ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮನಸೂರೆಗೊಂಡ ಶಿವಭಕ್ತರ ಭಕ್ತಿ ವೈಭವ:ಹೆಚ್.ವಿ.ಶಿವರುದ್ರಪ್ಪ

ಭದ್ರಾವತಿ:ಶಿವಭಕ್ತರ ಭಕ್ತಿ ವೈಭವ ಎಲ್ಲಾ ಕಲಾವಿದರ ವೇಷ ಭೂಷಣ ಹಾಗೂ ಕಲಾ ಚಾತುರ್ಯದಿಂದ ಪ್ರೇಕ್ಷಕರ ಮನಸೂರೆಗೊಂಡಿದೆ ಎಂದು ಭದ್ರಾವತಿ ದೇವಾಲಯಗಳ ಸಮಿತಿ ಗೌರವಾಧ್ಯಕ್ಷ ಹೆಚ್.ವಿ ಶಿವರುದ್ರಪ್ಪ ಅಭಿಪ್ರಾಯಪಟ್ಟರು.
ಅವರು ಜನ್ನಾಪುರದ ಶ್ರೀ ಮಲ್ಲೇಶ್ವರ ದೇವಾಲಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಹಾಗೂ ಅಪರಂಜಿ ಅಭಿನಯ ಶಾಲೆ(ರಿ.), ಭದ್ರಾವತಿ ಇವರ ಸಹಯೋಗದಲ್ಲಿ ಗಾನ ಜಾನಪದ ಕಲಾವೃಂದ ಭದ್ರಾವತಿಯ ಕಲಾವಿದರು ಅಪರಂಜಿ ಶಿವರಾಜ್ ರವರ ಶಿವಭಕ್ತರ ಭಕ್ತಿ ವೈಭವ ನಾಟಕದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಾನ ಜಾನಪದ ಕಲಾ ವೃಂದವು ಶಿವರಾತ್ರಿಯ ವಿಶೇಷತೆಯ ಕಥೆಯುಳ್ಳ “ಮಹಾಸಾಧ್ವಿ ಮಲ್ಲಮ್ಮ”ನ ರೂಪಕದ ಪ್ರದರ್ಶನ ಹಾಗೂ ಶಿವನ ಮನಮೋಹಕ ನೃತ್ಯ ಪ್ರೇಕ್ಷಕರನ್ನು ರಂಜಿಸಿದವು.”ಕೋಳೂರು ಕೊಡಗೂಸು”ರೂಪಕದಲ್ಲಿ ಕು.ಮೋನಿಷಾ,ಬಾಲ ಶಿವ ದೇವು,ಮಲ್ಲಮ್ಮನಾಗಿ ಶ್ರೀಸುಧಾ ಸೇರಿದಂತೆ ಎಲ್ಲ ಕಲಾವಿದರೂ ತಮ್ಮ ಅಭಿನಯದ ಮೂಲಕ ನೆರೆದಿದ್ದವರ ಮನಗೆದ್ದರು.
ಸರಳವಾಗಿ ಶಿವಭಕ್ತರಿಗೆ ಭಕ್ತರಿಗೆ ಕಥೆ ಹೇಳುವ ಶೈಲಿ, ನಿರೂಪಣೆ,ರಚನೆ ಅಪರಂಜಿ ಶಿವರಾಜ್ ರವರ ರಂಗ ವಿನ್ಯಾಸ ಎಲ್ಲರ ಮೆಚ್ಚುಗೆ ಪಡೆಯಿತು.
ಜೆ.ವಿ.ವಿರೂಪಾಕ್ಷಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಅಪರಂಜಿ ಶಿವರಾಜ್ ಆಶಯ ನುಡಿಗಳನ್ನಾಡಿದರು.ಮಹಾಲಿಂಗಪ್ಪ ಕಾರ್ಯಕ್ರಮದ ನಿರೂಪಣೆಯೊಂದಿಗೆ ಸರ್ವರನ್ನು ಸ್ವಾಗತಿಸಿದರು. ಧರ್ಮ ವಂದಿಸಿದರು.ನಿವೃತ್ತ ಉಪನ್ಯಾಸಕಿ ಅನುಸೂಯ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವರದಿ:ಕೆ ಆರ್ ಶಂಕರ್ ಭದ್ರಾವತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ