ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹೊನಲು ಬೆಳಕಿನ ಸ್ನೇಹ ಪೂರ್ವಕ ವಾಲಿಬಾಲ್ ಸೀಸನ್ 4

ಹನೂರು:ತಾಲೂಕಿನ ಬಿ.ಗುಂಡಾಪುರ ಗ್ರಾಮದಲ್ಲಿ ಹೊನಲು ಬೆಳಕಿನ ಸ್ನೇಹ ಪೂರ್ವಕ ವಾಲಿಬಾಲ್ ಸೀಸನ್ 4ರ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ಕ್ರೀಡಾಕೂಟವನ್ನು ಗ್ರಾಮದ ಯಜಮಾನರು, ಗ್ರಾ.ಪಂ.ಸದಸ್ಯರು ಉದ್ಘಾಟಿಸಿ ಚಾಲನೆ ನೀಡಿದರು.

ಪಂದ್ಯಾವಳಿಯಲ್ಲಿ ವಾಲಿಬಾಲ್ ಲೆಜೆಂಡ್ಸ್,ರಾಕ್ ಸ್ಟಾರ್ಸ್,ಹಾರ್ಡ್ ಹಿಟ್ಟರ್ಸ್,ಅಟ್ಯಾಕರ್ ಸ್ಕಾವ್ಡ್ಸ್ ನಾಲ್ಕು ತಂಡಗಳು ವೀರೋಚಿತ ಹಣಾಹಣಿ ನಡೆಸಿದವು.

ಅಂತಿಮವಾಗಿ ಹಾರ್ಡ್ ಹಿಟ್ಟರ್ಸ್ ತಂಡ ಅಟ್ಯಾಕರ್ ಸ್ಕಾವ್ಡ್ಸ್ ತಂಡದ ವಿರುದ್ಧ 2 ಅಂಕಗಳ ಅಂತರದಲ್ಲಿ ವಿಜೇತರಾಗಿ ಪ್ರಥಮ ಬಹುಮಾನವನ್ನು ಪಡೆಯಿತು. ಅಟ್ಯಾಕರ್ ಸ್ಕಾವ್ಡ್ಸ್ ತಂಡ ರನ್ನರ್ ಆಫ್ ತಂಡವಾಗಿ ಹೊರ ಹೊಮ್ಮಿತು.
ವಾಲಿಬಾಲ್ ಪಂದ್ಯಾವಳಿಯನ್ನು ಡಿ.ಮನೋಜ್, ವಿಕಾಸ್ ಶಿವಶಂಕರಪ್ಪ ಆಯೋಜಿಸಿದ್ದರು.
ಉದ್ಘಾಟನೆ ವೇದಿಕೆ ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯ ಚಿನ್ನಮುತ್ತು,ಗ್ರಾಮದ ಯಜಮಾನರಾದ ಕೆ.ಮಹಾದೇವ್, ಬಿ.ಎಸ್.ಎಫ್.ಮಹಾದೇವ್,ಮನೋಜ್, ವೆಂಕಟೇಶ್,ಸಿದ್ದರಾಜು,ಆರ್.ಮಹಾದೇವ್, ಚಿನ್ನಸ್ವಾಮಿ,ಯುವ ಮುಖಂಡರಾದ ಮಾದೇಶ್ ಕೆ.ಮಲ್ಲಯ್ಯ,ಶಿವಣ್ಣ ದೊಡ್ಡಮಾರಯ್ಯ ಪತ್ರಕರ್ತರಾದ ರಮೇಶ್,ಸುರೇಶ್, ಲ್ವಾಲಿಬಾಲ್ ತಂಡದ ನಾಯಕರುಗಳಾದ ಮನು,ಭರತ್,ಮಲ್ಲೇಶ್, ಸಂಜಯ್ ಕುಮಾರ್.ಎಸ್,ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ