ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗುಂಡಿ ನಿಮ್ಮದು ಗಿಡ ನಮ್ಮದು ಅಭಿಯಾನ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಸಸಿ ನೆಡಲಾಯಿತು.
ಗುಂಡಿ ನಿಮ್ಮದು ಗಿಡ ನಮ್ಮದು ಅಭಿಯಾನವನ್ನು ಡಣಾಪೂರ ಹಸಿರು ಬಳಗ ಡಣಾಪೂರ ಗ್ರಾಮದ ವ್ಯಾಟ್ಸಾಪ್ ಗ್ರೂಪ್ ಗಳಲ್ಲಿ ಹಂಚಿಕೊಂಡಿದೆ.

ಗಿಡಗಳ ಸಂರಕ್ಷಣೆ ಜೊತೆಗೆ ಪರಿಸರ ಬೆಳೆಸುತ್ತಾ, ಕಾಳಜಿ ಮಾಡುತ್ತಾ ಬಂದಿದೆ. ಪರಿಸರ ಎಲ್ಲರಲ್ಲೂ ಮನೆ ಮನದಲ್ಲೂ ನೆಲೆಯಾಗಲಿ ಗಿಡನೆಡುವ ಪರಿಶ್ರಮ ಎಲ್ಲರಲ್ಲೂ ನೆಲೆಸಲಿ ಎಂಬದು ಹಾಗೂ ಗಿಡದ ಮಹತ್ವ ಪ್ರತಿಯೊಬ್ಬರಿಗೂ ಮುಟ್ಟಲಿ ಎಂಬ ನಿಟ್ಟಿನಲ್ಲಿ ಈ ಸಾರಿ ಈ ತಂಡ ವಿಶೇಷ ಅಭಿಯಾನ ಪ್ರಾರಂಭಿಸಿದೆ ಗುಂಡಿ ನಿಮ್ಮದು ಗಿಡ ನಮ್ಮದು ಗ್ರಾಮದಲ್ಲಿ ಯಾರೆ ತಮ್ಮ ಮನೆ ಮುಂದಾಗಲಿ ಅಥವಾ ಖಾಲಿ ಜಾಗದಲ್ಲಿ ಆಗಲಿ ಗುಂಡಿ ತೆಗೆದ ಪೋಟೊ ನಮಗೆ ಕಳಿಸಿದ್ದಲ್ಲಿ ಅವರ ಮನೆಗೆ ತೆರಳಿ ಗಿಡ ನೆಟ್ಟು ಗಿಡದ ಮಹತ್ವದ ಬಗ್ಗೆ ತಿಳಿಸುವ ಪ್ರಯತ್ನ ಈ ತಂಡ ಮಾಡುತ್ತಿದೆ ಈ ಸಾರಿ ಒಂದು ನೂರು ಒಂದು ಗಿಡ ನೆಡವ ಉದ್ದೇಶ ಇಟ್ಟುಕೊಂಡಿದ್ದೀವಿ ಎಂದು ಇಂದು ಐದು ಗುಂಡಿ ತೆಗೆದು ಪೋಟೊ ಹಾಕಿದ ಗ್ರಾಮದ ಹಿರಿಯರಾದ ಹಾಗೂ ರಂಗಭೂಮಿ ಕಲಾವಿದರಾದ ಚಿದಾನಂದಪ್ಪ ಹಾಗೂ ಲೋಹಿತ ಅವರು ಮನೆಯ‌ ಮುಂದೆ ಗುಂಡಿ ತೆಗೆದು ಪೋಟೊ ಹಾಕಿದರು ತಂಡದಿಂದ ಗಿಡ ನೆಟ್ಟು ಪರಿಸರ ದಿನಾಚರಣೆಯನ್ನು ಪ್ರಾರಂಭಗೊಳಿಸಲಾಯಿತು.
ಈ ವೇಳೆಯಲ್ಲಿ ಗ್ರಾಮದ ಹಿರಿಯರಾದ ರಂಗಕಲಾವಿದರಾದ ಚಿದಾನಂದಪ್ಪ,ಲೋಹಿತ.ಇ,ಶಕುಂತಲಮ್ಮ ತಂಡದ ಸದಸ್ಯರಾದ ರಾಘವೇಂದ್ರ ರಾಠೋಡ,ಮಂಜು ವಾಲಿಕಾರ,ಹನುಮೇಶ ಇತರರು ಭಾಗಿ ಇದ್ದರು.

ವರದಿ-ಹನುಮೇಶ ಭಾವಿಕಟ್ಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ