ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಡಗರದೊಂದಿಗೆ ಜರುಗಿದ ಜೋಡಿ ರಥೋತ್ಸವ

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಕೋಟೆ ಭಾಗದ ಪೂರ್ವದ ಶ್ರೀ ವೀರಭದ್ರೇಶ್ವರ ಸ್ವಾಮಿ ಮತ್ತು ರೇಣುಕಾಚಾರ್ಯರ ಸ್ವಾಮಿ ಮೂರ್ತಿಗಳ ಜೋಡಿ ರಥೋತ್ಸವ ಶುಕ್ರವಾರ ಸಂಜೆ 5.45ರ ಸುಮಾರಿನ ಬ್ರಾಹ್ಮ ಮುಹೂರ್ತದಲ್ಲಿ ಭಕ್ತರ ಸಡಗರ ಸಂಭ್ರಗಳೊಂದಿಗೆ ಜರುಗಿದವು.
ರಥೋತ್ಸವ ಚಾಲನೆ ಪಡೆಯುವುದಕ್ಕಿಂತ ಮುಂಚಿತವಾಗಿ ಉಭಯ ದೇವರುಗಳ ಮೂರ್ತಿಗಳನ್ನು ಆಯಾಗಾರ ಬಳಗದವರು ದೇವಸ್ಥಾನದಿಂದ ಸಕಲ ಬಿರುದಾವಳಿಗಳೊಂದಿಗೆ ಮೆರವಣಿಗೆ ಕೈಗೊಂಡು ಹೊರತಂದು ರಥಗಳ ಬಳಿಗೆ ತೆರಳಿದರು ನಂತರ ಉತ್ಸವ ಮೂರ್ತಿಗಳನ್ನು ರಥದ ಸುತ್ತ ಮೂರು ಪ್ರದಕ್ಷಣೆಗಳನ್ನು ಹಾಕಿದರು. ವೀರಭದ್ರೇಶ್ವರದ ರಥದಲ್ಲಿ ಕೊಟ್ಟೂರೇಶ್ವರ ಸ್ವಾಮಿಯ ಕ್ರಿಯಾ ಮೂರ್ತಿ ಆರ್.ಎಂ.ಶಿವಪ್ರಕಾಶ ಕೊಟ್ಟೂರು ದೇವರು,ರೇಣುಕಾ ಮೂರ್ತಿ ರಥದಲ್ಲಿ ಆಸೀನರಾಗಿದ್ದರು.

ನಂತರ ಶ್ರೀಸ್ವಾಮಿ ಪಟಾಕ್ಷಿ ಹರಾಜು ಪ್ರಕ್ರಿಯೆ ನಡೆದು 1,50,000 ರೂ ಗಳಿಗೆ ಕೂಗಿ,ಹಳ್ಳಿ ಗಂಗಮ್ಮ ತನ್ನ ದಾಗಿಸಿಕೊಂಡರು.ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಜೋಡಿ ರಥೋತ್ಸವಗಳು ಆರಂಭಗೊಂಡಿತು. ರಥೋತ್ಸವಗಳು ಗೌಡರ ಬೀದಿ,ಹಿರೇಮಠ,ಮುಖ್ಯ ರಸ್ತೆ ಮೂಲಕ ಸಾಗಿ ನಂತರ ದೇವಸ್ಥಾನದ ಬಳಿ ಬಂದು ನೆಲೆ ನಿಂತಿತು.ಆಯಗಾರ ಬಳಗದ ಆರ್,ಎಂ,ಗುರು,ಬಸವಸ್ವಾಮಿ,ಮಂಜುನಾಥಗೌಡ, ಕನ್ನಳ್ಳಿ ರಾಜಪ್ಪ,ಶಿವಕುಮಾರ ಗೌಡ,ರಾಜುಗೌಡ, ಸೋಮು,ಆರ್.ಎಂ.ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ