ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಷ್ಟಗಳೊಂದಿಗೆ ಚೆನ್ನಾಗಿ ಬೆಂದರೆ ಮಾತ್ರ ಬೇಂದ್ರೆ ಆಗಲು ಸಾಧ್ಯ

ಕಲಬುರಗಿ:ಬದುಕಿನಲ್ಲಿ ಎದುರಾಗುವ ಕಷ್ಟಗಳೊಂದಿಗೆ ಚೆನ್ನಾಗಿ ಬೆಂದರೆ ಮಾತ್ರ ಬೇಂದ್ರೆ ಆಗಲು ಸಾಧ್ಯ ಎಂದು ಶ್ರೀನಿವಾಸ ಸರಡಗಿಯ ಪರಮ ಪೂಜ್ಯ ಡಾ.ರೇವಣಸಿದ್ಧ ಶಿವಾಚಾರ್ಯರು ಹೇಳಿದರು.
ನಿನ್ನೆ ಕರ್ನಾಟಕ ರಕ್ಷಣಾ‌‌ ವೇದಿಕೆ‌ (ಕಾವಲುಪಡೆ) ವತಿಯಿಂದ ಕಲಾ ಮಂಡಳದಲ್ಲಿ ಹಮ್ಮಿಕೊಡಿದ್ದ ವರಕವಿ ದ.ರಾ.ಬೇಂದ್ರೆ ಜನ್ಮ ದಿನಾಚರಣೆ ಕಾರ್ಯಕ್ರಮದ ದಿವ್ಯಸಾನ್ನಿಧ್ಯ‌ ವಹಿಸಿ ಮಾತನಾಡಿದ ಅವರು,ಇಳಿದು ಬಾ ತಾಯಿ,ಇಳಿದು ಬಾ ಎಂದು ಬೇಂದ್ರೆಯವರು ಭಾರತದಲ್ಲಿ ಬರಗಾಲ ಆವರಿಸಿದಾಗ ಹಾಡನ್ನು ಹಾಡಿ ಮಳೆರಾಯನನ್ನು ಕರೆದಿದ್ದು ವಿಶೇಷವಾಗಿತ್ತು ನೀ ಹಿಂಗ ನೋಡಬೇಡ ನನ್ನ,ತಿರುಗಿ ನಾ ಹೇಂಗ ನೋಡಲಿ ನಿನ್ನ ಎಂದು ಮಗನ ಸಾವಿನ ಸಂದರ್ಭದಲ್ಲಿ ತನ್ನ ಮಡದಿಗೆ ಹಾಡಿದಂಥ ಹಾಡು ಇಂದಿಗೂ ಪ್ರಸಿದ್ಧವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ‌ ಮಾತನಾಡಿದ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ದ.ರಾ. ಬೇಂದ್ರೆಯವರು ಲಕ್ಷ್ಮೇಶ್ವರ ಹತ್ತಿರದ ಶಿರಹಟ್ಟಿ ಪಟ್ಟಣದವರಾಗಿದ್ದು ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಅನೇಕ ಕವನ ಸಂಕಲನಗಳನ್ನು ರಚಿಸಿದ್ದಾರೆ. ಅವರೊಬ್ಬ ವರಕವಿ ಆಗಿದ್ದರು ಅವರ ನಾಕು ತಂತಿ ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಪ್ರತಿದಿನ ಬೇಂದ್ರೆಯವರನ್ನು ಓದುವುದರಿಂದ ಬದುಕಿನಲ್ಲಿ ಚೈತನ್ಯ ತುಂಬುತ್ತದೆ ಜೀವನದಲ್ಲಿ ಬರುವ ಸಂಕಷ್ಟಗಳನ್ನು ಪರಿಹರಿಸುವ ಶಕ್ತಿ ಲಭಿಸುತ್ತದೆ. ಸರ್ಕಾರ ಬೇಂದ್ರೆಯವರು ಜನ್ಮ ದಿನಾಚರಣೆಯನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಲು ಯೋಜನೆ ರೂಪಿಸಬೇಕು ಎಂದರು.
ಈ ಸಂದರ್ಭದಲ್ಲಿ ಬೇಂದ್ರೆಯವರ ಕವನಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಹೋರಾಟಗಾರ ಸಚಿನ ಫರತಾಬಾದ, ಮನೋಹರ ಪೊದ್ದಾರ,ಎಂ.ಡಿ.ಸಿದ್ದಿಕಿ, ಜಗನ್ನಾಥ ಸೂರ್ಯವಂಶಿ ವೇದಿಕೆಯ ಮೇಲಿದ್ದರು. ಹಿರಿಯ ಸಾಹಿತಿ‌ ಡಾ.ರಾಜಶೇಖರ ಮಾಂಗ ಅತಿಥಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು,ಸಾಹಿತಿಗಳಿಗೆ ದ.ರಾ.ಬೇಂದ್ರೆ ಪ್ರಶಸ್ತಿ ಹಾಗೂ ಸಂಗೀತ ಸಾಧಕರಿಗೆ ಗೌರವ ಪುರಸ್ಕಾರ ‌ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಪ್ರಹ್ಲಾದ ಹಡಗಿಲಕರ್,ಅರವಿಂದ ನಾಟೀಕಾರ,ಕಾಶಿ ಗೌಳಿ, ಉಮಾಕಾಂತ ನಾಟೀಕಾರ,ಮಧುಕರ ಕಾಂಬಳೆ, ಅನೀಲ ಡೊಂಗರಗಾಂವ,ಕವಿನ ನಾಟೀಕಾರ ಇನ್ನಿತರರಿದ್ದರು.ವೀರಭದ್ರಪ್ಪ ಅರಕೇರಿ ನಿರೂಪಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ