ಸಾವಿರ ಮೌಲ್ಯದ ಬಂಗಾರದ ಸರವನ್ನು ಮಧ್ಯಾಹ್ನ 12 ರ ಸಮಯದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಸರ ಕಿತ್ತುಕೊಂಡು ಪರಾರಿಯಾಗಿದ್ದರೆ,ಅದೇ ದಿನ ರಾತ್ರಿ 8.30 ಸಮಯದಲ್ಲಿ ಹಿರೇಮಠದ ಗ್ರಾಮದ ಯಶೋಧಮ್ಮ ಎಂಬುವರ ಕೊರಳಿನಲ್ಲಿದ್ದ 50 ಗ್ರಾಂ ತೂಕದ 2,50,000 ಮೌಲ್ಯದ ಬಂಗಾರದ ಸರವನ್ನು ಬೈಕ್‌ನಲ್ಲಿ ಬಂದ ಕಿಡಿಗೇಡಿಗಳು ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುವ ಎರಡು ಪ್ರಕರಣಗಳು ಒಂದೇ ದಿನ ನಡೆದಿದೆ ಎಂದು ಪೊಲೀಸ್‌ಇನ್ಸ್‌ಪೆಕ್ಟ‌ರ್ ಸುನಿಲ್ ಕುಮಾ‌ರ್ ತಿಳಿಸಿದರು.
ಗೃಹಿಣಿಯರು ಮನೆಯಿಂದ ಹೊರ ಬರುವಾಗ ಹಿಂದೆಮುಂದೆ ಗಮನಿಸಿ ಎಚ್ಚರಿಕೆಯಿಂದ ಓಡಾಡಬೇಕು,ಸಾರ್ವಜನಿಕರು ನಿಮ್ಮ ಮನೆ ಆಸುಪಾಸಿನಲ್ಲಿ ಯಾರಾದರೂ ಅಪರಿಚಿತರು ಓಡಾಡಿಕೊಂಡು ಇದ್ದರೆ ಅಂತಹವರ ಬಗ್ಗೆ ನಮಗೆ ತಿಳಿಸಿ ಎಂದರು.ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ 392 ಪ್ರಕಾರ ಎರಡು ಸರಗಳ್ಳತನ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ವರದಿ-ಪ್ರಭಾಕರ ಡಿ ಎಂ ಹೊನ್ನಾಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ