ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಣ್ಣಿಗೆ ಕಾಣುವ ದೇವರು ನನ್ನವ್ವ:ಅವ್ವ (ತಾಯಿ) ನೀ ಭಾಳ ಸುಳ್ಳು ಹೇಳತಿ

ಮುಂಜಾನೆ ಜಲ್ದಿ ಎಬ್ಬಸಾಕ,ಆರಕ್ಕ,ಎಂಟು ಆಗೆತಿ ಅಂತಿ
ಜಳಕ ಮಾಡ ಜಳಕ ಮಾಡ ಅಂತ ಗಂಟ ಬೀಳತಿ
ನನಗ ಆರಾಮ ಇಲ್ಲಂದ್ರ,ದೃಷ್ಟಿ ಬಿಟ್ಟಾರ ಅಂತ ಓಣಿ ಒಳಗಿನ ಮಂದಿಗೆ ಬೈತಿ
ಸಣ್ಣ ಸಣ್ಣ ವಿಷಯಕ್ಕ ಅಳಕೋತ ಕುಂದರತಿ
ಅವ್ವ ನೀ ಭಾಳ ಸುಳ್ಳು ಹೇಳತಿ…

ಇದ್ದ ಅಡಗಿ ನನಗ ತಿನಿಸಿ,ನಂಗ ಹಸಿವಿಲ್ಲ ಯಪ್ಪ ಅಂತಿ
ನಾ ಮನ್ಯಾಗ ಇಲ್ಲಂದ್ರ ಹೋಳಗಿ ಮಾಡಲ್ಲ ಅಂತಿ
ನಾ ಎಷ್ಟು ದಪ್ಪಗಿದ್ರೂ ಸೊರಗಿ ನೋಡ್ ಯಪ್ಪ ಅಂತಿ
ಅವ್ವ ನೀ ಭಾಳ ಸುಳ್ಳು ಹೇಳತಿ…

ಎರಡು ರೊಟ್ಟಿ ಕಟ್ಟಿನಿ ಅಂತ
ನಾಕ ಜನ ತಿನ್ನುವಷ್ಟು ಬುತ್ತಿ ಕಟ್ಟತಿ
ಎನೂ ಇಲ್ಲ,ಏನೂ ಇಲ್ಲ ಅಂತ ಹೇಳಿ
ಚೀಲದಾಗ ಉಪ್ಪಿನಕಾಯಿ ಬಾಟಲಿ ಇಡತಿ
ಅವ್ವ ನಿ ಭಾಳ ಸುಳ್ಳು ಹೇಳತಿ.

ಅವ್ವ ನೀ ಭಾಳ ಸುಳ್ಳು ಹೇಳತಿ

ನನ್ನ ಜೊತೆ ಜಗಳಾಡಿದರ
ಮಾತು ಬಿಟ್ಟು ಸಿಟ್ಟ ಮಾಡ್ಕೊತಿ
ಒಂದೇ ತಾಸಿನ್ಯಾಗ ವಾಪಸ ಬಂದು
ನೀನ ಶ್ಯಾಣೆ ಎಂದು ರಮಿಸಿ ಸೋಲತಿ
ಅವ್ವ ನೀ ಭಾಳ ಸುಳ್ಳು ಹೇಳತಿ..

ಅಪ್ಪ ಹೊಸ ಸೀರಿ ತಗೋಳಾಕ ರೊಕ್ಕ ಕೊಟ್ರ
ಹಳೆ ಸೀರೆನ ಹೊಸದರಾಂಗ ಉಟ್ಕೊತಿ
ಮನ್ಯಾಗ ಯಾರಿಗೂ ಗೊತ್ತಾಗದಂಗ
ಅದೇ ರೊಕ್ಕ ನನಗ ಖರ್ಚಿಗೆ ಕೊಡ್ತಿ
ಅವ್ವ ನೀ ಭಾಳ ಸುಳ್ಳು ಹೇಳತಿ..

ನಾ ಗೆದ್ದರ ಉಪ್ಪು ಖಾರ ಹಚ್ಚಿ
ಎಲ್ಲರ ಮುಂದ ಹೇಳತಿ
ನನ್ನ ಕೆಟ್ಟ ಗುಣ ಎಲ್ಲರಿಂದ ಮುಚ್ಚಿ ಇಡ್ತಿ
ನನ್ನ ಸಲುವಾಗಿ ಉಪವಾಸ ಮಾಡಿ
ತೆಂಗಿನಕಾಯಿ ಒಡಸಿ ತಾಯತ ಕಟ್ಟತಿ
ಅವ್ವ ನೀ ಭಾಳ ಸುಳ್ಳು ಹೇಳತಿ..

ಅವ್ವ ನೀ ಭಾಳ ಸುಳ್ಳು ಹೇಳತಿ

ನಾ ಕೆಲಸದಾಗ ಮುಳುಗಿದರ
ನೀನೆ ನನ್ನ ಜಗತ್ತು ಅಂತಿ
ಜಗತ್ತಿನ್ಯಾಗ ನನ್ನಂತವ ಇಲ್ಲ ಅಂತ ಹೇಳಿ
ನನ್ನ ಚಿಂತ್ಯಾಗ ನಿನ್ನ ಸುಖ ಮರಿತಿ
ಅವ್ವ ನೀ ಭಾಳ ಸುಳ್ಳು ಹೇಳತಿ…

ನಿನ್ನ ಒಡವಿ ಮುರಿಸಿ
ನನಗ ಚೈನಾ ಮಾಡಿಸಿ ಹಾಕತೀ
ನಾ ಬಳಿ ಮಾಡಿಸಿ ತಂದರ
ಬ್ಯಾಡ ಬ್ಯಾಡ ಅಂತ ದೂರ ತಳ್ಳತಿ
ಅವ್ವ ನೀ ಭಾಳ ಸುಳ್ಳು ಹೇಳತಿ…

ವಯಸ್ಸಾಗಿ ಮೈ ಕೈ ನೋವಿದ್ದರೂ
ಯಾವಾಗ ಕೇಳಿದರು ಆರಾಮಿದಿನಿ ಅಂತಿ
ಓದಾಕ ಬರಿಯಾಕ ಬರಲಿಲ್ಲ ಅಂದ್ರೂ
ಎಲ್ಲಾರ ಮುಖ ಓದತಿ
ಅವ್ವ ನೀ ಭಾಳ ಸುಳ್ಳು ಹೇಳತಿ…

ನಿನ್ನ ಬಿಟ್ಟು ಎಲ್ಲೂ ಹೋಗಂಗಿಲ್ಲ
ನಿನ್ನ ಬಿಟ್ಟು ಎಲ್ಲೂ ಹೋಗಂಗಿಲ್ಲ
ಅಂತ ಹೇಳಿ ಒಂದು ದಿನ ಹೊಂಟ ಹೋಗತಿ
ಅವ್ವ ನೀ ಭಾಳ ಸುಳ್ಳು ಹೇಳತಿ…

ಅವ್ವ ನೀ ಭಾಳ ಸುಳ್ಳು
ಹೇಳತಿ…

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ