ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಭಾರತ ದೇಶದ ಗಡಿ ಭದ್ರತಾ ಪಡೆಗೆ ವೈದ್ಯಾಧಿಕಾರಿಯಾಗಿ(Asst Commandant)ಕು.ಡಾ.ದಿವ್ಯಾ ರಾಜಪ್ಪ ನೇಮಕ

ಬೀದರ್:ಭಾರತ ದೇಶದ ಹೆಮ್ಮೆಯ ಗಡಿ ಭದ್ರತಾ ಪಡೆಗೆ ವೈದ್ಯಾಧಿಕಾರಿಯಾಗಿ (Asst Commandant) ನೇಮಕಗೊಂಡು ದೇಶದ ಸೇವೆಗಾಗಿ ತಂದೆಯ ಹಾದಿಯನ್ನೇ ಹಿಡಿದ ಬೀದರ ಜಿಲ್ಲಾ ಪೊಲೀಸ್ ಪೆದೆಯಾಗಿರುವ ಶ್ರೀ ರಾಜಪ್ಪರವರ ಮಗಳಾದ ಕು‌.ಡಾ: ದಿವ್ಯಾ ಅವರಿಗೆ ಅಭಿನಂದನೆಗಳು.
ಮಹಿಳೆ ಮತ್ತು ಪುರುಷರು ಸಮಾಜದಲ್ಲಿ ಸಮಾನರು,ಎಂಬಂತೆ ಬೀದರ ಜಿಲ್ಲಾ ಪೊಲೀಸ್ ಜನವಾಡಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ರಾಜಪ್ಪಾ ಇವರು Army Medical Corps ದಲ್ಲಿ ದೇಶದ ರಕ್ಷಣೆಯಲ್ಲಿ 1986 ರಿಂದ 2003 ರ ವರೆಗೆ ಸೇವೆ ಸಲ್ಲಿಸಿ ಅಸ್ಸಾಂ ತೇಜಪೂರದಿಂದ 2003 ರಲ್ಲಿ ನಾಯಕ ಹುದ್ದೆಯಿಂದ ನಿವೃತ್ತಿ ಹೊಂದಿ ಬೀದರ ಜಿಲ್ಲಾ ಪೊಲೀಸ್ ನೇಮಕಾತಿಯಲ್ಲಿ 2007 ನೇ ಸಾಲಿನಲ್ಲಿ ಸಿ.ಪಿ.ಸಿ ಹುದ್ದೆಗೆ ನೇಮಕಗೊಂಡು ಜನವಾಡಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ರಾಜಪ್ಪಾ ರವರ ಹಿರಿಯ ಮಗಳಾದ ಕು.ಡಾ: ದಿವ್ಯಾ ರವರು ಬೀದರಿನ ಬ್ರೀಮ್ಸ್ ದಿಂದ 2022 ರಲ್ಲಿ ತಮ್ಮ ವೈದ್ಯಕೀಯ ಶಿಕ್ಷಣ ಮುಗಿಸಿಕೊಂಡು 2023 ರಲ್ಲಿ ಭಾರತೀಯ ಭದ್ರತಾ ಪಡೆಯಲ್ಲಿ ವೈದ್ಯಾಧಿಕಾರಿಯಾಗಿ (Assistant commandant) ಹುದ್ದೆಗೆ ನೇಮಕಗೊಂಡು ಇಂದು ಮಧ್ಯಪ್ರದೇಶದ ಟೆಕ್ಕನಪುರ್ ನ ತರಬೇತಿ ಶಾಲೆಯಿಂದ ಪಥ ನಿರ್ಗಮನ ನಡೆದಿದ್ದು, ಅಸಾಂ ರಾಜ್ಯದ ಬಿಎಸ್ಎಫ್ ನ 16 ನೇ ಬಟಾಲಿಯನ್ ನಲ್ಲಿ ಮಗಳು ವೈದ್ಯಾಧಿಕಾರಿಯಾಗಿ ನೇಮಕಗೊಂಡಿರುತ್ತಾರೆ.ದೇಶದ ಸೇವೆಗಾಗಿ ತಂದೆಯ ಹೆಜ್ಜೆಯನ್ನೆ ಅನುಸರಿಸಿದ ಮಗಳ ಈ ಸಾಧನೆ ಬೀದರ್ ಜಿಲ್ಲೆಯ ಮಕ್ಕಳಿಗೆ ಪ್ರೇರಣೆಯಾಗಲಿ ಎಂದು ಕುಟುಂಬಸ್ತರೆಲ್ಲರು ಸಂತಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕು.ಡಾ.ದಿವ್ಯಾ ಅವರ ತಾಯಿ ಪ್ರಭಾವತಿ ಸಹೋದರಿಯರಾದ ಪ್ರಿಯಾ,ಭವ್ಯಾ ಸಹೋದರನಾದ ದರ್ಶನ ಮತ್ತು ಹಿರಿಯರು ಉಪಸ್ಥಿತರಿದ್ದರು.

ವರದಿ:ಸಾಗರ್ ಪಡಸಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ