ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಾಮೂಹಿಕ ವಿವಾಹಗಳು ಬಡವರ ಪಾಲಿಗೆ ವರದಾನವಾಗಿವೆ: ಕಲ್ಲಯ್ಯಜ್ಜನವರು

ಕೊಪ್ಪಳ:ಸಾಮೂಹಿಕ ವಿವಾಹಗಳನ್ನು ಮಾಡುವ ಮೂಲಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಬಡವರ ಪಾಲಿಗೆ ವರದಾನವಾಗಿವೆ ಇಂದು ೧೫ ಜೋಡಿ ಮದುವೆ ಮಾಡಿರುವ ಸೋಂಪೂರ ಗ್ರಾಮದ ಪುರಾಣ ಸಮಿತಿಯ ಹಿರಿಯರ ಕಾರ್ಯ ಶ್ಲ್ಯಾಘನೀಯವಾದದು ಎಂದು ಶ್ರೀ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ತುಲಾಭಾರ ಸ್ವೀಕರಿಸಿ ಅವರು ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನಲ್ಲಿರುವ ಸೊಂಪೂರ ಗ್ರಾಮದಲ್ಲಿ ಮಹಾಮಹಿಮ ಕಲಬುರ್ಗಿ ಶ್ರೀ ಶರಣಬಸವೇಶ್ವರ ೫೭ ನೇ ಜಾತ್ರಾ ಮಹೋತ್ಸವ,ಸಾಮೂಹಿಕ ವಿವಾಹ,251 ಮುತ್ತೈದಿಯರಿಗೆ ಉಡಿ ತುಂಬುವ ಕಾರ್ಯಕ್ರಮ,ತುಲಾಭಾರ ಕಾರ್ಯಕ್ರಮದಲ್ಲಿ ಮಾತನಾಡಿ,ಸತಿ ಪತಿಗಳು ತಮ್ಮ ಸಂಸಾರದ ಬದುಕನ್ನು ಸುಂದರವಾಗಿ ನಡೆಸಿಕೊಂಡು ಹೊಗುವ ಹೊಣೆಗಾರಿಕೆ ನಿಮ್ಮ ಮೇಲಿದೆ,ಒಬ್ಬರ ಎಡಕ್ಕೆ,ಬಲಕ್ಕೆ ಹೊಗಲಾರದೆ,ಆದರ್ಶ ದಾಂಪತ್ಯ ಜೀವನ ನಿಮ್ಮದಾಗಬೇಕು ಎಂದರು.ಬೆದವಟ್ಟಿಯ ಶಿವಸಂಗಮೇಶ್ವರ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಚೆನ್ನಯ್ಯ ಸ್ವಾಮಿ ಹಿರೇಮಠ ಪೂಜಾ ಕಾರ್ಯ ವಿಧಾನಗಳನ್ನು ನೇರವೇರಿಸಿದರು,ಪ್ರವಚನಕಾರ
ಗುಂಡಣ್ಣ ಶರಣರು ಹುಣಶ್ಯಾಳ,ಪುರಾಣ ಪಠಣ ಹಾಗೂ ಸಂಗೀತ ಬಳಗದ ಬನ್ನಿಕೊಪ್ಪದ ಮಹಮ್ಮದಶರೀಫಸಾಬ ಯಲಿಗಾರ,ಡೋಣಿಯ ಸಂಜೀವಕುಮಾರ್ ಗುರಿಕಾರ ಸಂಗೀತ ಸೇವೆ ನೀಡಿದರು.ಈ ವೇಳೆ ಸಮಿತಿಯ ಸರ್ವ ಪದಾಧಿಕಾರಿಗಳು,ಯುವಕರು ಮತ್ತು ಮಹಿಳೆಯರ ಕುಂಭ ಕಳಸದೊಂದಿಗೆ ಮೇರವಣಿಗೆ ಸಾಗಿ ನಂತರ ಅನ್ನ ಸಂತರ್ಪಣೆ ಜರುಗಿತು.ಸೋಮನಗೌಡ್ರ ಕಾರ್ಯಕ್ರಮ ನಿರೂಪಿಸಿದರು.ಸಂಜೆ ೫.೩೦ ಕ್ಕೆ ಶ್ರೀ ಶರಣಬಸವೇಶ್ವರರ ಮಹಾರಥೋತ್ಸವ ಜರುಗಿತು ಸುತ್ತಮುತ್ತಲಿನ ಅಪಾರ ಭಕ್ತರು ಭಾಗವಹಿಸಿ ಉತ್ತತ್ತಿ ಅರ್ಪಿಸಿ ದರ್ಶನಾರ್ಶಿವಾದ ಪಡೆದುಕೊಂಡರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ